ಆ್ಯಪ್ನಗರ

ಕೊಳ್ಳೇಗಾಲದಲ್ಲಿ ಉಚಿತ ತಪಾಸಣ ಶಿಬಿರ

ಬದಲಾದ ಜೀವ ಶೈಲಿ ಹಾಗೂ ಒತ್ತಡ ಬದುಕಿನಿಂದಾಗಿ ಹೃದಯ ಸಂಬಂಧಿ ಕಾಯಲೆಗಳು ಹೆಚ್ಚಾಗುತ್ತಿದ್ದು , ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೈಸೂರು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಕೇಶವಮೂರ್ತಿ ಹೇಳಿದರು.

Vijaya Karnataka 14 May 2019, 5:00 am
ಕೊಳ್ಳೇಗಾಲ: ಬದಲಾದ ಜೀವ ಶೈಲಿ ಹಾಗೂ ಒತ್ತಡ ಬದುಕಿನಿಂದಾಗಿ ಹೃದಯ ಸಂಬಂಧಿ ಕಾಯಲೆಗಳು ಹೆಚ್ಚಾಗುತ್ತಿದ್ದು , ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೈಸೂರು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಕೇಶವಮೂರ್ತಿ ಹೇಳಿದರು.
Vijaya Karnataka Web free check camp at kollegal
ಕೊಳ್ಳೇಗಾಲದಲ್ಲಿ ಉಚಿತ ತಪಾಸಣ ಶಿಬಿರ


ಮೈಸೂರು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಟ್ಟಣದ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಲಯನ್ಸ್‌ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

''ಹೃದಯ ಸಮಸ್ಯೆ ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ಉಸಿರಾಟದ ಸಮಸ್ಯೆ, ಸೆಳೆತ, ಸುಸ್ತಾಗುವುದು ಇವೇ ಮುಂತಾದ ಲಕ್ಷ ಣಗಳು ಕಂಡು ಬಂದಲ್ಲಿ ತಕ್ಷ ಣ ವೈದ್ಯರ ಬಳಿ ತಪಾಸಣೆ ಮಾಡಿಸಿ ಕೊಂಡು ವೈದ್ಯರ ಸಲಹೆ ಪಾಲಿಸಿ. ಹೃದಯ ಸಂಬಂಧಿ ಕಾಯಿಲೆ ಎಂದಾಕ್ಷ ಣ ಭಯ ಪಡುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಕೊಬ್ಬಿನ ಅಂಶ ಹೆಚ್ಚಾಗದಂತೆ ತಡೆಯಲು ದೈಹಿಕ ಶ್ರಮ ಅಥವಾ ವ್ಯಾಯಾಮ ಮಾಡಬೇಕು. ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಪಡೆಯುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಲಯನ್ಸ್‌ ಸಂಸ್ಥೆ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು , ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಡಾ. ಶಿವರುದ್ರಸ್ವಾಮಿ ಮಾತನಾಡಿದರು. ಲಯನ್ಸ್‌ ಅಧ್ಯಕ್ಷ ಚೇತನ್‌ ಸಿ. ಉಪಾಧ್ಯಕ್ಷ ರಾದ ಡಾ, ಶ್ರೀಧರ್‌, ಲಯನ್‌ ಚೆನ್ನಮಾದೇಗೌಡ, ಸಿ.ಡಿ.ವೆಂಕಟೇಶ ಬಾಬು, ಎಸ್‌,ನಾಗರಾಜು, ಎಂ.ಎಸ್‌, ನಾಗರಾಜಪ್ಪ, ಎಚ್‌.ಜಿ.ಶಿವಲಿಂಗಸ್ವಾಮಿ, ನಾಗಬಸವಲಿಂಗಪ್ಪ, ವೀರೂಪಾಕ್ಷ , ಶ್ರೀನಿವಾಸಮೂರ್ತಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ