ಆ್ಯಪ್ನಗರ

ದಂಡದ ಬದಲು ಹೆಲ್ಮೆಟ್‌ ಜಾಗೃತಿ

ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುವವವರಿಗೆ ದಂಡದ ಬದಲು ಹೆಲ್ಮೇಟ್‌ ನೀಡುವ ವಿನೂತನ ಪ್ರಯೋಗಕ್ಕೆ ಮಂಗಳವಾರ ನಗರದಲ್ಲಿಚಾಲನೆ ನೀಡಲಾಯಿತು.

Vijaya Karnataka 11 Dec 2019, 5:00 am
ಚಾಮರಾಜನಗರ : ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುವವವರಿಗೆ ದಂಡದ ಬದಲು ಹೆಲ್ಮೇಟ್‌ ನೀಡುವ ವಿನೂತನ ಪ್ರಯೋಗಕ್ಕೆ ಮಂಗಳವಾರ ನಗರದಲ್ಲಿಚಾಲನೆ ನೀಡಲಾಯಿತು.
Vijaya Karnataka Web ಚಾ.ನಗರದಲ್ಲಿಹೆಲ್ಮೆಟ್‌ ಜಾಗೃತಿಗಾಗಿ ಪೊಲೀಸ್‌ ಇಲಾಖೆಯಿಂದ ಮಂಗಳವಾರ ಆಯೋಜಿಸಲಾಗಿದ್ದ ಬೈಕ್‌ ರಾರ‍ಯಲಿಗೆ ಎಸ್ಪಿ ಆನಂದ್‌ಕುಮಾರ್‌ ಚಾಲನೆ ನೀಡಿದರು.


ಹೆಲ್ಮೆಟ್‌ ಧರಿಸುವಿಕೆ ಕುರಿತು ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಪೊಲೀಸರ ಬೈಕ್‌ ರಾರ‍ಯಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಎಸ್ಪಿ ಎಚ್‌.ಡಿ. ಆನಂದಕುಮಾರ್‌ ಮಾತನಾಡಿ, ; ಜಿಲ್ಲೆಯಲ್ಲಿನಡೆಯುತ್ತಿರುವ ದ್ವಿಚಕ್ರ ವಾಹನಗಳ ಅಪಘಾತದ ವೇಳೆ ಹೆಚ್ಚು ಸಾವಾಗಿರುವುದು ಹೆಲ್ಮೆಟ್‌ ಧರಿಸದೇ ಇರುವ ಸವಾರರದ್ದು. ಹೀಗಾಗಿ ಹೆಲ್ಮೆಟ್‌ನ ಅಗತ್ಯವನ್ನು ತಿಳಿಸುವುದು ರಾರ‍ಯಲಿಯ ಉದ್ದೇಶ.

ಮುಂದೆ ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುವವ ಸವಾರರಿಗೆ 500 ರೂ. ದಂಡ ವಿಧಿಸುವ ಬದಲು 750 ರೂ. ಪಡೆದು ಹೆಲ್ಮೆಟ್‌ ನೀಡಲಾಗುವುದು. ಆ ಮೂಲಕ ವಾಹನ ಸವಾರರನ್ನು ಹೆಲ್ಮೆಟ್‌ ಧರಿಸಲು ಪ್ರೇರೇಪಿಸಲಾಗುವುದು ಎಂದು ಹೇಳಿದರು.

ಪೊಲೀಸ್‌ ಕ್ಯಾಂಟೀನ್‌ ವತಿಯಿಂದ 1500 ರೂ. ಬೆಲೆಯ ಐಎಸ್‌ಐ ಮಾರ್ಕಿನ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಾಹನ ಸವಾರರಿಗೆ 750 ರೂ. ಬೆಲೆಯಲ್ಲಿನೀಡಲಾಗುತ್ತದೆ. ಅವರು 500 ದಂಡದೊಂದಿಗೆ ಹೆಚ್ಚುವರಿ 250 ರೂ. ನೀಡಿದರೆ ಅವರಿಗೆ ದಂಡವನ್ನು ಕಟ್ಟುವುದರೊಂದಿಗೆ ಹೆಲ್ಮೆಟ್‌ ಸಹ ದೊರೆಯಲಿದೆ ಎಂದರು.

ಹೆಲ್ಮೆಟ್‌ ಖರೀದಿಸಲೇ ಬೇಕು ಎಂದು ನಾವು ಕಡ್ಡಾಯ ಮಾಡುವುದಿಲ್ಲ. ಸವಾರರು ತಾವು ಕೇವಲ ದಂಡವನ್ನು ಮಾತ್ರ ಕಟ್ಟಬಹುದು ಎಂದು ಸ್ಪಷ್ಟಪಡಿಸಿದರು.

ಪರಿಶೀಲನಾ ತಂಡ: ಜಿಲ್ಲೆಯಲ್ಲಿಅಪಘಾತಗಳು ನಡೆದ ಸಂದರ್ಭದಲ್ಲಿಯಾವುದರ ಲೋಪದಿಂದಾಗಿ ಅಪಘಾತ ಸಂಭವಿಸಿತು ಎಂಬುದನ್ನು ಪರಿಶೀಲಿಸಲು ಒಂದು ಪರಿಶೀಲನಾ ತಂಡವನ್ನು ರಚಿಸಲಾಗುತ್ತಿದೆ.

ಪರಸ್ಪರ ವಾಹನಗಳಿಂದ, ರಸ್ತೆಯ ಅವ್ಯವಸ್ಥೆಯಿಂದ ಎಂಬುದನ್ನು ಈ ತಂಡ ಪರಿಶೀಲಿಸಲಿದೆ. ವಾಹನಗಳಲ್ಲಿಯಾರದು ತಪ್ಪು ಎಂಬುದನ್ನು ಪರಿಶೀಲಿಸಿ, ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ.

ಅದರೊಂದಿಗೆ ರಸ್ತೆಯ ಅವ್ಯವಸ್ಥೇಯಿಂದ ಅಪಘಾತ ನಡೆದಿದ್ದರೆ ಸಂಬಂಧಿಸಿದ ಗುತ್ತಿಗೆದಾರ, ಎಂಜಿನಿಯರ್‌ ವಿರುದ್ಧವೂ ಪ್ರಕರಣ ದಾಖಲಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಎಎಸ್ಪಿ ಅನಿತಾ, ಡಿವೈಎಸ್ಪಿ ಮೋಹನ್‌ ಇತರೆ ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ