ಆ್ಯಪ್ನಗರ

ಗಿರಿಜನರಿಗೆ ಖಾತೆ ಮಾಡಿಕೊಡಿ:ಶಾಸಕ ಸೂಚನೆ

ಬಿಳಿಗಿರಿರಂಗನಬೆಟ್ಟದ ಗಿರಿಜನರ ಅರಣ್ಯ ಹಕ್ಕು ಕಾಯಿದೆಯಡಿ ಸರಕಾರದಿಂದ 112 ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದ್ದುಘಿ, ಅವರಿಗೆ ಕಂದಾಯ ಇಲಾಖೆಯಿಂದ ಖಾತೆ ಮಾಡಿಸಿಕೊಡಬೇಕು ಎಂದು ತಹಸೀಲ್ದಾರ್ ವರ್ಷ ಅವರಿಗೆ ಶಾಸಕ ಎನ್.ಮಹೇಶ್ ತಿಳಿಸಿದರು.

Vijaya Karnataka 26 Jun 2019, 9:11 pm
ಯಳಂದೂರು : ಬಿಳಿಗಿರಿರಂಗನಬೆಟ್ಟದ ಗಿರಿಜನರ ಅರಣ್ಯ ಹಕ್ಕು ಕಾಯಿದೆಯಡಿ ಸರಕಾರದಿಂದ 112 ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದ್ದುಘಿ, ಅವರಿಗೆ ಕಂದಾಯ ಇಲಾಖೆಯಿಂದ ಖಾತೆ ಮಾಡಿಸಿಕೊಡಬೇಕು ಎಂದು ತಹಸೀಲ್ದಾರ್ ವರ್ಷ ಅವರಿಗೆ ಶಾಸಕ ಎನ್.ಮಹೇಶ್ ತಿಳಿಸಿದರು.
Vijaya Karnataka Web CHN-CHN26YLD1


ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ 50ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ‘‘ಸರಕಾರದಿಂದ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ, ಗಿರಿಜನರ ಹೆಸರಿನಲ್ಲಿ ಆರ್‌ಟಿಸಿ ಇಲ್ಲದ ಕಾರಣ ಹಾಗೂ ಪೋತಿಖಾತೆ ಅವರ ತಂದೆ ಹೆಸರಿನಲ್ಲಿದೆ ಅದನ್ನು ಮಕ್ಕಳ ಹೆಸರಿಗೆ ಬದಲಾವಣೆ ಮಾಡಿಕೊಡಬೇಕು ಇವರಿಗೆ ಜಮೀನುಗಳೇ ಜೀವನೋಪಾಯಕ್ಕೆ ಆಧಾರ ಯಾವುದೇ ಆದಾಯ ಇಲ್ಲ ಆದ್ದರಿಂದ ಇನ್ನು 15 ದಿನಗಳ ಒಳಗೆ ಖಾತೆ ಬದಲಾವಣೆಯಾಗಬೇಕು. ಇದನ್ನು ಕಡು ಬಡವರಿಗೆ ಮಾಡಿಕೊಡುತ್ತಿಲ್ಲ ಬದಲಾಗಿ ಉಳ್ಳವರಿಗೆ ಮಾಡಿಕೊಡಲಾಗುತ್ತಿದೆ. ಕೆಲವರು ಕಾಫಿ ಎಸ್ಟೇಟ್‌ಗಳಲ್ಲಿ ಮೆಣಸು, ಕಾಫಿ, ಟೀ ಬೆಳೆಗಳನ್ನು ಬೆಳೆಯಲಾಗುತ್ತಿದೆ ಇಂತವರಿಗೆ ಹೇಗೆ ಖಾತೆ ಮಾಡಿಕೊಟ್ಟಿದ್ದೀರಿ,’’ ಎಂದು ತರಾಟೆಗೆ ತೆಗೆದುಕೊಂಡರು.

ಕಾನೂನು ಕ್ರಮ ಜರುಗಿಸಿ: ‘‘ಹಾಡಿಗಳಲ್ಲಿ ಅರಣ್ಯ ಇಲಾಖೆ ಗುಂಬಳ್ಳಿ ಚೆಕ್ ಪೋಸ್ಟ್‌ನಲ್ಲಿ ಮಧ್ಯ ಸಾಗಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ತಪಾಸಣೆ ನಡೆಸುವ ವೇಳೆ ಹಣ ಪಡೆದು ರಾಜಾರೋಷವಾಗಿ ಬೆಟ್ಟದ ಹಾಡಿಗಳಲ್ಲಿ ಮಧ್ಯ ಮಾರಾಟವಾಗುತ್ತಿದೆ ಆದ್ದರಿಂದ ಬೆಟ್ಟದಲ್ಲಿರುವಂತಹ ಪುರುಷರು ಕುಡಿತದ ಚಟಕ್ಕೆ ಬಲಿಯಾಗಿ ಮಹಿಳೆಯರು, ಮಕ್ಕಳಿಗೆ ಕಿರುಕುಳ ನೀಡುವುದು ಜತೆಗೆ ದಿನ ನಿತ್ಯ ಗಲಾಟೆ ನಡೆಸಲಾಗುತ್ತಿದೆ ಆದ್ದರಿಂದ ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ತಪಾಸಣೆ ನಡೆಸಿ ಮಧ್ಯ ಸಾಗಾಣೆ ಮಾಡುವವರನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು,’’ ಎಂದರು.

‘‘ಕಲ್ಯಾಣಿ ಪೋಡಿನಲ್ಲಿ ರಸ್ತೆ ನಿರ್ಮಾಣ ಮಾಡಿಲ್ಲ, ವಿದ್ಯುತ್ ಸಂಪರ್ಕ ಇಲ್ಲ ಇನ್ನು ರಾತ್ರಿ ವೇಳೆ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೇರೆ ಜಮೀನನ ಮಾಲೀಕರು ವಿದ್ಯುತ್ ಕಂಬ ಅಳವಡಿಸಲು ಹಾಗೂ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ, ಆದ್ದರಿಂದ ತುರ್ತಾಗಿ ವಿದ್ಯುತ್ ಸಂಪರ್ಕ ಮಾಡಿಕೊಡಬೇಕು ಎಂದು ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ,’’ ತಿಳಿಸಿದರು.

ಮನೆ ನಿರ್ಮಾಣ ಮಾಡಿ:
‘‘ಗಿರಿಜನರು ಮಣ್ಣಿನಿಂದ ನಿರ್ಮಿಸಿರುವ 600 ಮನೆಗಳು ಶಿಥಿಲಗೊಂಡಿವೆ. ಆದ್ದರಿಂದ ವಾಲ್ಮೀಕಿ ನಿಗಮದಿಂದ ಮನೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಬಿ.ರಂ ಬೆಟ್ಟದಲ್ಲಿ 10 ಹಾಡಿಗಳಿವೆ, ಆದರೆ, ಸಮುದಾಯ ಭವನ ಇಲ್ಲ ಆದ್ದರಿಂದ ಹೊಸ ಪೋಡಿನಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕು. ಬಂಗ್ಲೆ ಪೋಡು ಹಾಡಿಯಲ್ಲಿ ಓವರ್ ಟ್ಯಾಂಕ್ ನಿರ್ಮಾಣ ಮಾಡಿ 5 ವರ್ಷ ಕಳೆದಿದೆ ಆದರೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಇದಕ್ಕೆ ಪೈಪ್ ಲೈನ್ ಅರ್ಧಕ್ಕೆ ಸ್ಥಗಿತವಾಗಿದೆ. ಅರಣ್ಯ ಇಲಾಖೆಯಲ್ಲಿ ಗಿರಿಜನರು ಗುತ್ತಿಗೆ ಆಧಾರದ ಮೇಲೆ ಕಾಡಿನಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಅವರಿಗೆ ಯಾವುದೇ ಭದ್ರತೆ ಇಲ್ಲ ಒಂದು ವೇಳೆ ಪ್ರಾಣಾಪಾಯವಾದರೆ ಅವರಿಗೆ 5 ಲಕ್ಷ ಭರಿಸಿಕೊಡಬೇಕು ಜತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸ ಕೊಡಬೇಕು,’’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಇಒ ರಾಜು, ಗ್ರಾ.ಪಂ ಅಧ್ಯಕ್ಷೆ ಸುಮತಿ ಸುರೇಶ್, ಉಪಾಧ್ಯಕ್ಷ ಬಸವೇಗೌಡ, ಸದಸ್ಯ ಕೃಷ್ಣವೇಣಿ, ಲಕ್ಷ್ಮೀ, ರಾಮಣ್ಣ, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ