ಆ್ಯಪ್ನಗರ

ಪ್ರವಾಹ ಆತಂಕ: ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ

ಕಬಿನಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ 1.25ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದು, ತಾಲೂಕಿನ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಆತಂಕ ಎದುರಾಗಿದೆ. ಈ ನಡುವೆ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

Vijaya Karnataka 10 Aug 2019, 5:00 am
ಕೊಳ್ಳೇಗಾಲ: ಕಬಿನಿ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ 1.25ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದು, ತಾಲೂಕಿನ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಆತಂಕ ಎದುರಾಗಿದೆ. ಈ ನಡುವೆ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
Vijaya Karnataka Web CHN-CHN9KGL4


ಪ್ರವಾಹದಿಂದ ಎದುರಾಗುವ ಸವಾಲನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆ ಭಾಗದ ಜನತೆಗೆ ನೆರವಾಗಲು ನಿರಂತರ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ ತೆರೆಯಲಾಗಿದೆ.

ಜಿಲ್ಲಾಧಿಕಾರಿ ಭೇಟಿ: ಕಾವೇರಿ ನದಿ ತೀರದಲ್ಲಿರುವ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹರಳೆ, ಹಳೆ ಅಣಗಳ್ಳಿ, ಸರಗೂರು, ಯಡಕುರಿಯ ಮತ್ತು ಸತ್ತೇಗಾಲ ಗ್ರಾಮಗಳ ತಗ್ಗು ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೇ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು: ನದಿ ಪಾತ್ರಗಳಲ್ಲಿ ವಾಸಿಸುವ ಜನರು ನದಿಯಲ್ಲಿ ಬಟ್ಟೆ ಹೊಗೆಯುವುದು, ಸ್ನಾನ ಮಾಡುವುದು, ಜಾನುವಾರುಗಳನ್ನು ತೊಳೆಯುವುದು, ಈಜುವುದು ಇನ್ನಿತರ ಚಟುವಟಕೆಗಳನ್ನು ಮಾಡದಂತೆ ತಿಳಿಸಲಾಗಿದೆ. ಪ್ರವಾಹದಿಂದ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಲು ಗ್ರಾಮಗಳಿಗೆ ಅಗಮಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸುವುದು ಹಾಗೂ ನದಿ ಜಲಪಾತ ವೀಕ್ಷ ಣೆಗೆ ಆಗಮಿಸುವ ಪ್ರವಾಸಿಗರು ನದಿಗೆ ಇಳಿಯದಂತೆ ಜಲಪಾತದ ಬಳಿ ತೆರಳದಂತೆ ಸುರಕ್ಷಿತವಾಗಿರಲು ತಿಳಿಸಲಾಗಿದೆ.

ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ 24*7 ಅವಧಿಯ ಕಂಟ್ರೋಲ್‌ ರೂಂ ತೆರೆಯಲಾಗಿದ್ದು 08224-252042ಕ್ಕೆ ಕರೆ ಮಾಡಿ ಮಾಹಿತಿ ಹಾಗೂ ನೆರವು ಪಡೆಯಬಹದಾಗಿದೆ.

ಕಳೆದ ವರ್ಷವೂ ಪ್ರವಾಹ

ಕಳೆದ ವರ್ಷ ಇದೇ ಆಗಸ್ಟ್‌ನಲ್ಲಿ ಪ್ರವಾಹ ಎದುರಾಗಿ ನದಿ ಪಾತ್ರದ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. 2018 ಆ. 11ರಲ್ಲಿಕಾವೇರಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿ ಕಬಿನಿ ಜಲಾಶಯದಿಂದ 80 ಲಕ್ಷ , ಕೆಆರ್‌ಎಸ್‌ ಜಲಾಶಯದಿಂದ 40 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿತ್ತು.

ಆ. 12 ರಂದು ನೀರಿನ ಪ್ರಮಾಣ 1.50 ಲಕ್ಷ ಕ್ಕೆ ಏರಿಕೆಯಾಗಿತ್ತು. 14ರಂದು 1.70 ಲಕ್ಷ , 15 ರಂದು 2 ಲಕ್ಷ , 15ರಂದು 2.50 ಲಕ್ಷ ಕ್ಕೆ ಏರಿಕೆಯಾಗಿತ್ತು.

2 ಲಕ್ಷ ಕ್ಯೂಸೆಕ್‌ ನಿರು ಜಲಾಶಗಳಿಂದ ನದಿಗೆ ಹರಿಯ ಬಿಟ್ಟಾಗ ಹಳೆ ಹಂಪಾಪುರ, ದಾಸನಪುರ ಮತ್ತು ಮುಳ್ಳೂರು ಗ್ರಾಮದ ನದಿ ಪಾತ್ರದ ತಗ್ಗು ಪ್ರದೇಶಕ್ಕೆ ನೀತು ನುಗ್ಗಿ ಜನ ಜಾನುವಾರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. 2.50 ಲಕ್ಷ ಕ್ಕೆ ಏರಿಕೆಯಾಗುತ್ತಿದ್ದಂತೆ ಮುಳ್ಳೂರು, ಹಂಪಾಪುರ, ದಾಸನಪುರ, ಯಡಕುರಿಯ ಗ್ರಾಮಗಳು ಜಲಾವೃತಗೊಂಡು ಸಂಪರ್ಕ ಕಳೆದುಕೊಂಡಿದ್ದವು.

ಪರಿಣಾಮ ಪಟ್ಟಣದಲ್ಲಿ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಕಳೆದ ವರ್ಷ ಪ್ರವಾಹದಲ್ಲಿ ಶಿವನಸಮುದ್ರದ ವೆಸ್ಲಿ ಸೇತುವೆ ಕುಸಿದು, ಕೊಚ್ಚಿ ಹೋಗಿತ್ತು.

ಪ್ರಸ್ತುತು ಕಬಿನಿ ನದಿಯಿಂದಲೆ 1.25 ಲಕ್ಷ ಕ್ಯೂಸೆಕ್‌ ನಿರು ಬಿಟ್ಟಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಕೆಆರ್‌ಎಸ್‌ನಿಂದ ನೀರು ಬಿಟ್ಟರೆ ಮತ್ತೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ.


ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿಯವರು ಹಾಗೂ ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಈಗ 1.25ಲಕ್ಷ ಕ್ಯೂಸೆಕ್‌ ನೀರನ್ನು ಕಬಿನಿ ಜಲಾಶಯದಿಂದ ಬಿಟ್ಟಿದ್ದಾರೆ. ಅದು ಶನಿವಾರ ಸಂಜೆ ತಲುಪಲಿದೆ. 2 ಲಕ್ಷ ಕ್ಯೂಸೆಕ್‌ ಗೂ ಅಧಿಕ ನೀರು ಬಿಟ್ಟರೆ ಸಮಸ್ಯೆಯಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಂತೆ ನದಿ ಪಾತ್ರದ ಜನರಿಗೆ ನೆರವಾಗಲು ಕಂಟ್ರೋಲ್‌ ರೂಂ ತೆರೆಯಲಾಗಿದೆ.

-ನಿಖಿತಾ ಚಿನ್ನಸ್ವಾಮಿ, ಉಪವಿಭಾಗಾಧಿಕಾರಿ, ಕೊಳ್ಳೇಗಾಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ