ಆ್ಯಪ್ನಗರ

ಕೊಳ್ಳೇಗಾಲ: ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯ

ಪಟ್ಟಣದಲ್ಲಿ ಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಚ್‌.ಕೆ.ವಾರಿಯರ್ಸ್‌ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

Vijaya Karnataka 11 Dec 2018, 5:00 am
ಕೊಳ್ಳೇಗಾಲ: ಪಟ್ಟಣದಲ್ಲಿ ಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಎಚ್‌.ಕೆ.ವಾರಿಯರ್ಸ್‌ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.
Vijaya Karnataka Web kollegal a light light cricket match
ಕೊಳ್ಳೇಗಾಲ: ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯ


ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಎಚ್‌.ಕೆ. ಟ್ರಸ್ಟ್‌. ರೋಟರಿ ಹಾಗೂ ರೋಟರಿ ಮಿಡ್‌ ಟೌನ್‌ ಸಂಸ್ಥೆಗಳು ಡಿ. 7,8 ಮತ್ತು 9ರಂದು ಆಯೋಜಿಸಿದ್ದ ಹೊನಲು ಬೆಳಕಿನ ಟೆನಿಸ್‌ ಬಾಲ್‌ ಪಂದ್ಯಾವಳಿಯಲ್ಲಿ ಅಂತಿಮವಾಗಿ ಎಚ್‌. ಕೆ.ವಾರಿಯರ್‌ ಮತ್ತು ಎಂಆರ್‌ಎಫ್‌ ಬ್ಲಾಸ್ಟರ್‌ ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 10 ಓವವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸುವ ಮೂಲಕ ಎಂಆರ್‌ಎಫ್‌ ಬ್ಲಾಸ್ಟರ್‌ ಕೈ ಚೆಲ್ಲಿತು. 41ರನ್‌ಗಳ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಎಚ್‌.ಕೆ. ವಾರಿಯರ್ಸ್‌ 6 ವಿಕೆಟ್‌ ಕಳೆದುಕೊಂಡು ಗೆಲುವಿನ ನೆಗೆ ಬೀರಿತು. ವಿಜೇತ ಎಚ್‌.ಕೆ.ವಾರಿಯರ್‌ ತಂಡ ಟ್ರೋಫಿ ಹಾಗೂ 30 ಸಾವಿರ ನಗದನ್ನು ಪಡೆಯಿತು. ದ್ವಿತಿಯ ಸ್ಥಾನ ಪಡೆದ ಎಂಆರ್‌ಎಫ್‌ ಬ್ಲಾಸ್ಟರ್‌ 20 ಸಾವಿರ ನಗದು ಬಹುಮಾನ ಪಡೆಯಿತು.

ಅತ್ಯುತ್ತಮ ಬ್ಯಾಟ್ಸ್‌ಮೆನ್‌ ಆಗಿ ಎಚ್‌.ಕೆ. ವಾರಿಯರ್ಸ್‌ನ ತಂಡದ ನವೀನ್‌, ಉತ್ತಮ ಬೌಲರ್‌ಆಗಿ ಎಂಆರ್‌ಎಫ್‌ ಬ್ಲಾಸ್ಟರ್‌ ತಂಡದ ಸುನಿಲ್‌, ಅತ್ಯುತ್ತಮ ಆಟಗಾರನಾಗಿ ಎಚ್‌.ಕೆ. ವಾರಿಯರ್ಸ್‌ನ ನವೀನ್‌ ಗೌರವವನ್ನು ಪಡೆದರು.

ವಿಜೇತರಿಗೆ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ರಮೇಶ್‌ ಕುಮಾರ್‌ ಟ್ರೋಫಿಯನ್ನು ನೀಡಿದರು. ವಿತರಕ ರಮೇಶ್‌ಕುಮಾರ್‌, ಪಟ್ಟಣ ಠಾಣೆಯ ಪಿಎಸ್‌ಐ ವೀಣಾನಾಯಕ್‌, ಉಪ ನಿರೀಕ್ಷ ಕ ಪುಟ್ಟಸ್ವಾಮಿ, ಎಚ್‌ಕೆ ಟ್ರಸ್ಟ್‌ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಮಿಡ್‌ಟೌನ್‌ ಆಧ್ಯಕ್ಷ ಮುಖೇಶ್‌, ಮಾಜಿ ಅಧ್ಯಕ್ಷ ಶ್ರೀನಿಧಿ ಮಹೇಶ್‌, ಮಾಗಡಿ ಕ್ರಿಕೆಟ್‌ ಅಕಾಡೆಮಿಯ ತರಬೇತಿದಾರರಾದ ಮಂಜು, ಕ್ರೀಡಾಕೂಟದ ಸಂಘಟಕರಾದ ಮಹಾನಂದ, ಪ್ರವೀಣ್‌ಕುಮಾರ್‌, ಶಿವಾನಂದ, ಗಿರೀಶ್‌ ಜಡೆ, ರಾಮು, ಜೆ.ಹರ್ಷ, ಜೆ.ಮೂರ್ತಿ, ಉಮಾಶಂಕರ್‌ ಇದ್ದರು.

ಈ ಪಂದ್ಯಾವಳಿಯನ್ನು ಇಂಡಿಯನ್‌ ಪ್ರಿಮಿಯರ್‌ ಲೀಗ್‌ ಮಾದರಿಯಲ್ಲಿ ನಡೆಸಲಾಗಿತ್ತು. ಗಡಿ ಜಿಲ್ಲೆ ಚಾಮರಾಜನಗರದ ಕ್ರಿಕೆಟ್‌ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

-ಎಚ್‌.ಕೆ. ಮಹಾನಂದ ಸಂಘಟಕರು,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ