ಆ್ಯಪ್ನಗರ

ಜಿಲ್ಲೆಯಲ್ಲಿ ಭಾರಿ ಮಳೆ: ಭರ್ತಿಯಾದ ಕಟ್ಟೆಗಳು

ಜಿಲ್ಲೆಯಲ್ಲಿಸೋಮವಾರ ತಡರಾತ್ರಿ ಭರ್ಜರಿ ಮಳೆಯಾಗಿದ್ದು, ಹಲವಾರು ಕಡೆಗಳಲ್ಲಿನ ಸಣ್ಣಪುಟ್ಟ ಕೆರೆ, ಕಟ್ಟೆಗಳು ಭರ್ತಿಯಾಗಿವೆ.

Vijaya Karnataka 9 Oct 2019, 5:00 am
ಚಾಮರಾಜನಗರ : ಜಿಲ್ಲೆಯಲ್ಲಿಸೋಮವಾರ ತಡರಾತ್ರಿ ಭರ್ಜರಿ ಮಳೆಯಾಗಿದ್ದು, ಹಲವಾರು ಕಡೆಗಳಲ್ಲಿನ ಸಣ್ಣಪುಟ್ಟ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಸೋಮವಾರ ತಡರಾತ್ರಿ ದಿಢೀರ್‌ ಆರಂಭವಾದ ಮಳೆ ಬರೋಬರಿ ಒಂದು ತಾಸು ನಿರಂತರ ಜೋರಾಗಿ ಸುರಿಯಿತು. ಕೊನೆ ಕೊನೆಯಲ್ಲಿಮಳೆಯೊಂದಿಗೆ ಒಂದೇ ಸಮ ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿತ್ತು. ನಂತರವೂ ಬಹಳಷ್ಟು ಹೊತ್ತು ಜಿಟಿ ಜಿಟಿ ಮಳೆ ಸುರಿಯಿತು. ಮುಂಗಾರಿನಲ್ಲಿಮಳೆ ಉತ್ತಮವಾಗಿರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದೂ ಉಂಟು. ಆದರೀಗ ಮಳೆ ರೈತನ ನಿರೀಕ್ಷೆಯನ್ನು ಪೂರೈಸುತ್ತಿದೆ. ಈಗಾಗಲೇ ಜೋಳ, ರಾಗಿ, ಮುಸುಕಿನ ಜೋಳ, ಶೇಂಗಾ, ಹುರುಳಿ ಬಿತ್ತನೆ ಮಾಡಿ, ಮಳೆಗಾಗಿ ಕಾಯುತ್ತಿದ್ದ ರೈತರಿಗೆ ವರುಣ ಭರ್ಜರಿ ಕೊಡುಗೆಯನ್ನೇ ನೀಡಿದ್ದಾನೆ. ಜಿಲ್ಲಾದ್ಯಂತ ಮಳೆ: ಸೋಮವಾರ ತಡರಾತ್ರಿ ಬಿದ್ದಿರುವ ಮಳೆ ಜಿಲ್ಲೆಯ ಉದ್ದಗಲಕ್ಕೂ ತನ್ನ ಆರ್ಭಟ ಪ್ರದರ್ಶಿಸಿದೆ. ಅದರಲ್ಲೂಚಾ.ನಗರ ತಾಲೂಕಿಗೆ ಹೆಚ್ಚು ಪ್ರಮಾಣದಲ್ಲಿಬಿದ್ದಿದೆ. ಚಾ.ನಗರ ತಾಲೂಕಿನ ಬಹಳಷ್ಟು ಗ್ರಾಮಗಳ ಜಮೀನುಗಳು ಜಲಾವೃತ್ತಗೊಂಡಿವೆ. ಇನ್ನು ಇನ್ನೆರಡು ವಾರ ಮಳೆ ಬಾರದಿದ್ದರೂ ಪರವಾಗಿಲ್ಲಎಂಬಷ್ಟರ ಮಟ್ಟಿಗೆ ಸೋಮವಾರದ ಮಳೆ ಬಿದ್ದಿದ್ದು, ರೈತರಲ್ಲಿಮಂದಹಾಸ ಮೂಡಿದೆ.
Vijaya Karnataka Web CHN08UM5_18

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ