ಆ್ಯಪ್ನಗರ

ಬೇಡಿಕೆ ಈಡೇರದಿದ್ದರೆ ವಿಧಾನಸೌಧಗೆ ಮುತ್ತಿಗೆ

ಕೇಂದ್ರ ಸರಕಾರ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಜಾರಿ ಮಾಡಿರುವ ಶೇ.7.5 ಮೀಸಲಾತಿಯನ್ನು ರಾಜ್ಯ ಸರಕಾರ ಯಥಾವತ್ತಾಗಿ ಜಾರಿ ಮಾಡದಿದ್ದರೆ ಸುವರ್ಣಾಸೌಧಗೆ ಮುತ್ತಿಗೆ ಹಾಕುವುದಾಗಿ ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ಮಹರ್ಷಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದ್ದಾರೆ.

Vijaya Karnataka 21 Jul 2019, 5:00 am
ಚಾಮರಾಜನಗರ: ಕೇಂದ್ರ ಸರಕಾರ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಜಾರಿ ಮಾಡಿರುವ ಶೇ.7.5 ಮೀಸಲಾತಿಯನ್ನು ರಾಜ್ಯ ಸರಕಾರ ಯಥಾವತ್ತಾಗಿ ಜಾರಿ ಮಾಡದಿದ್ದರೆ ಸುವರ್ಣಾಸೌಧಗೆ ಮುತ್ತಿಗೆ ಹಾಕುವುದಾಗಿ ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ಮಹರ್ಷಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದ್ದಾರೆ.
Vijaya Karnataka Web CHN-CHN20UM6


ನಗರದ ವಾಲ್ಮೀಕಿ ಭವನದಲ್ಲಿ ನಾಯಕ ಜನಾಂಗದ ವತಿಯಿಂದ ಶನಿವಾರ ನಡೆದ ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಏರಿಕೆಗೆ ಒತ್ತಾಯಿಸಿ ಹಾಗೂ ನಾಯಕ ಜನಾಂಗದ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ರಾಜನಹಳ್ಳಿಯಿಂದ ಬೆಂಗಳೂರುವರೆಗೆ ಶಾಂತಿ ರೀತಿಯಲ್ಲಿ ಪಾದಯಾತ್ರೆ, ಹೋರಾಟ ಹಮ್ಮಿಕೊಂಡಿದ್ದೇನೆ. ಆದರೂ ಸರಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ, ಸರಕಾರ ನಮ್ಮ ಮಂತ್ರಕ್ಕೆ ಬಗ್ಗುವ ರೀತಿ ಕಾಣುತ್ತಿಲ್ಲ. ಆದ್ದರಿಂದ ಕೂಡಲೇ ರಾಜ್ಯ ಸರಕಾರ ನಮ್ಮ ಬೇಡಿಕೆ ಈಡೇರಿಸಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದಕೊಂಡು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ದೇಶದ ಪ್ರತಿಯೊಂದು ಸಮುದಾಯ ಚಾರಿತ್ರಿಕ ಹಿನ್ನಲೆಯಲ್ಲಿ ಹೊಂದಿದೆ. ಆದರೆ ಪ್ರಾದೇಶಿಕವಾಗಿ ಹಲ ಹೆಸರುಗಳಿಂದ ಕರೆಯಲ್ಪಡುವ ವಾಲ್ಮೀಕಿ ಸಮಾಜ ರಾಜ್ಯದಲ್ಲಿ 50 ಲಕ್ಷ ಕ್ಕೂ ಜನಸಂಖ್ಯೆಯಲ್ಲಿದ್ದು, ದೇಶದಲ್ಲಿ 9 ಕೋಟಿ ಜನಸಂಖ್ಯೆ ಹೊಂದಿದೆ. ದೇಶದಲ್ಲಿ ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದುಹೋಗಿದೆ. ನಾಯಕ ಸಮುದಾಯ ಸಮಾಜಿಕ, ಆರ್ಥಿಕ, ಶೈಕ್ಷ ಣಿಕವಾಗಿ ಹಿಂದುಳಿದಿದೆ. ರಾಜಕೀಯವಾಗಿ 7.5 ಮೀಸಲಾತಿ ನೀಡಿದೆ. ಆದರೆ ಶೈಕ್ಷ ಣಿಕ, ಉದ್ಯೋಗದಲ್ಲೂ ಮೀಸಲಾತಿ ಹೆಚ್ಚಿಸಬೇಕಿದೆ ನಮ್ಮ ಹೋರಾಟದ ಯಶ್ವಸಿಗೆ ಪ್ರತಿಯೊಬ್ಬರ ಸಹಕಾರ, ಬೆಂಬಲ ಬಹಳ ಅವಶ್ಯಕವಾಗಿದೆ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನಾಯಕ ಸಮುದಾಯವನ್ನು ಶೈಕ್ಷ ಣಿಕ, ಆರ್ಥಿಕ, ರಾಜಕೀಯವಾಗಿ ಮೇಲೆ ತರುವ ಉದ್ದೇಶದಿಂದ ರಾಜ್ಯ ಸರಕಾರ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ.ಅಧ್ಯಕ್ಷ ಶಿವಮ್ಮ , ರಾಜನಹಳ್ಳಿ ವಾಲ್ಮೀಕಿ ಮಠದ ಧರ್ಮದರ್ಶಿ ಅಪ್ಪಣ, ಮುಖಂಡರಾದ ವೀರೇಂದ್ರಸಿಂಹ, , ರಾಜಣ್ಣ, ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜು, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ನಗರಸಭೆ ಮಾಜಿ ಅಧ್ಯಕ್ಷ ರಾದ ಸುರೇಶ್‌ನಾಯಕ, ಮಹದೇವನಾಯಕ, ತಾ.ಪಂ.ಮಾಜಿ ಅಧ್ಯಕ್ಷ ಎಚ್‌.ವಿ.ಚಂದ್ರು, ಚುಡಾ ಮಾಜಿ ಅಧ್ಯಕ್ಷ ಆರ್‌.ಸುಂದರ್‌, ಕಪಿನಿನಾಯಕ, ಜಿ.ಪಂ.ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ನಗರಸಭೆ ಸದಸ್ಯರಾದ ಶಿವರಾಜ್‌, ರಾಮಸಮುದ್ರ ಸುರೇಶ್‌, ಪ್ರಕಾಶ್‌, ಮುಖಂಡರಾದ ರಾಜುನಾಯಕ, ಮಾಧುನಾಯಕ, ತಿಗಣಾರೆ ಕಾಳನಾಯಕ, ಗುಂಡ್ಲುಪೇಟೆ ಮಲ್ಲೇಶ್‌, ಸುರೇಶ್‌ನಾಗ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ