ಆ್ಯಪ್ನಗರ

ಚಾಮರಾಜನಗರ: ಕೋವಿಡ್‌ಗೆ ಕುದೇರು ಠಾಣೆ ಎಎಸ್‌ಐ ಬಲಿ

ಜಿಲ್ಲಾಡಳಿತದ ಪ್ರಕಾರ ಗುರುವಾರ ಜಿಲ್ಲೆಯಲ್ಲಿ 60 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 54 ಮಂದಿ ಗುಣಮುಖರಾಗಿದ್ದಾರೆ. 425 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 1432 ಆಗಿದೆ. 979 ಮಂದಿ ಗುಣಮುಖರಾಗಿದ್ದಾರೆ.

Vijaya Karnataka Web 13 Aug 2020, 9:51 pm
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌-19ಗೆ ಸಹಾಯಕ ಸಬ್‌ ಇನ್ಸ್‌ಪೆಕ್ಟೆರ್‌ ಒಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೇನಾನಿ ಒಬ್ಬರು ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.
Vijaya Karnataka Web ಕೊರೊನಾ
ಕೊರೊನಾ


ತಾಲೂಕಿನ ಕುದೇರು ಠಾಣೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಕೆ.ಜಿ. ಪರಮೇಶ್ವರಪ್ಪ (55) ಮೃತರು.

ಇವರು ಜು.30ರಂದು ನಗರದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು. ಆದರೆ, ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಈ ಪ್ರಕರಣವನ್ನು ಪಾಸಿಟಿವ್‌ ರೋಗಿಯು ಕೋವಿಡೇತರ ಕಾರಣದಿಂದ ಸಾವು ಎಂದು ನಮೂದಿಸಿದೆ.

ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರಿದ್ದಾರೆ. ಅಂತ್ಯಕ್ರಿಯೆ ಮೃತರ ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಕುಣಗಹಳ್ಳಿ ತೋಟದಲ್ಲಿ ಗುರುವಾರ ಸಂಜೆ ಕೋವಿಡ್‌ ನಿಯಮದಂತೆ ನಡೆಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಎಎಸ್ಪಿ ಅನಿತಾ ಭಾಗವಹಿಸಿದ್ದರು.

ಮತ್ತೊಂದು ಸಾವು

ಇದಲ್ಲದೇ, ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ 64 ವರ್ಷದ ಮಹಿಳೆ ಕಿಡ್ನಿ ತೊಂದರೆಯಿಂದ ಬುಧವಾರ ಮೃತಪಟ್ಟಿದ್ದಾರೆ. ನಿಧನದ ನಂತರ ಕೋವಿಡ್‌ ದೃಢಪಟ್ಟಿದೆ.

ಜಿಲ್ಲಾಡಳಿತದ ಪ್ರಕಾರ ಗುರುವಾರ ಜಿಲ್ಲೆಯಲ್ಲಿ 60 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 54 ಮಂದಿ ಗುಣಮುಖರಾಗಿದ್ದಾರೆ. 425 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 1432 ಆಗಿದೆ. 979 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಕೋವಿಡೇತರ ಕಾರಣದಿಂದ 11 ಮಂದಿ ಸಾವಿಗೀಡಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ