ಫಾಲಲೋಚನ ಆರಾಧ್ಯ
ಚಾಮರಾಜನಗರ: ತಮಿಳುನಾಡಿನ ಕೊಯಮತ್ತೂರು, ಈರೋಡ್ ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಹೇರಿರುವ ಪರಿಣಾಮ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತಯಾರಿಸಲಾಗುವ ಮಣ್ಣಿನ ಇಟ್ಟಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯ ಪೂರೈಕೆಗೆ ತೊಡಕಾಗುವ ಆತಂಕ ಶುರುವಾಗಿದೆ. ಅಲ್ಲದೇ ತಮಿಳುನಾಡಿನಲ್ಲಿ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಇರುವ ಕಾರಣಕ್ಕೆ ಈ ಭಾಗದಲ್ಲಿ ಸಹಜ ವಾಗಿಯೇ ಕೆಮ್ಮಣ್ಣು ಬಗೆಯುವುದು ದಂಧೆಯಾಗಿ ಮಾರ್ಪಾಡಾಗುವ ಸಾಧ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಮಣ್ಣಿನ ಸವಕಳಿ ತಪ್ಪಿಸುವುದು ಹಾಗೂ ಕೃಷಿ ಭೂಮಿ ಯನ್ನು ಉಳಿಸಿಕೊಳ್ಳುವ ಸಲುವಾಗಿ ಅಲ್ಲಿನ ಸ್ಥಳೀಯ ಆಡಳಿತಗಳು ಕೊಯಮತ್ತೂರು, ಈರೋಡ್ ಸೇರಿದಂತೆ ಆ ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಹೇರಿವೆ. ಅಲ್ಲದೇ ಅಂಥ ಇಟ್ಟಿಗೆ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ. ಹೀಗಾಗಿ ಇತ್ತೀಚೆಗೆ ಚಾಮರಾಜನಗರ ಜಿಲ್ಲೆ ಭಾಗದಿಂದ ತಮಿಳುನಾಡಿಗೆ ನಿತ್ಯ ಹತ್ತಾರು ಲಾರಿಗಳು ಇಟ್ಟಿಗೆ ತುಂಬಿಕೊಂಡು ಸಂಚರಿಸುತ್ತಿವೆ.
ಇಲ್ಲಿನ ಕಾರ್ಖಾನೆಗಳಲ್ಲಿ ತಯಾರಾಗುವ ಇಟ್ಟಿಗೆ ತಮಿಳುನಾಡಿಗೆ ಹೋಗುವುದರಿಂದ ಸ್ಥಳೀಯ ಕಟ್ಟಡ ಕಾಮಗಾರಿಗಳಿಗೆ ಇಟ್ಟಿಗೆ ಬೇಡಿಕೆಗೆ ತಕ್ಕಷ್ಟು ದೊರೆಯುತ್ತಿಲ್ಲ. ಇದು ಸಹಜವಾಗಿಯೇ ದರ ಸಮರವನ್ನು ಶುರು ಮಾಡಿದೆ. ಹಿಂದೆ 5ರಿಂದ 6 ರೂಪಾಯಿಗೆ ದೊರೆಯುತ್ತಿದ್ದ ಇಟ್ಟಿಗೆ ಇದೀಗ 7 ರೂ.ಗೆ ಜಿಗಿದಿದೆ. ತಮಿಳುನಾಡಿಗೆ ಪೂರೈಕೆ ಮಾಡಿದರೆ 10 ರೂ. ಬೆಲೆ ದೊರೆಯುತ್ತಿದ್ದು, ಆ ಭಾಗಕ್ಕೆ ಹೆಚ್ಚು ಸರಬರಾಜು ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಮುಂದೆ ಇದು ಸ್ಥಳೀಯ ಪೂರೈಕೆ ತೊಡಕಾಗುವ ಹಾಗೂ ಬೇರೆ ದಂಧೆಗಳು ಸೃಷ್ಟಿಯಾಗುವ ಅಪಾಯವಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಕೃಷಿ ಭೂಮಿ ಹಾಳಾಗುವ ಅಪಾಯ
ತಮಿಳುನಾಡಿನಲ್ಲಿ ಮಣ್ಣಿನ ಸವಕಳಿ ಮತ್ತು ಕೃಷಿ ಭೂಮಿ ಹಾಲಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿಯೇ ಅಲ್ಲಿನ ಆಡಳಿತ ಮಣ್ಣಿನ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಹೇರಿದೆ. ಹೀಗಾಗಿ ಚಾಮರಾಜನಗರ ಭಾಗದಲ್ಲಿ ಸಹಜವಾಗಿಯೇ ಮಣ್ಣಿನ ಇಟ್ಟಿಗೆಗೆ ಬೇಡಿಕೆ ಶುರುವಾಗಿದೆ. ಹೊರರಾಜ್ಯಕ್ಕೆ ಸಾಗಣೆಯಾಗುವ ಇಟ್ಟಿಗೆಗೆ ಒಂದು ನಿಯಮ ಅಥವಾ ನಿರ್ಬಂಧ ಇಲ್ಲವಾದರೆ ಕೊಯಮತ್ತೂರು ಪ್ರದೇಶದ ಸ್ಥಿತಿಯೇ ಇಲ್ಲಿ ನಿರ್ಮಾಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಪರಿಸರವಾದಿಗಳು.
ಈಗಾಗಲೇ ಹಲವಾರು ಕಾರ್ಖಾನೆಗಳು ಅಕ್ರಮವಾಗಿ ತಲೆ ಎತ್ತಿವೆ. ಇನ್ನು ತಮಿಳುನಾಡಿನ ಈ ಪರಿಸ್ಥಿತಿಯನ್ನು ಮತ್ತಷ್ಟು ಅಕ್ರಮ ಕಾರ್ಖಾನೆಗಳು ತಲೆ ಎತ್ತಲಿವೆ. ಹಣದಾಸೆಗೆ ಭೂಮಿ ಮಾರಾಟ ಮಾರಾಟ ಮಾಡುವುದು ಹೆಚ್ಚಲಿದೆ. ಅದಕ್ಕೂ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಅವರ ಒತ್ತಾಯ.
ಕೊಯಮತ್ತೂರಿನಲ್ಲಿ ದೊಡ್ಡ ಮಟ್ಟದ ಕೈಗಾರಿಕೆ
ಕೊಯಮತ್ತೂರು ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ತುಂಬ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೋಟ್ಯಂತರ ರೂ ಬಂಡವಾಳ ಹೂಡಿ ಕಾರ್ಖಾನೆಗಳನ್ನು ಮಾಡಲಾಗುತ್ತಿತ್ತು. ಒಂದು ಮಾಹಿತಿ ಪ್ರಕಾರ ಕೊಯಮತ್ತೂರು ಪ್ರಾಂತ್ಯದಲ್ಲಿ ಸುಮಾರು 300 ರಿಂದ 400 ಇಟ್ಟಿಗೆ ದೊಡ್ಡ ಕಾರ್ಖಾನೆಗಳು ತಲೆ ಎತ್ತಿದ್ದವು. ಇದರಿಂದ ಕೆಮ್ಮಣ್ಣು ಬಗೆಯುವಿಕೆ ನಿಯಮ ಮೀರಿ ನಡೆಯುತ್ತಿತ್ತು. ಇದರಿಂದ ಪ್ರಕೃತಿ ವಿಕೋಪ ಶುರುವಾಯಿತು. ಕೃಷಿ ಭೂಮಿಯನ್ನು ಹೆಚ್ಚು ಬೆಲೆ ನೀಡಿ ಖರೀದಿಸುವುದು ಶುರುವಾಯಿತು. ಹೀಗಾಗಿ ಎಚ್ಚೆತ್ತ ಆಡಳಿತ, ಕೊಯಮತ್ತೂರು ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆಯನ್ನು ಸ್ಥಗಿತ ಮಾಡಿಸಿದೆ.
ತಮಿಳುನಾಡಿನಿಂದ ನಾನಾ ರಾಜ್ಯಗಳಿಗೆ ಈ ಭಾಗದಿಂದಲೇ ಹೆಚ್ಚು ಇಟ್ಟಿಗೆ ಪೂರೈಕೆ ಆಗುತ್ತಿತ್ತು. ಆದರೀಗ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರ ಭಾಗದಿಂದ ಸಾಗಣೆ ಮಾಡುವುದು ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರ: ತಮಿಳುನಾಡಿನ ಕೊಯಮತ್ತೂರು, ಈರೋಡ್ ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಹೇರಿರುವ ಪರಿಣಾಮ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತಯಾರಿಸಲಾಗುವ ಮಣ್ಣಿನ ಇಟ್ಟಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯ ಪೂರೈಕೆಗೆ ತೊಡಕಾಗುವ ಆತಂಕ ಶುರುವಾಗಿದೆ.
ಇಲ್ಲಿನ ಕಾರ್ಖಾನೆಗಳಲ್ಲಿ ತಯಾರಾಗುವ ಇಟ್ಟಿಗೆ ತಮಿಳುನಾಡಿಗೆ ಹೋಗುವುದರಿಂದ ಸ್ಥಳೀಯ ಕಟ್ಟಡ ಕಾಮಗಾರಿಗಳಿಗೆ ಇಟ್ಟಿಗೆ ಬೇಡಿಕೆಗೆ ತಕ್ಕಷ್ಟು ದೊರೆಯುತ್ತಿಲ್ಲ. ಇದು ಸಹಜವಾಗಿಯೇ ದರ ಸಮರವನ್ನು ಶುರು ಮಾಡಿದೆ. ಹಿಂದೆ 5ರಿಂದ 6 ರೂಪಾಯಿಗೆ ದೊರೆಯುತ್ತಿದ್ದ ಇಟ್ಟಿಗೆ ಇದೀಗ 7 ರೂ.ಗೆ ಜಿಗಿದಿದೆ. ತಮಿಳುನಾಡಿಗೆ ಪೂರೈಕೆ ಮಾಡಿದರೆ 10 ರೂ. ಬೆಲೆ ದೊರೆಯುತ್ತಿದ್ದು, ಆ ಭಾಗಕ್ಕೆ ಹೆಚ್ಚು ಸರಬರಾಜು ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಮುಂದೆ ಇದು ಸ್ಥಳೀಯ ಪೂರೈಕೆ ತೊಡಕಾಗುವ ಹಾಗೂ ಬೇರೆ ದಂಧೆಗಳು ಸೃಷ್ಟಿಯಾಗುವ ಅಪಾಯವಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಕೃಷಿ ಭೂಮಿ ಹಾಳಾಗುವ ಅಪಾಯ
ತಮಿಳುನಾಡಿನಲ್ಲಿ ಮಣ್ಣಿನ ಸವಕಳಿ ಮತ್ತು ಕೃಷಿ ಭೂಮಿ ಹಾಲಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿಯೇ ಅಲ್ಲಿನ ಆಡಳಿತ ಮಣ್ಣಿನ ಇಟ್ಟಿಗೆ ತಯಾರಿಕೆಗೆ ನಿರ್ಬಂಧ ಹೇರಿದೆ. ಹೀಗಾಗಿ ಚಾಮರಾಜನಗರ ಭಾಗದಲ್ಲಿ ಸಹಜವಾಗಿಯೇ ಮಣ್ಣಿನ ಇಟ್ಟಿಗೆಗೆ ಬೇಡಿಕೆ ಶುರುವಾಗಿದೆ. ಹೊರರಾಜ್ಯಕ್ಕೆ ಸಾಗಣೆಯಾಗುವ ಇಟ್ಟಿಗೆಗೆ ಒಂದು ನಿಯಮ ಅಥವಾ ನಿರ್ಬಂಧ ಇಲ್ಲವಾದರೆ ಕೊಯಮತ್ತೂರು ಪ್ರದೇಶದ ಸ್ಥಿತಿಯೇ ಇಲ್ಲಿ ನಿರ್ಮಾಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಪರಿಸರವಾದಿಗಳು.
ಈಗಾಗಲೇ ಹಲವಾರು ಕಾರ್ಖಾನೆಗಳು ಅಕ್ರಮವಾಗಿ ತಲೆ ಎತ್ತಿವೆ. ಇನ್ನು ತಮಿಳುನಾಡಿನ ಈ ಪರಿಸ್ಥಿತಿಯನ್ನು ಮತ್ತಷ್ಟು ಅಕ್ರಮ ಕಾರ್ಖಾನೆಗಳು ತಲೆ ಎತ್ತಲಿವೆ. ಹಣದಾಸೆಗೆ ಭೂಮಿ ಮಾರಾಟ ಮಾರಾಟ ಮಾಡುವುದು ಹೆಚ್ಚಲಿದೆ. ಅದಕ್ಕೂ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಅವರ ಒತ್ತಾಯ.
ಕೊಯಮತ್ತೂರಿನಲ್ಲಿ ದೊಡ್ಡ ಮಟ್ಟದ ಕೈಗಾರಿಕೆ
ಕೊಯಮತ್ತೂರು ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ತುಂಬ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೋಟ್ಯಂತರ ರೂ ಬಂಡವಾಳ ಹೂಡಿ ಕಾರ್ಖಾನೆಗಳನ್ನು ಮಾಡಲಾಗುತ್ತಿತ್ತು. ಒಂದು ಮಾಹಿತಿ ಪ್ರಕಾರ ಕೊಯಮತ್ತೂರು ಪ್ರಾಂತ್ಯದಲ್ಲಿ ಸುಮಾರು 300 ರಿಂದ 400 ಇಟ್ಟಿಗೆ ದೊಡ್ಡ ಕಾರ್ಖಾನೆಗಳು ತಲೆ ಎತ್ತಿದ್ದವು. ಇದರಿಂದ ಕೆಮ್ಮಣ್ಣು ಬಗೆಯುವಿಕೆ ನಿಯಮ ಮೀರಿ ನಡೆಯುತ್ತಿತ್ತು. ಇದರಿಂದ ಪ್ರಕೃತಿ ವಿಕೋಪ ಶುರುವಾಯಿತು. ಕೃಷಿ ಭೂಮಿಯನ್ನು ಹೆಚ್ಚು ಬೆಲೆ ನೀಡಿ ಖರೀದಿಸುವುದು ಶುರುವಾಯಿತು. ಹೀಗಾಗಿ ಎಚ್ಚೆತ್ತ ಆಡಳಿತ, ಕೊಯಮತ್ತೂರು ಭಾಗದಲ್ಲಿ ಮಣ್ಣಿನ ಇಟ್ಟಿಗೆ ತಯಾರಿಕೆಯನ್ನು ಸ್ಥಗಿತ ಮಾಡಿಸಿದೆ.
ತಮಿಳುನಾಡಿನಿಂದ ನಾನಾ ರಾಜ್ಯಗಳಿಗೆ ಈ ಭಾಗದಿಂದಲೇ ಹೆಚ್ಚು ಇಟ್ಟಿಗೆ ಪೂರೈಕೆ ಆಗುತ್ತಿತ್ತು. ಆದರೀಗ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರ ಭಾಗದಿಂದ ಸಾಗಣೆ ಮಾಡುವುದು ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.