ಆ್ಯಪ್ನಗರ

ಪಿರಿಯಾಪಟ್ಟಣ: ತಾಲೂಕಿನಲ್ಲಿ ಕಾಡಾನೆ ಹಿಂಡು ದಾಳಿ

ಕೋಗಿಲವಾಡಿ ಗ್ರಾಮದಲ್ಲಿ ಐದಾರು ದಿನಗಳಿಂದ ಐದು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಬುಧವಾರ ಹಾಗೂ ಗುರುವಾರ ತಡ ರಾತ್ರಿ ಕಾಡಾನೆಗಳು ಜಮೀನಿಗೆ ಧಾವಿಸಿ ಅಪಾರ ಪ್ರಮಾಣದ ಬೆಳೆಯನ್ನು ತಿಂದು ತುಳಿದು ಹಾನಿ ಮಾಡಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Vijaya Karnataka Web 11 Dec 2020, 9:46 pm
ಪಿರಿಯಾಪಟ್ಟಣ: ತಾಲೂಕಿನ ಹೊಸೂರು ಕೇರೆಮಾಳ, ಚೌತಿ, ಎರೆಪಾಳಿ, ಕೋಗಿಲವಾಡಿ ಎರೆಕೊಪ್ಪಲು ಗ್ರಾಮದ ಜಮೀನಿಗೆ ತಡರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟಪಡಿಸಿದ್ದು, ಪರಿಹಾರಕ್ಕಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಬೆಳೆಗಾರರು ಮನವಿ ಮಾಡಿದ್ದಾರೆ.
Vijaya Karnataka Web ಆನೆ ಹಾವಳಿ
ಆನೆ ಹಾವಳಿ


ಕೋಗಿಲವಾಡಿ ಗ್ರಾಮದಲ್ಲಿ ಐದಾರು ದಿನಗಳಿಂದ ಐದು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಬುಧವಾರ ಹಾಗೂ ಗುರುವಾರ ತಡ ರಾತ್ರಿ ಕಾಡಾನೆಗಳು ಜಮೀನಿಗೆ ಧಾವಿಸಿ ಅಪಾರ ಪ್ರಮಾಣದ ಬೆಳೆಯನ್ನು ತಿಂದು ತುಳಿದು ಹಾನಿ ಮಾಡಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಭಾಗದಲ್ಲಿ ಉಲುಸಾಗಿ ಬೆಳೆದಿರುವ ಅಪಾರ ಪ್ರಮಾಣದ ಅಡಕೆ, ಕಾಫಿ, ಮರಗೆಣಸು, ಬಾಳೆ, ಕೇನೆ ಮತ್ತು ಕಾಫಿಗಿಡಗಳನ್ನು ತುಳಿದು ನಷ್ಟಪಡಿಸಿವೆ ಎಂದು ಗ್ರಾಮಸ್ಥರು ಪಿರಿಯಾಪಟ್ಟಣ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಗ್ರಾಮದಲ್ಲಿ ಪ್ರತಿವರ್ಷ ಇದೇ ಸಮಸ್ಯೆ ಮುಂದುವರಿಯುತ್ತಿದ್ದು, ಕಾಡಾನೆಗಳ ಹಾವಳಿಯನ್ನು ತಡೆಯಲು ಶಾಶ್ವತ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ.

ಈಗಾಗಲೇ ರೈತರು ಮುಸುಕಿನಜೋಳ, ಶುಂಠಿ, ಬಾಳೆ, ಕಾಫಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಇವರು ಉಪ ಬೆಳೆಯಾಗಿ ಬಾಳೆ, ಗೆಣಸು ಇನ್ನಿತರೆ ತರಕಾರಿ ಬೆಳೆಗಳನ್ನು ಅವಲಂಬಿಸಿ ಕೃಷಿ ಮಾಡಿದ್ದರು. ಆದರೆ, ಫಸಲು ತೆಗೆಯುವ ಸಂದರ್ಭ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುತ್ತಿರುವುದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಮೂಲಕ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ