ಆ್ಯಪ್ನಗರ

ಜಾಗತಿಕ ರಂಗಭೂಮಿಗೆ ಗ್ರೀಕ್‌ ಸಾಹಿತ್ಯದ ಕೊಡುಗೆ ಅಪಾರ

ಇಂದಿನ ಸಿನಿಮಾ, ಕಿರುತೆರೆ ಧಾರಾವಾಹಿಗಳ ಭರಾಟೆಯ ನಡುವೆಯೂ ಅದನ್ನು ಸವಾಲಾಗಿ ಸ್ವೀಕರಿಸಿದ ಕನ್ನಡ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಚಾಮರಾಜನಗರ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್‌ ಅಭಿಪ್ರಾಯಪಟ್ಟರು.

Vijaya Karnataka 28 Mar 2019, 5:00 am
ಚಾಮರಾಜನಗರ : ಇಂದಿನ ಸಿನಿಮಾ, ಕಿರುತೆರೆ ಧಾರಾವಾಹಿಗಳ ಭರಾಟೆಯ ನಡುವೆಯೂ ಅದನ್ನು ಸವಾಲಾಗಿ ಸ್ವೀಕರಿಸಿದ ಕನ್ನಡ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಚಾಮರಾಜನಗರ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ.ಶಿವಕುಮಾರ್‌ ಅಭಿಪ್ರಾಯಪಟ್ಟರು.
Vijaya Karnataka Web greek literature contributes to global theater
ಜಾಗತಿಕ ರಂಗಭೂಮಿಗೆ ಗ್ರೀಕ್‌ ಸಾಹಿತ್ಯದ ಕೊಡುಗೆ ಅಪಾರ


ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ಜೆಎಸ್‌ಎಸ್‌ ಬಿಇಡಿ ಕಾಲೇಜು, ಮಹಿಳಾ ಕಾಲೇಜು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಡೆದ ಕನ್ನಡ ನಾಟಕ ಸಾಹಿತ್ಯ ವಿಚಾರಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

''ಜಾಗತಿಕ ನಾಟಕ ಸಾಹಿತ್ಯದ ಬಗ್ಗೆ ಅವಲೋಕನ ಮಾಡಿದಾಗ ನಾಟಕಗಳ ಕುರುಹು ಸಿಕ್ಕುವುದೇ ಗ್ರೀಕ್‌ ಸಾಹಿತ್ಯದಲ್ಲಿ, ಗ್ರೀಕ್‌ ಸಾಹಿತ್ಯದ ಸಾಪೋಕ್ಲಿಸ್‌, ಈಡಿಪಸ್‌, ಈಸ್ಕಿಲಸ್‌ ಎಂಬ ಸಾಹಿತಿಗಳು ನಾಟಕ ರಚನೆಯಾಗಲು ಧಾರ್ಮಿಕ ಆಚರಣೆಗಳೇ ಕಾರಣ ಎಂದು ಪ್ರತಿಪಾದಿಸುತ್ತಾರೆ. ಅಂದಿನ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ಅಡೆತಡೆಗಳಿದ್ದವು. ಭಾರತದ ರಂಗಭೂಮಿ ಎಂದಿನಿಂದ ಆರಂಭವಾಯಿತು ಎಂಬುದಕ್ಕೆ ಖಚಿತ ದಾಖಲೆಗಳಿಲ್ಲ. ಪಾಶ್ಚಾತ್ಯ ಹಾಗೂ ಪೌರಾತ್ಯ ರಂಗಭೂಮಿಗೆ ಜಾಗತಿಕ ಇತಿಹಾಸವಿದೆ,'' ಎಂದರು.

''ಕನ್ನಡ ರಂಗಭೂಮಿಯನ್ನೇ ಅವಲೋಕಿಸುವುದಾದರೆ 17ನೇ ಶತಮಾನದವರೆಗೂ ನಾಟಕ ಸಾಹಿತ್ಯವೇ ಇರಲಿಲ್ಲ. 19ನೇ ಶತಮಾನದಲ್ಲಿ ಬೇರೆ ಕಡೆಯಿಂದ ಬಂದ ಪಾಲಿವಾಲಾ ಮತ್ತು ಪಾರಸಿ ನಾಟಕ ತಂಡಗಳು ತಮ್ಮ ರಂಗ ಚಟುವಟಿಕೆಗಳನ್ನು ಆರಂಭಿಸಿದವು. ಅವರು ಇಂಗ್ಲಿಷ್‌ ಮತ್ತು ಸಂಸ್ಕೃತ ಭಾಷೆಯಲ್ಲಿದ್ದ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಅಭಿನಯಿಸುವುದರ ಮೂಲಕ ಕರ್ನಾಟಕದಲ್ಲಿ ರಂಗ ಚಟುವಟಿಕೆಗಳು ನಡೆಯಲು ಕಾರಣರಾದರು,'' ಎಂದು ಹೇಳಿದರು.

''ಕನ್ನಡ ನಾಟಕ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಬಸವಪ್ಪ ಶಾಸ್ತ್ರಿ, ಸುಬ್ಬಶಾಸ್ತ್ರಿ, ವರದಾಚಾರ್‌, ಕೈಲಾಸಂ, ಗುಬ್ಬಿವೀರಣ್ಣ, ಶ್ರೀರಂಗ, ನೀನಾಸಂ ರಂಗಭೂಮಿಯ ಕೆ.ವಿ.ಸುಬ್ಬಣ್ಣ ಅವರನ್ನು ಇಂದು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಬೇಕು,'' ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ವಿನಯ್‌ ಮಾತನಾಡಿ, ''ಜಿಲ್ಲೆಯವರೇ ಆದ ಸಂಸ 100ಕ್ಕೂ ಹೆಚ್ಚು ನಾಟಕ ಬರೆದು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಹೊಸದಾಗಿ ನಾಟಕ ರಚನೆ ಮಾಡುವವರಿಗೆ ಇಂತಹ ವಿಚಾರ ಸಂಕಿರಣಗಳು ಉಪಯುಕ್ತವಾಗಲಿವೆ. ವಿದ್ಯಾರ್ಥಿಗಳಿಗಂತೂ ನಾಟಕ ಸಾಹಿತ್ಯದ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ,'' ಎಂದರು.

ಜೆಎಸ್‌ಎಸ್‌ ಬಿಇಡಿ ಕಾಲೇಜಿನ ಪ್ರಾಂಶುಪಾಲ ಎಸ್‌.ಎನ್‌.ರಾಜು ಅಧ್ಯಕ್ಷ ತೆ ವಹಿಸಿದ್ದರು.

ನಿವೃತ್ತ ಪ್ರಾಂಶುಪಾಲ ಎಚ್‌.ಎಸ್‌.ಉಮೇಶ್‌ ನಾಟಕ ಕೃತಿ ಲಕ್ಷ ಣಗಳು, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಕನ್ನಡ ನಾಟಕ ಸಾಹಿತ್ಯ ಚರಿತ್ರೆ, ರಂಗ ಶಿಕ್ಷ ಕಿ ವಿ.ಚಿತ್ರಾ ಕನ್ನಡ ನಾಟಕ ಸಾಹಿತ್ಯದ ಮುಖ್ಯ ವಿಧಗಳು ಕುರಿತು ವಿಚಾರ ಮಂಡಿಸಿದರು.

ಜೆಎಸ್‌ಎಸ್‌ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್‌.ಎಂ.ಸ್ವಾಮಿ, ಬಿಇಡಿ ಪ್ರಶಿಕ್ಷ ಣಾರ್ಥಿಗಳು ಹಾಜರಿದ್ದರು.

ರಂಗಚಟುವಟಿಕೆಗಳು ನಶಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಗರದ ರಂಗಕಲಾವಿದರು ಮುಂದಾಗಿರುವುದು ಹೆಮ್ಮೆ ಪಡುವ ವಿಚಾರ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟಕ ಸಾಹಿತ್ಯ ವಿಚಾರ ಸಂಕಿರಣ ಆಯೋಜಿಸಿರುವುದು ಉತ್ತಮ ಬೆಳವಣಿಗೆ.

-ಎಸ್‌.ಎನ್‌.ರಾಜು, ಪ್ರಾಂಶುಪಾಲ, ಜೆಎಸ್‌ಎಸ್‌ ಬಿಇಡಿ ಕಾಲೇಜು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ