ಆ್ಯಪ್ನಗರ

ಹೆಜ್ಜೇನು ದಾಳಿ: ಶವ ಬಿಟ್ಟು ಪರಾರಿಯಾದ ಕುಟುಂಬ

ತಾಲೂಕಿನ ಶ್ಯಾನಡ್ರಹಳ್ಳಿಯಲ್ಲಿ ಭಾನುವಾರ ಶವ ಸಂಸ್ಕಾರದ ವೇಳೆ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.

Vijaya Karnataka 30 Oct 2017, 12:08 pm

ಗುಂಡ್ಲುಪೇಟೆ: ತಾಲೂಕಿನ ಶ್ಯಾನಡ್ರಹಳ್ಳಿಯಲ್ಲಿ ಭಾನುವಾರ ಶವ ಸಂಸ್ಕಾರದ ವೇಳೆ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.

ವಯಸ್ಸಿನ ಕಾರಣ ಸಹಜವಾಗಿ ಮೃತಪಟ್ಟ ಗ್ರಾಮದ ಪುಟ್ಟಮ್ಮ ಎಂಬುವರ ಅಂತ್ಯಕ್ರಿಯೆ ಅವರದೇ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ನಡೆಯುತ್ತಿತ್ತು. ಈ ವೇಳೆ ತೆಂಗಿನ ಮರದಲ್ಲಿ ಕಟ್ಟಿದ್ದ ಹಳಿಯಿಂದ ಮೇಲೆದ್ದ ಜೇನುಹುಳುಗಳು ಹಲವರಿಗೆ ಕಚ್ಚಿದವು. ಇದರಿಂದ ಸ್ಥಳದಲ್ಲಿದ್ದ ಹೆಚ್ಚಿನ ಮಂದಿ ಬಟ್ಟೆ, ಪಂಚೆ, ಸೀರೆ ಹೊದ್ದು, ರಕ್ಷ ಣೆಗಾಗಿ ಸುತ್ತಲಿನ ಆಲೆಮನೆ, ಶೆಡ್‌ ಇತರೆಡೆ ಓಡಿ ಹೋದರು.

Vijaya Karnataka Web honeybees attack funeral procession
ಹೆಜ್ಜೇನು ದಾಳಿ: ಶವ ಬಿಟ್ಟು ಪರಾರಿಯಾದ ಕುಟುಂಬ


ಕೆಲ ಮಂದಿಯಷ್ಟೆ ಶವದ ಬಳಿ ಇದ್ದರು. ಇವರಿಗೆ ಜೇನು ಕಚ್ಚಿದ್ದು, ಅಂತ್ಯಕ್ರಿಯೆ ಅಪೂರ್ಣವಾಗಬಾರದು ಎಂಬ ಕಾರಣಕ್ಕೆ ಹೊಗೆ ಹಾಕಿ, ಡಿಡಿಟಿ ಪೌಡರ್‌ ಸಿಂಪರಿಸಿಕೊಂಡು ಅಂತ್ಯಕ್ರಿಯೆ ನೆರವೇರಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ