ಗುಂಡ್ಲುಪೇಟೆ (ಚಾಮರಾಜನಗರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 30 ರಂದು ನಡೆಯಲಿರುವ ಭಾರತ್ ಐಕ್ಯತಾ ಪಾದಯಾತ್ರೆಯ ಅಂತಿಮ ಹಂತದ ಸಿದ್ಧತೆಯನ್ನು ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪರಿಶೀಲಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹಾಗೂ ಇತರ ನಾಯಕರೊಂದಿಗೆ ಆಗಮಿಸಿದ ಅವರು, ಗುಂಡ್ಲುಪೇಟೆ ತಾಲೂಕಿನ ಬೇಗೂರು, ಪಟ್ಟಣದ ಹೊರವಲಯದ ಶನೇಶ್ಚರ ಸ್ವಾಮಿ ದೇವಾಲಯದ ಬಳಿ ಖಾಸಗಿಯವರ ಜಮೀನಿನಲ್ಲಿ ಊಟ ತಯಾರಿ ಮತ್ತು ಬಡಿಸಲು ಮಾಡಿಕೊಂಡಿರುವ ವ್ಯವಸ್ಥೆಗಳು, ಡಾ. ಬಿ. ಆರ್. ಅಂಬೇಡ್ಕರ್ ಭವನದ ಮುಂಭಾಗದ ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆ ಪರಿಶೀಲನೆ ನಡೆಸಿದರು. ಪಟ್ಟಣದ ಜೆಎಸ್ಸೆಸ್ ಅನುಭವ ಮಂಟಪದಲ್ಲಿ ತಿಂಡಿ - ಊಟದ ವ್ಯವಸ್ಥೆಗೆ ನಡೆಸುತ್ತಿರುವ ತಯಾರಿ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
'ಭಾರತ್ ಜೋಡೋ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಜನರಿಗೆ ಊಟವನ್ನು ಸಮರ್ಪಕವಾಗಿ ಒದಗಿಸಬೇಕು. ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು' ಎಂದು ಡಿ. ಕೆ. ಶಿವಕುಮಾರ್ ಸೂಚನೆ ನೀಡಿದರು.
'ರಾಜ್ಯದ ಎಲ್ಲಾ ನಾಯಕರು, ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಬಿಸಿಲ ಸಮಸ್ಯೆ ಆಗುತ್ತೆ. ಬೆಳಗ್ಗೆ 9.30ರ ಒಳಗೆ ಕಾರ್ಯಕ್ರಮ ಮುಗಿಯಬೇಕು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಬೆಳಗ್ಗೆ 8 ಗಂಟೆ ಸಮಯಕ್ಕೆ ಅಂಬೇಡ್ಕರ್ ಭವನದಲ್ಲಿ ಇರಬೇಕು. ಬೆಳಗ್ಗೆ ಟ್ರಾಫಿಕ್ ಸಮಸ್ಯೆ ಇರುತ್ತದೆ. ಆದ್ದರಿಂದ ಕಾರ್ಯಕರ್ತರು ಬೇಗ ಬನ್ನಿ' ಎಂದು ಮನವಿ ಮಾಡಿದರು.
ದಾಳಿಗೆ ತಲೆಕೆಡಿಸಿಕೊಳ್ಳಲ್ಲ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್, 'ಇಡಿ, ಲೋಕಾಯುಕ್ತ ದಾಳಿ ಯಾವುದನ್ನಾದರೂ ಮಾಡಲಿ. ತಪ್ಪು ಮಾಡಿರುವವರು ತಗುಲಿ ಹಾಕಿಕೊಳ್ತಾರೆ. ಸದ್ಯ ದೇಶದ ಜನರನ್ನು ಒಗ್ಗೂಡಿಸುವುದು, ಉದ್ಯೋಗ ಸೃಷ್ಟಿ, ರೈತನಿಗೆ ಸಮಾನತೆಯ ಶಕ್ತಿ, ದೃಢವಾದ ಬದುಕು ಒದಗಿಸುವುದು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಇಷ್ಟೇ ನಮ್ಮ ಮುಂದಿರುವ ಗುರಿ. ಹೀಗಾಗಿ ಅವಮಾನ, ನಿಂದನೆ ಇತರೆ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು.
ಐಕ್ಯತಾ ಯಾತ್ರೆ: ವಾಹನಗಳ ಸಂಚಾರಕ್ಕೆ ಮಾರ್ಗ ಬದಲು - ಜಿಲ್ಲಾಧಿಕಾರಿ ಆದೇಶ
ಭಾರತ ಐಕ್ಯತಾ ಪಾದಯಾತ್ರೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ರಾಜ್ಯಕ್ಕೆ ಬರುವ ಮತ್ತು ಹೋಗುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಮಾರ್ಗ-1: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆ ಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗಲಿರುವ ವಾಹನಗಳನ್ನು ಗುಂಡ್ಲು ಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಗ್ಗಳದ ಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ - ಹೊಂಗಹಳ್ಳಿ - ಮೂಕಹಳ್ಳಿ - ಮುಂಟಿಪುರ - ಬರಗಿ ಮಾರ್ಗವಾಗಿ ಚಲಿಸಿ, ಬೇಗೂರು ಠಾಣಾ ಸರಹದ್ದಿನ ದೇಶಿಪುರ ಕಾಲೋನಿ ಕ್ರಾಸ್ - ದೇಶಿಪುರ - ಆಲತ್ತೂರು - ಹಸಗೂಲಿ ಮಾರ್ಗವಾಗಿ ಗರಗನಹಳ್ಳಿ ಗೇಟ್ ಗೆ ಬಂದು ಮೈಸೂರಿಗೆ ತೆರಳಬೇಕು.
ಮಾರ್ಗ-2: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆ ಹೊಳೆ ಮಾರ್ಗವಾಗಿ ಊಟಿ ಕಡೆಗೆ ಹೋಗಲಿರುವ ಮತ್ತು ಊಟಿಯಿಂದ ಸುಲ್ತಾನ್ ಬತ್ತೇರಿಗೆ ಹೋಗಲಿರುವ ವಾಹನಗಳನ್ನು ಗುಂಡ್ಲು ಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಬೇರಂಬಾಡಿ - ಬೀಚನಹಳ್ಳಿ - ಲಕ್ಕಿಪುರ - ಗೋಪಲಾಪುರ - ಕಲುಣಗಳ್ಳಿ - ಕಳ್ಳಿಪುರ - ದೇವರಹಳ್ಳಿ - ಹಂಗಳ ಮಾರ್ಗವಾಗಿ ಊಟಿಗೆ ಮತ್ತು ಕೇರಳದ ಕಡೆಗೆ ತೆರಳಬೇಕು.
ಮಾರ್ಗ-3: ಊಟಿ ಕಡೆಯಿಂದ ಮೈಸೂರಿಗೆ ಸಂಚರಿಸಲಿರುವ ವಾಹನಗಳು ಹಂಗಳ - ಹಂಗಳಪುರ - ಶಿವಪುರ - ಕೋಡಹಳ್ಳಿ - ಅಣ್ಣೂರು ಕೇರಿ ಮಾರ್ಗ ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್ಗೆ ಬಂದು ಚಾಮರಾಜನಗರ ರಸ್ತೆಯ ಮಾರ್ಗವಾಗಿ ಮೈಸೂರಿಗೆ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದ್ಯ ಮಾರಾಟ ನಿಷೇಧ
ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಸೆಪ್ಟೆಂಬರ್ 29 ರ ಮಧ್ಯರಾತ್ರಿಯಿಂದ ಅಕ್ಟೋಬರ್ 1 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಹಾಗೂ ಇತರ ನಾಯಕರೊಂದಿಗೆ ಆಗಮಿಸಿದ ಅವರು, ಗುಂಡ್ಲುಪೇಟೆ ತಾಲೂಕಿನ ಬೇಗೂರು, ಪಟ್ಟಣದ ಹೊರವಲಯದ ಶನೇಶ್ಚರ ಸ್ವಾಮಿ ದೇವಾಲಯದ ಬಳಿ ಖಾಸಗಿಯವರ ಜಮೀನಿನಲ್ಲಿ ಊಟ ತಯಾರಿ ಮತ್ತು ಬಡಿಸಲು ಮಾಡಿಕೊಂಡಿರುವ ವ್ಯವಸ್ಥೆಗಳು, ಡಾ. ಬಿ. ಆರ್. ಅಂಬೇಡ್ಕರ್ ಭವನದ ಮುಂಭಾಗದ ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆ ಪರಿಶೀಲನೆ ನಡೆಸಿದರು. ಪಟ್ಟಣದ ಜೆಎಸ್ಸೆಸ್ ಅನುಭವ ಮಂಟಪದಲ್ಲಿ ತಿಂಡಿ - ಊಟದ ವ್ಯವಸ್ಥೆಗೆ ನಡೆಸುತ್ತಿರುವ ತಯಾರಿ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
'ಭಾರತ್ ಜೋಡೋ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ಜನರಿಗೆ ಊಟವನ್ನು ಸಮರ್ಪಕವಾಗಿ ಒದಗಿಸಬೇಕು. ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು' ಎಂದು ಡಿ. ಕೆ. ಶಿವಕುಮಾರ್ ಸೂಚನೆ ನೀಡಿದರು.
'ರಾಜ್ಯದ ಎಲ್ಲಾ ನಾಯಕರು, ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಬಿಸಿಲ ಸಮಸ್ಯೆ ಆಗುತ್ತೆ. ಬೆಳಗ್ಗೆ 9.30ರ ಒಳಗೆ ಕಾರ್ಯಕ್ರಮ ಮುಗಿಯಬೇಕು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಬೆಳಗ್ಗೆ 8 ಗಂಟೆ ಸಮಯಕ್ಕೆ ಅಂಬೇಡ್ಕರ್ ಭವನದಲ್ಲಿ ಇರಬೇಕು. ಬೆಳಗ್ಗೆ ಟ್ರಾಫಿಕ್ ಸಮಸ್ಯೆ ಇರುತ್ತದೆ. ಆದ್ದರಿಂದ ಕಾರ್ಯಕರ್ತರು ಬೇಗ ಬನ್ನಿ' ಎಂದು ಮನವಿ ಮಾಡಿದರು.
ದಾಳಿಗೆ ತಲೆಕೆಡಿಸಿಕೊಳ್ಳಲ್ಲ: ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ. ಕೆ. ಶಿವಕುಮಾರ್, 'ಇಡಿ, ಲೋಕಾಯುಕ್ತ ದಾಳಿ ಯಾವುದನ್ನಾದರೂ ಮಾಡಲಿ. ತಪ್ಪು ಮಾಡಿರುವವರು ತಗುಲಿ ಹಾಕಿಕೊಳ್ತಾರೆ. ಸದ್ಯ ದೇಶದ ಜನರನ್ನು ಒಗ್ಗೂಡಿಸುವುದು, ಉದ್ಯೋಗ ಸೃಷ್ಟಿ, ರೈತನಿಗೆ ಸಮಾನತೆಯ ಶಕ್ತಿ, ದೃಢವಾದ ಬದುಕು ಒದಗಿಸುವುದು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಇಷ್ಟೇ ನಮ್ಮ ಮುಂದಿರುವ ಗುರಿ. ಹೀಗಾಗಿ ಅವಮಾನ, ನಿಂದನೆ ಇತರೆ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು.
ಐಕ್ಯತಾ ಯಾತ್ರೆ: ವಾಹನಗಳ ಸಂಚಾರಕ್ಕೆ ಮಾರ್ಗ ಬದಲು - ಜಿಲ್ಲಾಧಿಕಾರಿ ಆದೇಶ
ಭಾರತ ಐಕ್ಯತಾ ಪಾದಯಾತ್ರೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ರಾಜ್ಯಕ್ಕೆ ಬರುವ ಮತ್ತು ಹೋಗುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಮಾರ್ಗ-1: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆ ಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗಲಿರುವ ವಾಹನಗಳನ್ನು ಗುಂಡ್ಲು ಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಗ್ಗಳದ ಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ - ಹೊಂಗಹಳ್ಳಿ - ಮೂಕಹಳ್ಳಿ - ಮುಂಟಿಪುರ - ಬರಗಿ ಮಾರ್ಗವಾಗಿ ಚಲಿಸಿ, ಬೇಗೂರು ಠಾಣಾ ಸರಹದ್ದಿನ ದೇಶಿಪುರ ಕಾಲೋನಿ ಕ್ರಾಸ್ - ದೇಶಿಪುರ - ಆಲತ್ತೂರು - ಹಸಗೂಲಿ ಮಾರ್ಗವಾಗಿ ಗರಗನಹಳ್ಳಿ ಗೇಟ್ ಗೆ ಬಂದು ಮೈಸೂರಿಗೆ ತೆರಳಬೇಕು.
ಮಾರ್ಗ-2: ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆ ಹೊಳೆ ಮಾರ್ಗವಾಗಿ ಊಟಿ ಕಡೆಗೆ ಹೋಗಲಿರುವ ಮತ್ತು ಊಟಿಯಿಂದ ಸುಲ್ತಾನ್ ಬತ್ತೇರಿಗೆ ಹೋಗಲಿರುವ ವಾಹನಗಳನ್ನು ಗುಂಡ್ಲು ಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಬೇರಂಬಾಡಿ - ಬೀಚನಹಳ್ಳಿ - ಲಕ್ಕಿಪುರ - ಗೋಪಲಾಪುರ - ಕಲುಣಗಳ್ಳಿ - ಕಳ್ಳಿಪುರ - ದೇವರಹಳ್ಳಿ - ಹಂಗಳ ಮಾರ್ಗವಾಗಿ ಊಟಿಗೆ ಮತ್ತು ಕೇರಳದ ಕಡೆಗೆ ತೆರಳಬೇಕು.
ಮಾರ್ಗ-3: ಊಟಿ ಕಡೆಯಿಂದ ಮೈಸೂರಿಗೆ ಸಂಚರಿಸಲಿರುವ ವಾಹನಗಳು ಹಂಗಳ - ಹಂಗಳಪುರ - ಶಿವಪುರ - ಕೋಡಹಳ್ಳಿ - ಅಣ್ಣೂರು ಕೇರಿ ಮಾರ್ಗ ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್ಗೆ ಬಂದು ಚಾಮರಾಜನಗರ ರಸ್ತೆಯ ಮಾರ್ಗವಾಗಿ ಮೈಸೂರಿಗೆ ತೆರಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದ್ಯ ಮಾರಾಟ ನಿಷೇಧ
ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಸೆಪ್ಟೆಂಬರ್ 29 ರ ಮಧ್ಯರಾತ್ರಿಯಿಂದ ಅಕ್ಟೋಬರ್ 1 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಸೂಚಿತ ಅವಧಿಯಲ್ಲಿ ಮದ್ಯ ಮಾರಾಟ, ಶೇಖರಣೆ, ಸಾಗಾಣಿಕೆ ಅಕ್ಷಮ್ಯ ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.