ಆ್ಯಪ್ನಗರ

ಲಾಕ್ ಡೌನ್ ನಿಯಮ ಮೀರಿ ಗುಂಡ್ಲುಪೇಟೆ ಬಿಜೆಪಿ ಶಾಸಕನ ಮಗನಿಂದ ಕುದುರೆ ಸವಾರಿ

ಸಾವರ್ಜನಿಕರು ಹೊರ ಬಂದಾಗ ಮಾಸ್ಕ್ ಧರಿಸಬೇಕೆಂದು ಸರಕಾರ ಮನವಿ ಮಾಡುತ್ತಿದ್ದರೂ, ಓರ್ವ ಜನಪ್ರತಿನಿಧಿಯ ಪುತ್ರ ಯಾವುದೇ ಮಾಸ್ಕ್‌ ಧರಿಸಿದೇ ನಡುರಸ್ತೆಯಲ್ಲೇ ಮೋಜು ಮಸ್ತಿಗೆ ಕುದುರೆ ಸವಾರಿ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka Web 12 May 2020, 4:46 pm
ಮೈಸೂರು: ಲಾಕ್‌ಡೌನ್‌ನಿಂದ ಇಡೀ ದೇಶವೇ ತತ್ತರಿಸಿದೆ. ಕೊರೊನಾ ಆರ್ಭಟದಿಂದ ನಲುಗಿ ಹೋಗಿರುವ ಜನರು ಕಷ್ಟಪಟ್ಟು ಸೋಂಕು ತಡೆಗಟ್ಟಲು ಮನೆಯೊಳಗೆ ಇದ್ದು ಮಾದರಿಯಾಗುತ್ತಿದ್ದಾರೆ. ಈ ಮಧ್ಯೆ ನಮ್ಮ ನಡುವೆ ಇರುವ ಜನಪ್ರತಿನಿಧಿ ಮಗನೋರ್ವ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಹೌದು, ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ ಕುಮಾರ್ ಪುತ್ರ ಭುವನಕುಮಾರ್ ನಂಜನಗೂಡು- ಊಟಿ ಹೆದ್ದಾರಿಯಲ್ಲಿ ಕುದುರೆ ಸವಾರಿ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಲಾಕ್‌ಡೌನ್‌ ನಡುವೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಕೇರಳ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಎಲ್ಲರಿಗೂ ಕೊರೊನಾ ಭೀತಿ ಕಾಡುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಲಾಕ್‍ಡೌನ್‌ನಿಂದ ಮುಕ್ತಿ ಸಿಕ್ಕಿಲ್ಲ.

ಸಾವರ್ಜನಿಕರು ಹೊರ ಬಂದಾಗ ಮಾಸ್ಕ್ ಧರಿಸಬೇಕೆಂದು ಸರಕಾರ ಮನವಿ ಮಾಡುತ್ತಿದ್ದರೂ, ಓರ್ವ ಜನಪ್ರತಿನಿಧಿಯ ಪುತ್ರ ಯಾವುದೇ ಮಾಸ್ಕ್‌ ಧರಿಸಿದೇ ನಡುರಸ್ತೆಯಲ್ಲೇ ಮೋಜು ಮಸ್ತಿಗೆ ಕುದುರೆ ಸವಾರಿ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ ಶಾಸಕನ ಪುತ್ರ ಎಂಬ ಕಾರಣಕ್ಕೆ ಈ ರೀತಿ ಕುದುರೆ ಸವಾರಿ ನಡೆಸಿರುವುದು ಎಷ್ಟು ಸರಿ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಕಾನೂನು ಉಲ್ಲಂಘಿಸಿದ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಹಲವರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ