ಆ್ಯಪ್ನಗರ

ಆಹಾರ ಪದಾರ್ಥ ದುರುಪಯೋಗ: ದೂರು

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಆಹಾರ ಪದಾರ್ಥಗಳ ದುರುಪಯೋಗ ಸಂಬಂಧ ಸಹಕಾರ ಸಂಘದ ನೌಕರನ ವಿರುದ್ಧ ದೂರು ದಾಖಲಾಗಿದೆ.

Vijaya Karnataka 27 Sep 2018, 5:00 am
ಕೊಳ್ಳೇಗಾಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಆಹಾರ ಪದಾರ್ಥಗಳ ದುರುಪಯೋಗ ಸಂಬಂಧ ಸಹಕಾರ ಸಂಘದ ನೌಕರನ ವಿರುದ್ಧ ದೂರು ದಾಖಲಾಗಿದೆ.
Vijaya Karnataka Web food substance abuse complaint
ಆಹಾರ ಪದಾರ್ಥ ದುರುಪಯೋಗ: ದೂರು


ಕೊಳ್ಳೇಗಾಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೌಕರ ಸಿದ್ದರಾಜು ವಿರುದ್ಧ ಆಹಾರ ಇಲಾಖೆ ಉಪ ನಿರ್ದೇಶಕ ರಾಚಪ್ಪ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ. ಕಾವೇರಿ ಅವರ ಆದೇಶದ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ರಾಚಪ್ಪ ನೇತೃತ್ವದ ತಂಡ ತನಿಖೆ ನಡೆಸಿದ್ದು, 2261.58 ಕ್ವಿಂಟಾಲ್‌ ಅಕ್ಕಿ, 234.57ಕ್ವಿಂಟಾಲ್‌ ತೊಗರಿಬೇಳೆ, 530.17ಕ್ವಿಂಟಾಲ್‌ ಸಕ್ಕರೆ, 15,830 ಲೀಟರ್‌ ತಾಳೆ ಎಣ್ಣೆ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ