ಹರವೆ ಮಹೇಶ್ ಚಾಮರಾಜನಗರ
ಜಿಲ್ಲಾ ಕೇಂದ್ರ ಚಾಮರಾಜನಗರದ ಹೊಸಖಾಸಗಿ ಬಸ್ನಿಲ್ದಾಣದಿಂದ ಮಂಡಿಮಾರಮ್ಮನ ಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಣದೇ ಸಾರ್ವಜನಿಕರ ಸಂಚಾರ ದುಸ್ತರವಾಗಿದೆ.
ನಗರಸಭೆಯ 20 ನೇ ವಾರ್ಡ್ಗೆ ಒಳಪಡುವ ರಸ್ತೆ ಇದಾಗಿದ್ದು, ಬೆಳಗ್ಗೆಯಿಂದ ಸಂಜೆವರಗೆ ನಗರ, ಪಟ್ಟಣ, ಗ್ರಾಮಾಂತರಪ್ರದೇಶದ ಸಾವಿರಾರು ಮಂದಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ವಿಷಾಧದ ಸಂಗತಿ ಎಂದರೆ ಬೇಸಿಗೆಯ ದಿನಗಳಲ್ಲಿ ಧೂಳಿನ ಸಿಂಚನ, ಮಳೆಗಾಲದಲ್ಲಿ ಕೆಸರನ್ನು ತುಳಿದುಕೊಂಡು ಹೋಗಬೇಕಿದೆ. ಮಂಡಿ ಮಾರಮ್ಮನ ಗುಡಿಬೀದಿಯಲ್ಲಂತೂ ಸಣ್ಣಪುಟ್ಟ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ಕೆಸರು ನೀರಿನ ಸಂಗ್ರಹವಾಗಿ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಗ್ರಾಮಗಳಿಂದಲೂ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ನಾನಾ ಗ್ರಾಮಗಳ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಜಿಲ್ಲಾಡಳಿತ ಕಚೇರಿ, ತಾಲೂಕು ಕಚೇರಿ ಇಲ್ಲವೇ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಚಿಕ್ಕ ಅಂಗಡಿಬೀದಿ, ದೊಡ್ಡ ಅಂಗಡಿಬೀದಿಗೆ ತೆರಳಲು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದ ರಸ್ತೆಯ ಕೆಲಭಾಗ ಡಾಂಬರೀಕರಣ ಮಾಡಲಾಗಿದೆ. ಮುಂದೆ ಹೊರಟರೆ ಗುಂಡಿಗಳದ್ದೇ ಕಾರುಬಾರು. ರಸ್ತೆಯ ಇಕ್ಕೆಲ್ಲಗಳಲ್ಲಿ ಕೆಸರನ್ನೇ ತುಳಿದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ಇದು ಮಣ್ಣಿನರಸ್ತೆಯಾಗಿರುವುದರಿಂದ ಮಳೆಗಾಲದ ಸ್ಪಲ್ಪ ಯಾಮಾರಿದರೂ ಜಾರಿಬೀಳುವ ಸಾಧ್ಯತೆ ಹೆಚ್ಚು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಪ್ರಯಾಣಿಕರು.
ಅಭಿವೃದ್ಧಿ ಕನಸಾಯಿತು: 2 ವರ್ಷದ ಹಿಂದೆ ಇದೇ ರಸ್ತೆಗೆ ಜಲ್ಲಿಹರಡಿದ್ದರು. ಇನ್ನೇನು ರಸ್ತೆ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಜಲ್ಲಿಹರಡಿ ಸಂಚಾರಕ್ಕೆ ತೊಂದರೆಮಾಡಲಾಯಿತೆ ಹೊರತೂ, ಅಭಿವೃದ್ಧಿ ಮಾಡುವ ಕನಸುನನಸಾಗಲೇ ಇಲ್ಲ.
ಈಗಾಗಲೇ ನಗರೋತ್ಥಾನ ಯೋಜನೆಯಡಿ ಚಿಕ್ಕ ಅಂಗಡಿಬೀದಿ,ದೊಡ್ಡ ಅಂಗಡಿಬೀದಿ, ಎಸ್ಎಫ್ಸಿ ಯೋಜನೆಯಡಿ ಅಗ್ರಹಾರ, ನಗರಸಭೆ ಕಚೇರಿ, ರಥದ ಬೀದಿ ರಸ್ತೆಗಳು ಅಭಿವೃದ್ಧಿಯಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿವೆ.
ಇದು ಸದಾ ಜನದಟ್ಟಣೆ ರಸ್ತೆಯಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ರಸ್ತೆಅಭಿವೃದ್ಧಿಗೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ನಗರದ ಖಾಸಗಿಬಸ್ ನಿಲ್ದಾಣದಿಂದ ಸಂಪರ್ಕಿಸುವ ಮಂಡಿಮಾರಮ್ಮನ ಗುಡಿಬೀದಿ ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಿದೆ. ಇಲ್ಲಿ ಸಾರ್ವಜನಿಕರ ಜತೆ ದ್ವಿಚಕ್ರವಾಹನ ಸವಾರರ ಭರಾಟೆ ಹೆಚ್ಚಿದೆ, ಕೂಡಲೇ ಸಂಬಂಧಪಟ್ಟವರು ಜನದಟ್ಟಣೆಯ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು.
-ಮಾದಪ್ಪ, ಪ್ರಯಾಣಿಕ
ಖಾಸಗಿಬಸ್ ನಿಲ್ದಾಣದಿಂದ ಸಂಪರ್ಕಿಸುವ ಮಂಡಿಮಾರಮ್ಮನಗುಡಿಬೀದಿ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಯಾವ ಕ್ರಿಯಾಯೋಜನೆಗೂ ಸೇರ್ಪಡೆ ಮಾಡಿಲ್ಲ. ಎಸ್ಸಿಪಿ, ಟಿಎಸ್ಪಿಗೋ ಅಥವಾ ಬೇರೆ ಯಾವಯೋಜನೆಗೆ ಬರುತ್ತದೋ ಎಂಬುದನ್ನು ಪರಿಶೀಲಿಸಿ ಕ್ರಿಯಾಯೋಜನೆಗೆ ಸೇರ್ಪಡೆಮಾಡಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
- ರಾಜಣ್ಣ, ನಗರಸಭೆ ಆಯುಕ್ತ.
ಜಿಲ್ಲಾ ಕೇಂದ್ರ ಚಾಮರಾಜನಗರದ ಹೊಸಖಾಸಗಿ ಬಸ್ನಿಲ್ದಾಣದಿಂದ ಮಂಡಿಮಾರಮ್ಮನ ಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಣದೇ ಸಾರ್ವಜನಿಕರ ಸಂಚಾರ ದುಸ್ತರವಾಗಿದೆ.
ನಗರಸಭೆಯ 20 ನೇ ವಾರ್ಡ್ಗೆ ಒಳಪಡುವ ರಸ್ತೆ ಇದಾಗಿದ್ದು, ಬೆಳಗ್ಗೆಯಿಂದ ಸಂಜೆವರಗೆ ನಗರ, ಪಟ್ಟಣ, ಗ್ರಾಮಾಂತರಪ್ರದೇಶದ ಸಾವಿರಾರು ಮಂದಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ವಿಷಾಧದ ಸಂಗತಿ ಎಂದರೆ ಬೇಸಿಗೆಯ ದಿನಗಳಲ್ಲಿ ಧೂಳಿನ ಸಿಂಚನ, ಮಳೆಗಾಲದಲ್ಲಿ ಕೆಸರನ್ನು ತುಳಿದುಕೊಂಡು ಹೋಗಬೇಕಿದೆ. ಮಂಡಿ ಮಾರಮ್ಮನ ಗುಡಿಬೀದಿಯಲ್ಲಂತೂ ಸಣ್ಣಪುಟ್ಟ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ಕೆಸರು ನೀರಿನ ಸಂಗ್ರಹವಾಗಿ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಗ್ರಾಮಗಳಿಂದಲೂ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ನಾನಾ ಗ್ರಾಮಗಳ ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಜಿಲ್ಲಾಡಳಿತ ಕಚೇರಿ, ತಾಲೂಕು ಕಚೇರಿ ಇಲ್ಲವೇ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಚಿಕ್ಕ ಅಂಗಡಿಬೀದಿ, ದೊಡ್ಡ ಅಂಗಡಿಬೀದಿಗೆ ತೆರಳಲು ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದ ರಸ್ತೆಯ ಕೆಲಭಾಗ ಡಾಂಬರೀಕರಣ ಮಾಡಲಾಗಿದೆ. ಮುಂದೆ ಹೊರಟರೆ ಗುಂಡಿಗಳದ್ದೇ ಕಾರುಬಾರು. ರಸ್ತೆಯ ಇಕ್ಕೆಲ್ಲಗಳಲ್ಲಿ ಕೆಸರನ್ನೇ ತುಳಿದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ಇದು ಮಣ್ಣಿನರಸ್ತೆಯಾಗಿರುವುದರಿಂದ ಮಳೆಗಾಲದ ಸ್ಪಲ್ಪ ಯಾಮಾರಿದರೂ ಜಾರಿಬೀಳುವ ಸಾಧ್ಯತೆ ಹೆಚ್ಚು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಪ್ರಯಾಣಿಕರು.
ಅಭಿವೃದ್ಧಿ ಕನಸಾಯಿತು: 2 ವರ್ಷದ ಹಿಂದೆ ಇದೇ ರಸ್ತೆಗೆ ಜಲ್ಲಿಹರಡಿದ್ದರು. ಇನ್ನೇನು ರಸ್ತೆ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಜಲ್ಲಿಹರಡಿ ಸಂಚಾರಕ್ಕೆ ತೊಂದರೆಮಾಡಲಾಯಿತೆ ಹೊರತೂ, ಅಭಿವೃದ್ಧಿ ಮಾಡುವ ಕನಸುನನಸಾಗಲೇ ಇಲ್ಲ.
ಈಗಾಗಲೇ ನಗರೋತ್ಥಾನ ಯೋಜನೆಯಡಿ ಚಿಕ್ಕ ಅಂಗಡಿಬೀದಿ,ದೊಡ್ಡ ಅಂಗಡಿಬೀದಿ, ಎಸ್ಎಫ್ಸಿ ಯೋಜನೆಯಡಿ ಅಗ್ರಹಾರ, ನಗರಸಭೆ ಕಚೇರಿ, ರಥದ ಬೀದಿ ರಸ್ತೆಗಳು ಅಭಿವೃದ್ಧಿಯಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿವೆ.
ಇದು ಸದಾ ಜನದಟ್ಟಣೆ ರಸ್ತೆಯಾಗಿರುವುದರಿಂದ ಕೂಡಲೇ ಸಂಬಂಧಪಟ್ಟವರು ರಸ್ತೆಅಭಿವೃದ್ಧಿಗೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ನಗರದ ಖಾಸಗಿಬಸ್ ನಿಲ್ದಾಣದಿಂದ ಸಂಪರ್ಕಿಸುವ ಮಂಡಿಮಾರಮ್ಮನ ಗುಡಿಬೀದಿ ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಿದೆ. ಇಲ್ಲಿ ಸಾರ್ವಜನಿಕರ ಜತೆ ದ್ವಿಚಕ್ರವಾಹನ ಸವಾರರ ಭರಾಟೆ ಹೆಚ್ಚಿದೆ, ಕೂಡಲೇ ಸಂಬಂಧಪಟ್ಟವರು ಜನದಟ್ಟಣೆಯ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು.
-ಮಾದಪ್ಪ, ಪ್ರಯಾಣಿಕ
ಖಾಸಗಿಬಸ್ ನಿಲ್ದಾಣದಿಂದ ಸಂಪರ್ಕಿಸುವ ಮಂಡಿಮಾರಮ್ಮನಗುಡಿಬೀದಿ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಯಾವ ಕ್ರಿಯಾಯೋಜನೆಗೂ ಸೇರ್ಪಡೆ ಮಾಡಿಲ್ಲ. ಎಸ್ಸಿಪಿ, ಟಿಎಸ್ಪಿಗೋ ಅಥವಾ ಬೇರೆ ಯಾವಯೋಜನೆಗೆ ಬರುತ್ತದೋ ಎಂಬುದನ್ನು ಪರಿಶೀಲಿಸಿ ಕ್ರಿಯಾಯೋಜನೆಗೆ ಸೇರ್ಪಡೆಮಾಡಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
- ರಾಜಣ್ಣ, ನಗರಸಭೆ ಆಯುಕ್ತ.