ಆ್ಯಪ್ನಗರ

ಜಿಲ್ಲೆಯಲ್ಲಿಭರ್ಜರಿ ಮಳೆ: ರೈತರಲ್ಲಿಮಂದಹಾಸ

ಜಿಲ್ಲೆಯಲ್ಲಿಸೋಮವಾರ ರಾತ್ರಿ ಭರ್ಜರಿ ಮಳೆ ಸುರಿದಿದ್ದು, ನಾನಾ ಬೆಳೆ ಬಿತ್ತನೆ ಮಾಡಿದ್ದ ರೈತರಲ್ಲಿಮಂದಹಾಸ ಮೂಡಿದೆ.

Vijaya Karnataka 25 Sep 2019, 5:00 am
ಚಾಮರಾಜನಗರ: ಜಿಲ್ಲೆಯಲ್ಲಿಸೋಮವಾರ ರಾತ್ರಿ ಭರ್ಜರಿ ಮಳೆ ಸುರಿದಿದ್ದು, ನಾನಾ ಬೆಳೆ ಬಿತ್ತನೆ ಮಾಡಿದ್ದ ರೈತರಲ್ಲಿಮಂದಹಾಸ ಮೂಡಿದೆ.
Vijaya Karnataka Web CHN24SMR2_18


ಜಿಲ್ಲೆಯಲ್ಲಿಒಂದು ಜೋರು ಮಳೆ ಬಿದ್ದು ಬಹಳ ದಿನಗಳಾಗಿತ್ತು. ಇದು ರೈತರಲ್ಲೂಬೇಸರ ತರಿಸಿತ್ತು.ಆದರೆ, ಸೋಮವಾರ ರಾತ್ರಿಮಳೆ ಧೋ ಎಂದು ಸುರಿದು, ರೈತರಲ್ಲಿಭರವಸೆ ತಂದಿದೆ.

ಒಂದೇ ದಿನ ರಾತ್ರಿ ಜಿಲ್ಲೆಯಲ್ಲಿ 35 ಮಿ.ಮೀ.ಮಳೆಯಾಗಿದೆ. ಈ ಮಳೆ ಬಹುತೇಕ ಜಿಲ್ಲೆಯ ಎಲ್ಲಭಾಗಕ್ಕೂ ಸುರಿದಿರುವುದು ಸಮಾಧಾನ ತಂದಿದೆ.

ಜಿಲ್ಲೆಯ ನಾನಾ ಭಾಗಗಳಲ್ಲಿಕಳೆದ ಒಂದು ವಾರದಿಂದೀಚೆಗೆ ಸಣ್ಣ ಪ್ರಮಾಣದಲ್ಲಿಸುರಿಯುತ್ತಿದ್ದ ಮಳೆಯನ್ನು ನಂಬಿ ಜೋಳ,ಹುರುಳಿ, ನೆಲಗಡಲೆ,ಅಲಸಂದೆ, ತೊಗರಿ, ರಾಗಿ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಇಂತಹ ಸಂದರ್ಭದಲ್ಲಿಬಿದ್ದ ಹದವಾದ ಮಳೆ ಬಿತ್ತನೆ ಮಾಡಿದ್ದ ಮಾಡಿದ್ದ ರೈತರಲ್ಲಿನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿರುವುದು ಸುಳ್ಳಲ್ಲ.

ಚಾ.ನಗರ ತಾಲೂಕು ಸೇರಿದಂತೆ ಗುಂಡ್ಲುಪೇಟೆ,ಕೊಳ್ಳೇಗಾಲ ತಾಲೂಕಿಗೂ ಉತ್ತಮ ರೀತಿಯಲ್ಲಿಮಳೆ ಸುರಿದಿದೆ. ಈ ಮೂರು ತಾಲೂಕಿಗೆ ಹೋಲಿಕೆ ಮಾಡಿದರೆ ಯಳಂದೂರು ತಾಲೂಕಿಗೆ ಕಡಿಮೆ ಮಳೆಯಾಗಿದೆ.

ಚಾ.ನಗರ ಪಟ್ಟಣ ಸೇರಿದಂತೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿಒಂದೂವರೆ ತಾಸಿನಲ್ಲೇ 59 ಮಿ.ಮೀ. ಸುರಿದಿದೆ. ಇನ್ನುಗುಂಡ್ಲುಪೇಟೆ ತಾಲೂಕಿನಲ್ಲಿ41 ಮಿ.ಮೀ., ಕೊಳ್ಳೇಗಾಲದಲ್ಲಿ63 ಮಿ.ಮೀ. ಹಾಗೂ ಯಳಂದೂರಿನಲ್ಲಿ7ಮಿ.ಮೀ.ಮಳೆಯಾಗಿದೆ ಎನ್ನುತ್ತದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿ .

ಅರೆಬರೆ ಕಾಮಗಾರಿ ತಂದ ಫಜೀತಿ

ಜಿಲ್ಲೆಯಲ್ಲಿಒಂದೇ ರಾತ್ರಿ ಭರ್ಜರಿಯಾಗಿ ಸುರಿದ ಮಳೆ ರೈತರಲ್ಲಿಖುಷಿ ಮೂಡಿಸಿದ್ದರೆ, ಜಿಲ್ಲಾಕೇಂದ್ರ ನಗರದ ಕೆಲ ಪ್ರದೇಶಗಳಲ್ಲಿಫಜೀತಿ ಮೂಡಿಸಿತು.

ಇದಕ್ಕೆ ಮಳೆ ಕಾರಣವಲ್ಲ, ಬದಲಿಗೆ ನಗರದಲ್ಲಿನ ಅರೆಬರೆ ಕಾಮಗಾರಿಗಳು ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಗರದ ಜೋಡಿರಸ್ತೆಯ ಸೆಸ್ಕ್‌ ಕಚೇರಿಯಿಂದ ಬಸವೇಶ್ವರ ಚಿತ್ರಮಂದಿರದವರೆಗೆ ರಾತ್ರಿ ಕೆರೆ ಮಾದರಿಯಲ್ಲಿಮಳೆ ನೀರು ನಿಂತಿತ್ತು. ಇಲ್ಲಿಚರಂಡಿ ಕಾಮಗಾರಿ ಅಪೂರ್ಣಗೊಂಡಿರುವುದು ಈ ಫಜೀತಿಗೆ ಕಾರಣ. ಇಲ್ಲಿಕೆರೆ ಮಾದರಿಯಲ್ಲಿನೀರು ನಿಂತ ಕಾರಣ ಸಾಕಷ್ಟು ಹೊತ್ತು ಸಂಚಾರಕ್ಕೆ ಆಡಚಣೆಯಾಯಿತು. ಅಲ್ಲದೇ ಈ ಪ್ರದೇಶದ ಅಂಗಡಿ, ಮುಂಗಟ್ಟುಗÙ Ü ಮುಂದೆಯೂ ಚರಂಡಿ ನೀರು ಮಡುಗಟ್ಟಿ ನಿಂತಿದ್ದರಿಂದ ಓಡಾಡಲು ಹಿಂಸೆಯಾಯಿತು. ಇನ್ನು ಭುವನೇಶ್ವರಿ ವೃತ್ತದ ತ್ಯಾಗರಾಜ ರಸ್ತೆಯಲ್ಲೂಇದೇ ಗೋಳು ನಿರ್ಮಾಣವಾಗಿತ್ತು.ನಗರದ ಹೊಸ ಬಡಾವಣೆಗಳಲ್ಲೂಕೆಲ ತಗ್ಗು ಪ್ರದೇಶಕ್ಕೆ ಪ್ರವಾಹದ ರೀತಿಯಲ್ಲಿ ಮಳೆ ನೀರು ನುಗ್ಗಿ ಕಿರಿಕಿರಿ ಉಂಟು ಮಾಡಿತು.

ಮನೆಗಳಿಗೂ ಹಾನಿ, ಜಮೀನು ಜಲಾವೃತ

ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ, ನರೀಪುರ ಹಾಗೂ ಧನಗೆರೆಗಳಲ್ಲಿಭಾರಿ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡಿವೆ. ಸಿದ್ದಯ್ಯನಪುರ ಗ್ರಾಮದಲ್ಲಿಮಿಷನರಿಶಾಲೆಯ ಕಾಂಪೌಂಡ್‌ ಕುಸಿದಿದೆ. ಶಂಕನಪುರ ಗ್ರಾಮದಲ್ಲಿಪುಟ್ಟನಂಜಯ್ಯ ಎಂಬುವರ ಮನೆ ಮೇಲೆ ಮರಬಿದ್ದು ಚಾವಣಿಗೆ ಹಾನಿಯಾಗಿದೆ.

ಎಲ್ಲೆಲ್ಲಿಎಷ್ಟು ಮಳೆ

ಚಾ.ನಗರ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ರಾತ್ರಿ ಅದೂ ಒಂದೂವರೆ ತಾಸಿನಲ್ಲೇ 35 ಮಿ.ಮೀ. ಮಳೆ ಬಿದ್ದಿದೆ. ಚಾ.ನಗರ ಹೋಬಳಿ ವ್ಯಾಪ್ತಿಯಲ್ಲಿ59 ಮಿ.ಮೀ. ಮಳೆಯಾಗಿದ್ದರೆ, ಚಾ.ನಗರ ತಾಲೂಕಿನಲ್ಲಿ 8 ಮಿ.ಮೀ.ಬಿದ್ದಿದೆ. ಗುಂಡ್ಲುಪೇಟೆಯಲ್ಲಿ41 ಮಿ.ಮೀ., ಕೊಳ್ಳೇಗಾಲ 63 ಮಿ.ಮೀ. ಮಳೆಯಾಗಿದೆ. ಯಳಂದೂರು ತಾಲೂಕಿನಲ್ಲಿ7 ಮಿ.ಮೀ.ಯಾಗಿದೆ.

ಇನ್ನು ಕಳೆದ 7ದಿನಗಳಿಂದ ಜಿಲ್ಲೆಯಲ್ಲಿ63 ಮಿ.ಮೀ.,ಚಾ.ನಗರ ತಾಲೂಕಿನಲ್ಲಿ19 ಮಿ.ಮೀ., ಗುಂಡ್ಲುಪೇಟೆಯಲ್ಲಿ72 ಮಿ.ಮೀ., ಕೊಳ್ಳೇಗಾಲ ತಾಲೂಕಿನಲ್ಲಿಅತಿಹೆಚ್ಚು 90 ಮಿ.ಮೀ. ಮಳೆಯಾಗಿದ್ದರೆ, ಕೊಳ್ಳೇಗಾಲ ತಾಲೂಕಿನಲ್ಲಿಅತಿ ಕಡಿಮೆ 17 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿಆಶಾದಾಯಕ ಮಳೆಯಾಗುತ್ತಿದೆ. ಈ ಸೆಪ್ಟೆಂಬರ್‌ನಲ್ಲಿಸುರಿಯುವ ಮಳೆ ಬೆಳೆಗಳಿಗೆ ಬೆಳವಣಿಗೆ ಹಾಗೂ ಇಳುವರಿಯಾಗಿ ಸಾಕಷ್ಟು ಅನುಕೂಲಕರ. ಹೀಗಾಗಿ ಜಿಲ್ಲಾದ್ಯಂತ ಸುರಿದಿರುವ ಮಳೆ ಆಶಾಭಾವನೆ ಮೂಡಿಸಿದೆ.

- ಚಂದ್ರಕಲಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ