ಆ್ಯಪ್ನಗರ

ಕೊಳ್ಳೇಗಾಲದ ನಾಯ್ಡು ಗಾರ್ಡನ್ ನಲ್ಲಿ ಉಚಿತ ಮೂಳೆ ತಪಾಸಣೆ ಶಿಬಿರ

ಕೊಳ್ಳೇಗಾಲ ನಗರದಲ್ಲಿರುವ ನಾಯ್ಡು ಗಾರ್ಡನ್ ಲೇಔಟ್ ನಲ್ಲಿ ಪಿ.ಕೆ. ವೇಣುಗೋಪಾಲ್ ನಾಯ್ಡು ಮತ್ತು ರಾಜಮ್ಮ ನಾಯ್ಡು ಅವರ ಸ್ಮರಣಾರ್ಥ ಸಾರ್ವಜನಿಕರಿಗೆ ಉಚಿತ ಮೂಳೆ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಮಾಜಿ ಶಾಸಕ ಎಸ್. ಜಯಣ್ಣ ಅವರು ಈ ಶಿಬಿರವನ್ನು ಉದ್ಘಾಟಿಸಿದ್ದಾರೆ. ಇಂಥ ಶಿಬಿರಗಳಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲದ ವೈದ್ಯರಾದ ಡಾ. ಜಯವರ್ದನ್ ಅವರ ನೇತೃತ್ವದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಲಾಗುತ್ತಿದೆ.

Edited byಚೇತನ್ ಓ.ಆರ್. | Vijaya Karnataka Web 18 Feb 2023, 7:25 am

ಹೈಲೈಟ್ಸ್‌:

  • ಕೊಳ್ಳೇಗಾಲ ನಗರದಲ್ಲಿರುವ ನಾಯ್ಡು ಗಾರ್ಡನ್ ಲೇಔಟ್ ನಲ್ಲಿ ಮೂಳೆ ತಪಾಸಣೆ ಶಿಬಿರ.
  • ಮಾಜಿ ಶಾಸಕ ಎಸ್. ಜಯಣ್ಣ ಅವರಿಂದ ಶಿಬಿರಕ್ಕೆ ಚಾಲನೆ.
  • ಇಂಥ ಶಿಬಿರಗಳಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ಎಂದ ಶಾಸಕರು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web free bone testing camp organized in naidu layout in kollegal
ಕೊಳ್ಳೇಗಾಲ: ಪಟ್ಟಣದ ನಾಯ್ಡು ಗಾರ್ಡನ್‌ ಬಡಾವಣೆಯಲ್ಲಿ ಪಿ.ಕೆ ವೇಣುಗೋಪಾಲ್‌ ನಾಯ್ಡು ಮತ್ತು ರಾಜಮ್ಮನಾಯ್ಡು ಸ್ಮರಣಾರ್ಥ ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಮಾಜಿ ಶಾಸಕ ಎಸ್. ಜಯಣ್ಣ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಸುಧಾರಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.
'' ಪ್ರಸ್ತುತ ಪ್ರತಿಯೊಬ್ಬರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ಒಳಗಾಗಿರುವುದನ್ನು ಕಾಣುತ್ತೇವೆ. ಒತ್ತಡ ಹಾಗೂ ಆಹಾರ ಕ್ರಮ ಇದಕ್ಕೆ ಪ್ರಮುಖ ಕಾರಣ. ಮೂಳೆ ಸಂಬಂಧಿತ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ನಾಯ್ಡು ಕುಟುಂಬ ಶಿಬಿರ ಆಯೋಜಿಸಿರು ವುದು ಉತ್ತಮ ಬೆಳವಣಿಗೆ'' ಎಂದು ಜಯಣ್ಣ ಹೇಳಿದರು. ಮಾಜಿ ಶಾಸಕ ಎಸ್‌.ಬಾಲರಾಜ್‌ ಮಾತನಾಡಿ'' ಚೆನ್ನಾಗಿದ್ದಾಗ ನಮ್ಮ ದೇಹದ ಆರೋಗ್ಯದ ಕಡೆ ಗಮನ ಇರುವುದಿಲ್ಲ, ಆರೋಗ್ಯ ಕೆಟ್ಟಾಗ ಕಾಳಜಿ ವಹಿಸುತ್ತೇವೆ. ಆರೋಗ್ಯ ಕೆಡುವ ಮುನ್ನ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮೂಳೆ ಸಂಬಂಧಿತ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಇದಕ್ಕೆ ಕಾರಣ ಪ್ರಸ್ತುತ ಜೀವನ ಶೈಲಿ ಹಾಗೂ ಆಹಾರ ಕ್ರಮ ಕಾರಣ'' ಎಂದರು.

ದೊಂಬರ ಕಟ್ಟೆ ಕೆರೆ ಕಲುಷಿತ: ಕೆಟ್ಟ ನೀರು ತೆರವಿಗೆ ಜನರ ಒತ್ತಾಯ
ನಾರಾಯಣ ಹೃದಯಾಲಯದ ಡಾ.ಜಯವರ್ಧನ್‌ ನೇತೃತ್ವದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿದರು. ಸಮೃದ್ಧಿ ಫೌಂಡೇಶನ್‌ನ ಗಣೇಶ್‌ ಬಾಬು ಸಾಥ್‌ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ಶಾಂತರಾಜು, ಸದಸ್ಯರಾದ ಪುಷ್ಪಲತಾ ಶಾಂತರಾಜು, ಬಸ್ತೀಪುರ ಶಾಂತರಾಜು, ಸುಮಾ ಸುಬ್ಬಣ್ಣ, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಆಯೋಜಕರಾದ ಪಿ.ವಿ. ವರದರಾಜು ನಾಯ್ಡು, ಮಹಿಳಾ ಕಾಂಗ್ರೆಸ್‌ ಟೌನ್‌ ಅಧ್ಯಕ್ಷೆ ದೇವಿಕಾ ಮುಂತಾದವರಿದ್ದವರು. ಪಟ್ಟಣದ ಸೇರಿದಂತೆ ತಾಲೂಕಿನ ನಾನಾ ಕಡೆಗಳಿಂದ ಬಂದಿದ್ದ ನೂರಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ತಪಾಸಣೆಗೊಳಗಾದವರಿಗೆ ಡಾ. ಜಯವರ್ಧನ್‌ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ