ಗುಂಡ್ಲುಪೇಟೆ: ಕೇರಳ -ಕರ್ನಾಟಕ ಗಡಿ ಪ್ರದೇಶದಲ್ಲಿ ಮಳೆ ನೀರಿನಿಂದ ರಾಷ್ಟ್ರೀಯ ಹೆದ್ದಾರಿ 766 ಜಲಾವೃತವಾಗಿರುವ ಕಾರಣ ರಸ್ತೆ ಸಂಚಾರ ಎರಡನೇ ದಿನವಾದ ಶುಕ್ರವಾರವೂ ಬಂದ್ ಆಗಿತ್ತು.
ರಾಜ್ಯ ಮತ್ತು ಕೇರಳ ಗಡಿಯಲ್ಲಿರುವ ಮುತ್ತಂಗ ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿರುವುದರಿಂದ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರವಾಹ ತಗ್ಗುವ ನಿರೀಕ್ಷೆಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಸರಕು ತುಂಬಿದ್ದ ಲಾರಿಗಳು ನೀರಿನಲ್ಲಿ ಪೂರ್ಣ ಮುಳುಗಡೆಯಾಗುವ ಹಂತ ತಲುಪಿವೆ. ಇವುಗಳ ಚಾಲಕ ಮತ್ತು ಕ್ಲೀನರ್ಗಳನ್ನು ಕೇರಳ ಪೊಲೀಸರು ಮತ್ತು ರಕ್ಷ ಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರಣ್ಯದ ನಡುವೆ ವಾಹನಗಳ ನಿಲುಗಡೆಗೆ ಮತ್ತು ಸಂಚಾರ ಸಾಧ್ಯವಾಗದ ಕಾರಣಕ್ಕೆ ವಾಪಸಾಗಲು ಸಮಸ್ಯೆಯಾಗುತ್ತದೆ ಎಂದು ಸರಕು ಸಾಗಣೆ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಇತರೆ ಯಾವುದೇ ವಾಹನಗಳು ಸಂಚಾರ ಮಾಡದಂತೆ ಅರಣ್ಯ ಇಲಾಖೆಯವರು ಮದ್ದೂರು ಚೆಕ್ ಪೋಸ್ಟ್ ಬಂದ್ ಮಾಡಿದ್ದಾರೆ. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಿತ್ಯ ತರಕಾರಿ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ವಾಹನಗಳು ಶುಕ್ರವಾರ ಬಂದಿರಲಿಲ್ಲ. ಬಂದಿದ್ದ ಕೆಲವು ವಾಹನ ಚಾಲಕರು ಗೂಡಲೂರು ಮಾರ್ಗದಲ್ಲಿ ಕೇರಳ ತಲುಪುವ ಬಗ್ಗೆ ತಿಳಿಸಿದ್ದಾರೆ.
ತರಕಾರಿ ಸಾಗಣೆಗೆ ತೊಂದರೆ: ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ತರಕಾರಿ ಖರೀದಿ, ಹೆದ್ದಾರಿ ಬದಿಯ ಹೋಟೆಲ್, ಕ್ಯಾಂಟೀನ್, ಕಾಳುಗಳ ವ್ಯಾಪಾರ ಸ್ಥಗಿತವಾಗಿದೆ. ಸುಲ್ತಾನ್ ಬತ್ತೇರಿ ಸುತ್ತಲಿನ ಎಸ್ಟೇಟ್ ಇತರೆ ಕಡೆಗಳಿಗೆ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ರಾಜ್ಯದ ಜನರಿಗೆ ತೊಂದರೆಯಾಗಿದೆ. ನಾನಾ ಉದ್ಯಮ ನಡೆಸುವ ಕೇರಳಿಗರು ಸಂಚಾರ ಬಂದ್ ಆಗಿರುವ ಕಾರಣ ಬಂದು ಹೋಗಲು ಸಾಧ್ಯವಾಗದೇ, ಮ್ಯಾನೇಜರ್ಗಳು ಇತರೆ ಉಸ್ತುವಾರಿ ನೋಡಿಕೊಳ್ಳುವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ.
ಒಟ್ಟಾರೆ ರಸ್ತೆ ಸಂಚಾರ ಕಡಿತವಾಗಿರುವ ಕಾರಣ ಎರಡು ರಾಜ್ಯಗಳ ನಡುವಿನ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿವೆ.
ಇನ್ನು ರಾಜ್ಯದಿಂದಲೇ ಹೆಚ್ಚು ತರಕಾರಿ ಕೇರಳಕ್ಕೆ ರವಾನೆ ಆಗುತ್ತಿತ್ತು. ಆದರೀಗ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ತರಕಾರಿ ಧಾರಣೆ ಕುಸಿಯುವ ಸಾಧ್ಯತೆ ಇದೆ.
ಮಳೆ ಕಾರಣ 2ನೇ ದಿನವೂ ಕೇರಳ ಮತ್ತು ರಾಜ್ಯದ ನಡುವೆ ಸಂಚಾರ ಸಾಧ್ಯವಾಗಿಲ್ಲ. ಅರಣ್ಯ ಇಲಾಖೆಯವರು ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಮದ್ದೂರು ಚೆಕ್ಪೋಸ್ಟ್ನಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.
-ಎಂ.ನಂಜುಂಡಯ್ಯ, ತಹಸೀಲ್ದಾರ್, ಗುಂಡ್ಲುಪೇಟೆ
ರಾಜ್ಯ ಮತ್ತು ಕೇರಳ ಗಡಿಯಲ್ಲಿರುವ ಮುತ್ತಂಗ ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿರುವುದರಿಂದ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರವಾಹ ತಗ್ಗುವ ನಿರೀಕ್ಷೆಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಸರಕು ತುಂಬಿದ್ದ ಲಾರಿಗಳು ನೀರಿನಲ್ಲಿ ಪೂರ್ಣ ಮುಳುಗಡೆಯಾಗುವ ಹಂತ ತಲುಪಿವೆ. ಇವುಗಳ ಚಾಲಕ ಮತ್ತು ಕ್ಲೀನರ್ಗಳನ್ನು ಕೇರಳ ಪೊಲೀಸರು ಮತ್ತು ರಕ್ಷ ಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರಣ್ಯದ ನಡುವೆ ವಾಹನಗಳ ನಿಲುಗಡೆಗೆ ಮತ್ತು ಸಂಚಾರ ಸಾಧ್ಯವಾಗದ ಕಾರಣಕ್ಕೆ ವಾಪಸಾಗಲು ಸಮಸ್ಯೆಯಾಗುತ್ತದೆ ಎಂದು ಸರಕು ಸಾಗಣೆ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಇತರೆ ಯಾವುದೇ ವಾಹನಗಳು ಸಂಚಾರ ಮಾಡದಂತೆ ಅರಣ್ಯ ಇಲಾಖೆಯವರು ಮದ್ದೂರು ಚೆಕ್ ಪೋಸ್ಟ್ ಬಂದ್ ಮಾಡಿದ್ದಾರೆ. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಿತ್ಯ ತರಕಾರಿ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ವಾಹನಗಳು ಶುಕ್ರವಾರ ಬಂದಿರಲಿಲ್ಲ. ಬಂದಿದ್ದ ಕೆಲವು ವಾಹನ ಚಾಲಕರು ಗೂಡಲೂರು ಮಾರ್ಗದಲ್ಲಿ ಕೇರಳ ತಲುಪುವ ಬಗ್ಗೆ ತಿಳಿಸಿದ್ದಾರೆ.
ತರಕಾರಿ ಸಾಗಣೆಗೆ ತೊಂದರೆ: ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ತರಕಾರಿ ಖರೀದಿ, ಹೆದ್ದಾರಿ ಬದಿಯ ಹೋಟೆಲ್, ಕ್ಯಾಂಟೀನ್, ಕಾಳುಗಳ ವ್ಯಾಪಾರ ಸ್ಥಗಿತವಾಗಿದೆ. ಸುಲ್ತಾನ್ ಬತ್ತೇರಿ ಸುತ್ತಲಿನ ಎಸ್ಟೇಟ್ ಇತರೆ ಕಡೆಗಳಿಗೆ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ರಾಜ್ಯದ ಜನರಿಗೆ ತೊಂದರೆಯಾಗಿದೆ. ನಾನಾ ಉದ್ಯಮ ನಡೆಸುವ ಕೇರಳಿಗರು ಸಂಚಾರ ಬಂದ್ ಆಗಿರುವ ಕಾರಣ ಬಂದು ಹೋಗಲು ಸಾಧ್ಯವಾಗದೇ, ಮ್ಯಾನೇಜರ್ಗಳು ಇತರೆ ಉಸ್ತುವಾರಿ ನೋಡಿಕೊಳ್ಳುವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ.
ಒಟ್ಟಾರೆ ರಸ್ತೆ ಸಂಚಾರ ಕಡಿತವಾಗಿರುವ ಕಾರಣ ಎರಡು ರಾಜ್ಯಗಳ ನಡುವಿನ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿವೆ.
ಇನ್ನು ರಾಜ್ಯದಿಂದಲೇ ಹೆಚ್ಚು ತರಕಾರಿ ಕೇರಳಕ್ಕೆ ರವಾನೆ ಆಗುತ್ತಿತ್ತು. ಆದರೀಗ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ತರಕಾರಿ ಧಾರಣೆ ಕುಸಿಯುವ ಸಾಧ್ಯತೆ ಇದೆ.
ಮಳೆ ಕಾರಣ 2ನೇ ದಿನವೂ ಕೇರಳ ಮತ್ತು ರಾಜ್ಯದ ನಡುವೆ ಸಂಚಾರ ಸಾಧ್ಯವಾಗಿಲ್ಲ. ಅರಣ್ಯ ಇಲಾಖೆಯವರು ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಮದ್ದೂರು ಚೆಕ್ಪೋಸ್ಟ್ನಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.
-ಎಂ.ನಂಜುಂಡಯ್ಯ, ತಹಸೀಲ್ದಾರ್, ಗುಂಡ್ಲುಪೇಟೆ