ಆ್ಯಪ್ನಗರ

ಕೌಶಲ್ಯಾಧರಿತ ತರಬೇತಿಗಳಿಂದ ಭವಿಷ್ಯ ಉಜ್ವಲ

ಗ್ರಾಮಾಂತರ ಪ್ರದೇಶದ ಮಕ್ಕಳ ಬದುಕನ್ನು ಉತ್ತಮ ಪಡಿಸುವ ಚಟುವಟಿಕೆಗಳನ್ನು ಬೇಸಿಗೆ ಶಿಬಿರದಲ್ಲಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.

Vijaya Karnataka 26 May 2019, 8:52 pm
ಚಾಮರಾಜನಗರ: ಗ್ರಾಮಾಂತರ ಪ್ರದೇಶದ ಮಕ್ಕಳ ಬದುಕನ್ನು ಉತ್ತಮ ಪಡಿಸುವ ಚಟುವಟಿಕೆಗಳನ್ನು ಬೇಸಿಗೆ ಶಿಬಿರದಲ್ಲಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.
Vijaya Karnataka Web CHN-CHN26UM1


ನಗರದ ಮಿನರ್ವ ಟೆಕ್ ಸಲ್ಯೂಷನ್ ಸಂಸ್ಥೆ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ, ಕೇಂದ್ರದ ಪ್ರಾರಂಭೋತ್ಸವ, ಮಾಧ್ಯಮ ಅಕಾಡೆಮಿ ಪುರಸ್ಕೃತರ ಸನ್ಮಾನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಬಣ್ಣ ಹಚ್ಚುವ ಮೂಲಕ ಚಿತ್ರಕಲೆ ಬಿಡಿಸುವುದು, ಇಂಗ್ಲಿಷ್ ಕೋರ್ಸ್ ಆರಂಭಿಸಿ ತರಬೇತಿ ನೀಡುವ ಕೆಲಸ ಇಂತಹ ಶಿಬಿರಗಳಿಂದ ನಡೆಯಬೇಕಿದೆ. ಬದುಕನ್ನು ಉತ್ತಮ ಪಡಿಸುವ ಕೌಶಲ್ಯಾಧರಿತ ತರಬೇತಿಗಳನ್ನು ಬೇಸಿಗೆ ಶಿಬಿರದಲ್ಲಿ ಹೇಳಿಕೊಟ್ಟಾಗ ಮಕ್ಕಳ ಭವಿಷ್ಯ ಯಶಸ್ವಿಯಾಗುತ್ತದೆ,’’ ಎಂದರು.

‘‘ಬೇಸಿಗೆ ಶಿಬಿರಗಳು ದೊಡ್ಡದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು. ಈಚಿನ ದಿನಗಳಲ್ಲಿ ಚಾಮರಾಜನಗರದಂತಹ ಗಡಿಜಿಲ್ಲೆಯಲ್ಲು ಶಿಬಿರ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ,’’ ಎಂದು ಹೇಳಿದರು.

ಜಿಲ್ಲಾಸ್ಪತ್ರೆ ಶಸಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ ಮಾತನಾಡಿ, ‘‘ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಚಾಮರಾಜನಗರ ಗಣನೀಯ ಪ್ರಗತಿ ಸಾಧಿಸಿಲ್ಲ. ಜಿಲ್ಲೆ ಅಭಿವದ್ಧಿಯಾಗಬೇಕಾದರೆ ಜಿಲ್ಲೆಯ ಮಕ್ಕಳ ವ್ಯಕ್ತಿತ್ವ ವಿಕಸನವಾಗಿ, ಇಂತಹ ಶಿಬಿರಗಳಿಂದ ಅವರ ಮುಂದಿನ ಬದುಕು ಹಸನಾಗಬೇಕು. ಪೋಷಕರು ಸಹ ಮಕ್ಕಳ ಮೇಲೆ ಒತ್ತಡಹೇರಬಾರದು, ಅವರ ಸಾಮರ್ಥ್ಯಕ್ಕೆ ತಕ್ಕ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕೊಡಬೇಕು,’’ ಎಂದು ಸಲಹೆ ನೀಡಿದರು.

ಮಿನರ್ವ ಟೆಕ್ ಸಲ್ಯೂಷನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಅರುಣಾಶ್ರೀ ಮಾತನಾಡಿದರು. ಕಾರ‌್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಸ್.ಎಂ.ನಂದೀಶ್ ಅವರನ್ನು ಸನ್ಮಾನಿಸಲಾಯಿತು.

ಮಿನರ್ವ ಟೆಕ್ ಸಲ್ಯೂಷನ್ ಸಂಸ್ಥೆ ಪ್ರಾಂಶುಪಾಲೆ ಪೂಜಿತಾ, ಜೆಎಸ್‌ಎಸ್ ಮಹಿಳಾಕಾಲೇಜಿನ ಕಂಪ್ಯೂಟರ್ ವಿಭಾಗದ ಅಧ್ಯಾಪಕ ಡಾ. ರಾಜೇಶ್, ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕ ಉಮೇಶ್ ಸೇರಿದಂತೆ ಮಕ್ಕಳ ಪೋಷಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ