- ಮಡಹಳ್ಳಿ ಮಹೇಶ್
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ಸ್ಥಾಪನೆಯಾಗಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿಸುವರ್ಣ ಮಹೋತ್ಸವ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಬಂಡೀಪುರದಲ್ಲಿ 2023 ಜ.2 ಮತ್ತು 3ರಂದು ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರದ ಅರಣ್ಯ ಸಚಿವ ಭೂಪೇಂದ್ರ ಯಾದವ್ ಪಾಲ್ಗೊಳ್ಳುತ್ತಿದ್ದಾರೆ.
ಹುಲಿ ಯೋಜನೆ ಜಾರಿ, ಸಂರಕ್ಷಣೆ ಇನ್ನೂ ಹಲವು ವಿಷಯಗಳಲ್ಲಿ ಎನ್ಟಿಸಿಎ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮಹತ್ವದ ರಾಷ್ಟ್ರಮಟ್ಟದ ಪ್ರಾಧಿಕಾರದ ಸಭೆ ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಜ.3ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿರಾಷ್ಟ್ರದ ಹುಲಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ಮತ್ತು ತೀರ್ಮಾನಗಳಿಗೆ ವೇದಿಕೆಯಾಗುವ ಎನ್ಟಿಸಿಎ ಸಭೆಯನ್ನು ಉದ್ಯಾನದಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಸಲು ಕ್ರಮ ಕೈಗೊಂಡಿದ್ದಾರೆ.
ಭರದ ಸಿದ್ಧತೆಗಳು
ಅಮೂಲ್ಯ ಜೀವ ವೈವಿಧ್ಯ, ಅತಿಹೆಚ್ಚು ಹುಲಿ ಸಂತತಿ ಹೊಂದಿರುವುದು ಇನ್ನೂ ಹಲವು ಕಾರಣಗಳಿಗೆ ರಾಜ್ಯವಲ್ಲದೇ ದೇಶ, ವಿದೇಶದಲ್ಲಿಪ್ರಸಿದ್ಧಿ ಪಡೆದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುವರ್ಣ ಮಹೋತ್ಸವ ಆಚರಣೆ ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿಇಲಾಖೆ ಅಧಿಕಾರಿಗಳು ಸ್ವಚ್ಛತಾ ಕಾರ್ಯ, ಕಟ್ಟಡಗಳಿಗೆ ಸುಣ್ಣ ಬಳಿದು ಶೃಂಗರಿಸುವುದು, ಕಚೇರಿ, ವಸತಿ ಗೃಹ ಇತರೆ ಕಟ್ಟಡಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ಸೇರಿ ಇನ್ನೂ ಹಲವು ಕೆಲಸಗಳನ್ನು ಆದ್ಯತೆಯಲ್ಲಿ ಕೈಗೊಂಡಿದ್ದಾರೆ.
ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಿದ ಇಲಾಖೆ
ಸುವರ್ಣ ಮಹೋತ್ಸವ ಮತ್ತು ಎನ್ಟಿಸಿಎ ಸಭೆಗೆ ಕೇಂದ್ರದ ಅರಣ್ಯ ಸಚಿವರ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿಅವರೊಂದಿಗೆ ಬರುವ ಆಪ್ತ ಕಾರ್ಯದರ್ಶಿಗಳು, ಸಹಾಯಕರು, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಜ.2ರಂದು ತಂಗುವ ಹಿನ್ನೆಲೆಯಲ್ಲಿಉದ್ಯಾನದ ಎಲ್ಲಾಕಾಟೇಜ್ಗಳನ್ನು ಜ.2 ಮತ್ತು 3ರಂದು ಕಾಯ್ದಿರಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಇತಿಹಾಸ
ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಇತಿಹಾಸವನ್ನು ಮೆಲುಕು ಹಾಕಬೇಕಾಗುತ್ತದೆ. ಬ್ರಿಟಿಷ್ ರಾಜ್ ಇದ್ದ ಸಂದರ್ಭದಲ್ಲೇ ಅಂದರೆ 1898ರಲ್ಲಿಇದು ರಿಸವ್ರ್ ಫಾರೆಸ್ಟ್ ಆಗಿತ್ತು. ನಂತರ ಮೈಸೂರು ರಾಜ ಮನೆತನದವರ ಆಸಕ್ತಿ ಫಲವಾಗಿ 1931ರಲ್ಲಿ 90 ಚ.ಕಿ.ಮೀ. ವಿಸ್ತೀರ್ಣದ ಪ್ರದೇಶ ಗೇಮ್ ರಿಸರ್ವರ್ ಆಗಿ. 1941ರಲ್ಲಿ 800 ಚ.ಕಿ.ಮೀ ಪ್ರದೇಶ ವೇಣುಗೋಪಾಲಸ್ವಾಮಿ ವೈಲ್ಡ್ಲೈಫ್ ಪಾರ್ಕ್ ಆಯಿತು. 1973ರಲ್ಲಿ874.2 ಚ.ಕಿ.ಮೀ ಪ್ರದೇಶ ಬಂಡೀಪುರ ರಾಷ್ಟ್ರೀಯ ಉದ್ಯಾನವಾಗಿ ಘೋಷಣೆಯಾಯಿತು.
ಈ ಪೈಕಿ 690 ಚ.ಕಿ.ಮೀ ಟೈಗರ್ ರಿಸವ್ರ್ ಆಗಿದ್ದು, ಈಚೆಗೆ 1283,39 ಚ.ಕಿ.ಮೀ ಪ್ರದೇಶ ಹುಲಿ ಯೋಜನೆಗೆ ಸೇರಿತು. ಇದರಲ್ಲಿ872.24 ಕಿ.ಮೀ ಕೋರ್ಜೋನ್, 410.15 ಕಿ.ಮೀ ಬಫರ್ ಜೋನ್ ಆಗಿದೆ. ಟೂರಿಸಂಗೆ 82.ಕಿ.ಮೀ, ಆಡಳಿತ ಕಚೇರಿ ಸಲುವಾಗಿ 1.ಕಿ.ಮೀ ಮೀಸಲಿದೆ. ಉದ್ಯಾನದ ದಕ್ಷಿಣಕ್ಕೆ ತುಳುನಾಡಿನ ಮಧುಮಲೈ, ವಾಯುವ್ಯ ದಿಕ್ಕಿಗೆ ವೈನಾಡ್ ವೈಲ್ಡ್ ಲೈಫ್ ಸೆಂಚುರಿ ಇದ್ದು, ಈ ಮೂರರ ಒಟ್ಟು ವಿಸ್ತೀರ್ಣ 5 ಸಾವಿರ 5 ನೂರು ಚ.ಕಿ.ಮೀ. ಈ ಪ್ರದೇಶದಲ್ಲಿಕಬಿನಿ, ನುಗು, ಮಾಯಾರ್ ನದಿಗಳು ಹರಿಯುತ್ತವೆ.
ಇತರೆ ಸಣ್ಣ ಪುಟ್ಟ ತೊರೆ, ಝರಿಗಳು ಸಾಕಷ್ಟಿವೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿಬರುವ ಅರಣ್ಯದಲ್ಲಿಸಸ್ಯ, ಗಿಡ, ಮರ, ಪಕ್ಷಿ ಮತ್ತು ವನ್ಯಜೀವ ಸಂಕುಲ ಇತರೆ ಜೀವವೈವಿಧ್ಯಗಳನ್ನು ಒಳಗೊಂಡಿದೆ. ತುಳುನಾಡು ಭಾಗ, ನಾಗರಹೊಳೆ ಇತರೆ ಕಡೆಯಿಂದ ಆಹಾರ, ಆವಾಸ ಅರಸಿ ಕಾಡಾನೆಗಳು ಸಂಚರಿಸುವ ಬಂಡೀಪುರ ಉದ್ಯಾನದ ದಕ್ಷಿಣದಂಚಿನ ಪ್ರದೇಶವನ್ನು ಕಣಿಯನಪುರ ಆನೆ ಕಾರಿಡಾರ್ ಎಂದು ಕರೆಯಲಾಗುತ್ತದೆ.