ಆ್ಯಪ್ನಗರ

ಗ್ರಾಹಕರಿಗೆ ಉತ್ತಮ ಸೇವೆ ನೀಡಿ

ಭಾರತೀಯ ಜೀವವಿಮಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಪ್ರತಿನಿಧಿಗಳು ವಿಮೆ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಗ್ರಾಹಕರಿಗೆ ವಿಮೆ ಸೌಲಭ್ಯನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಬೇಕೆಂದು ಜೀವ ವಿಮಾ ಸಂಸ್ಥೆ ಮೈಸೂರು ಹಿರಿಯ ವಿಭಾಗಾಧಿಕಾರಿ ಕೆ.ಅನಂತಪದ್ಮನಾಭ ಸಲಹೆ ನೀಡಿದರು.

Vijaya Karnataka 9 Sep 2018, 5:00 am
ಚಾಮರಾಜನಗರ: ಭಾರತೀಯ ಜೀವವಿಮಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಪ್ರತಿನಿಧಿಗಳು ವಿಮೆ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಗ್ರಾಹಕರಿಗೆ ವಿಮೆ ಸೌಲಭ್ಯನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಬೇಕೆಂದು ಜೀವ ವಿಮಾ ಸಂಸ್ಥೆ ಮೈಸೂರು ಹಿರಿಯ ವಿಭಾಗಾಧಿಕಾರಿ ಕೆ.ಅನಂತಪದ್ಮನಾಭ ಸಲಹೆ ನೀಡಿದರು.
Vijaya Karnataka Web give good service to customers
ಗ್ರಾಹಕರಿಗೆ ಉತ್ತಮ ಸೇವೆ ನೀಡಿ


ನಗರದ ನಂಜನಗೂಡು ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೈಸೂರು ವಿಭಾಗ ಮಟ್ಟದ ಡಿ.ಎಂ ಕ್ಲಬ್‌ ಎಲ್‌ಐಸಿ ಪ್ರತಿನಿಧಿಗಳ 2018ರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜೀವವಿಮಾ ಪ್ರತಿನಿಧಿಗಳು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಅನುಭವ ಪಡೆದು ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಪಾಲಿಸಿ ನೀಡಿ ವಿಮಾಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೋರಿದರು.

ವ್ಯಾಪಾರ ವ್ಯವಸ್ಥಾಪಕ ಚಂಗಪ್ಪ ಮಾತನಾಡಿ, ಪ್ರಚಲಿತ ಜೀವ ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪ್ರತಿನಿಧಿಗಳಾದ ಪುಟ್ಟಶೇಖರಮೂರ್ತಿ.ಎಂ, ಜಿಸಿ.ಪಾಪಣ್ಣ, ವೈ.ಕೆ ಶ್ರೀಹರಿ ಹಾಗೂ ಅತ್ಯುತ್ತಮ ಸಾಧನೆಗೈದ ಡಿ.ಎಂ ಮಂಜೇಗೌಡ , ಕುಮಾರ್‌.ಕೆ.ಎನ್‌, ರಮೇಶ್‌ಕುಮಾರ್‌.ಕೆ, ನಾಗರತ್ನಮ್ಮ.ಕೆ.ಎಸ್‌ ಸೇರಿದಂತೆ 17 ಮಂದಿ ಪ್ರತಿನಿಧಿಗಳನ್ನು ಪುರಸ್ಕರಿಸಲಾಯಿತು.

ಮೈಸೂರು, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಶಿವಶರಣ, ಶಾಖಾಧಿಕಾರಿ ದೊರೆಸ್ವಾಮಿನಾಯಕ, ಎಸ್‌.ಎ.ಮಂಜುನಾಥ್‌, ಸ್ಥಳೀಯ ಶಾಖಾಧಿಕಾರಿ ಬಸವರಾಜು, ಅಭಿವೃದ್ಧಿ ಅಧಿಕಾರಿ ದೇಶ್‌ಪಾಂಡೆ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ