ಕೊಳ್ಳೇಗಾಲ: ಪಟ್ಟಣದ ನಾಯ್ಡು ಗಾರ್ಡನ್ ಬಡಾವಣೆಯಲ್ಲಿ ಪಿ.ಕೆ ವೇಣುಗೋಪಾಲ್ ನಾಯ್ಡು ಮತ್ತು ರಾಜಮ್ಮನಾಯ್ಡು ಸ್ಮರಣಾರ್ಥ ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಮಾಜಿ ಶಾಸಕ ಎಸ್. ಜಯಣ್ಣ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಸುಧಾರಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು. '' ಪ್ರಸ್ತುತ ಪ್ರತಿಯೊಬ್ಬರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ಒಳಗಾಗಿರುವುದನ್ನು ಕಾಣುತ್ತೇವೆ. ಒತ್ತಡ ಹಾಗೂ ಆಹಾರ ಕ್ರಮ ಇದಕ್ಕೆ ಪ್ರಮುಖ ಕಾರಣ. ಮೂಳೆ ಸಂಬಂಧಿತ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ನಾಯ್ಡು ಕುಟುಂಬ ಶಿಬಿರ ಆಯೋಜಿಸಿರು ವುದು ಉತ್ತಮ ಬೆಳವಣಿಗೆ'' ಎಂದು ಜಯಣ್ಣ ಹೇಳಿದರು. ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ'' ಚೆನ್ನಾಗಿದ್ದಾಗ ನಮ್ಮ ದೇಹದ ಆರೋಗ್ಯದ ಕಡೆ ಗಮನ ಇರುವುದಿಲ್ಲ, ಆರೋಗ್ಯ ಕೆಟ್ಟಾಗ ಕಾಳಜಿ ವಹಿಸುತ್ತೇವೆ. ಆರೋಗ್ಯ ಕೆಡುವ ಮುನ್ನ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮೂಳೆ ಸಂಬಂಧಿತ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ಇದಕ್ಕೆ ಕಾರಣ ಪ್ರಸ್ತುತ ಜೀವನ ಶೈಲಿ ಹಾಗೂ ಆಹಾರ ಕ್ರಮ ಕಾರಣ'' ಎಂದರು.
ನಾರಾಯಣ ಹೃದಯಾಲಯದ ಡಾ.ಜಯವರ್ಧನ್ ನೇತೃತ್ವದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿದರು. ಸಮೃದ್ಧಿ ಫೌಂಡೇಶನ್ನ ಗಣೇಶ್ ಬಾಬು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ಶಾಂತರಾಜು, ಸದಸ್ಯರಾದ ಪುಷ್ಪಲತಾ ಶಾಂತರಾಜು, ಬಸ್ತೀಪುರ ಶಾಂತರಾಜು, ಸುಮಾ ಸುಬ್ಬಣ್ಣ, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಆಯೋಜಕರಾದ ಪಿ.ವಿ. ವರದರಾಜು ನಾಯ್ಡು, ಮಹಿಳಾ ಕಾಂಗ್ರೆಸ್ ಟೌನ್ ಅಧ್ಯಕ್ಷೆ ದೇವಿಕಾ ಮುಂತಾದವರಿದ್ದವರು. ಪಟ್ಟಣದ ಸೇರಿದಂತೆ ತಾಲೂಕಿನ ನಾನಾ ಕಡೆಗಳಿಂದ ಬಂದಿದ್ದ ನೂರಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ತಪಾಸಣೆಗೊಳಗಾದವರಿಗೆ ಡಾ. ಜಯವರ್ಧನ್ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ನಾರಾಯಣ ಹೃದಯಾಲಯದ ಡಾ.ಜಯವರ್ಧನ್ ನೇತೃತ್ವದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿದರು. ಸಮೃದ್ಧಿ ಫೌಂಡೇಶನ್ನ ಗಣೇಶ್ ಬಾಬು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ಶಾಂತರಾಜು, ಸದಸ್ಯರಾದ ಪುಷ್ಪಲತಾ ಶಾಂತರಾಜು, ಬಸ್ತೀಪುರ ಶಾಂತರಾಜು, ಸುಮಾ ಸುಬ್ಬಣ್ಣ, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಆಯೋಜಕರಾದ ಪಿ.ವಿ. ವರದರಾಜು ನಾಯ್ಡು, ಮಹಿಳಾ ಕಾಂಗ್ರೆಸ್ ಟೌನ್ ಅಧ್ಯಕ್ಷೆ ದೇವಿಕಾ ಮುಂತಾದವರಿದ್ದವರು. ಪಟ್ಟಣದ ಸೇರಿದಂತೆ ತಾಲೂಕಿನ ನಾನಾ ಕಡೆಗಳಿಂದ ಬಂದಿದ್ದ ನೂರಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ತಪಾಸಣೆಗೊಳಗಾದವರಿಗೆ ಡಾ. ಜಯವರ್ಧನ್ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಿದರು.