ಆ್ಯಪ್ನಗರ

ಚಾಮರಾಜನಗರ: ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಪಡೆಯಲು ಫೆ.24 ಕೊನೇ ದಿನ

ಚಾಮರಾಜನಗರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌-19 ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಫೆ. 24ರ ಒಳಗೆ ಎಲ್ಲಾ ಆರೋಗ್ಯ ಕಾರ‍್ಯಕರ್ತರು, ಆಶಾ ಕಾರ್ಯಕರ್ತೆಯರು, ಕೋವಿಡ್‌ ವಾರಿಯರ್ಸ್‌ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Vijaya Karnataka Web 22 Feb 2021, 7:42 pm
ಚಾಮರಾಜನಗರ: ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌-19 ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದ್ದು, ಫೆ. 24ರ ಒಳಗೆ ಎಲ್ಲಾ ಆರೋಗ್ಯ ಕಾರ‍್ಯಕರ್ತರು ಹಾಗೂ ಕೋವಿಡ್‌-19 ಮುಂಚೂಣಿ ಕಾರ‍್ಯಕರ್ತರು, ಆಶಾ ಕಾರ‍್ಯಕರ್ತರು ಸಂಬಂಧ ಪಟ್ಟ ಇಲಾಖಾ ಮುಖ್ಯಸ್ಥರು, ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚಿಸಿದ್ದಾರೆ.
Vijaya Karnataka Web covid-19 Vaccine
representative image


ಕೋವಿಡ್‌ ಲಸಿಕೆ ಪಡೆಯಲು ಈಗಾಗಲೇ ಜಿಲ್ಲೆಯಲ್ಲಿ 3775 ಮುಂಚೂಣಿ ಕಾರ‍್ಯಕರ್ತರು ನೋಂದಣಿಯಾಗಿದ್ದಾರೆ. ಈಗಾಗಲೇ 1092 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಈಗಾಗಲೇ ಕೋವಿಡ್‌ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿರುವ ಅಧಿಕಾರಿ, ನೌಕರರು, ಆರೋಗ್ಯ, ಆಶಾ ಕಾರ‍್ಯಕರ್ತೆಯರು ತಪ್ಪದೇ ನಿಗದಿಪಡಿಸಿರುವ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬೇಕು.

ಅಕಾಲಿಕ ಮಳೆ, ಕೋಟ್ಯಂತರ ರೂ. ನಷ್ಟ: ಚಾಮರಾಜನಗರದಲ್ಲಿ ಅಂದಾಜು ಮೂರು ಕೋಟಿ ರೂ. ಬೆಳೆನಾಶ!

ಯಾವುದೇ ಕೋವಿಡ್‌ ಮುಂಚೂಣಿ ಕಾರ‍್ಯಕರ್ತರು ಲಸಿಕೆ ಪಡೆಯುವಲ್ಲಿ ಹೊರಗೆ ಉಳಿಯದಂತೆ ಆಯಾ ಇಲಾಖೆಯ ಕಚೇರಿ ಮುಖ್ಯಸ್ಥರು ಕ್ರಮವಹಿಸಬೇಕು. ಎಲ್ಲಾ ವೃಂದದ ಅಧಿಕಾರಿಗಳು, ಸಿಬ್ಬಂದಿ ಅವರ ಹೆಸರುಗಳನ್ನು ಕೋವಿಡ್‌-19 ಪೋರ್ಟಲ್‌ ನಲ್ಲಿ ತಪ್ಪದೇ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ