ಆ್ಯಪ್ನಗರ

ಗುಂಡ್ಲುಪೇಟೆ: ಗಾರೆ ಕೆಲಸಗಾರನ ಮಗಳು ಟಾಪರ್‌

ತಂದೆ ಸ್ವಾಮಿ ಗಾರೆ ಕೆಲಸ ಮಾಡಿದರೆ, ತಾಯಿ ತಾಯಮ್ಮ ಗೃಹಿಣಿ. ಯಾವುದೇ ಕೃಷಿ ಭೂಮಿ ಇಲ್ಲ. ಹೀಗಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಚಾರದಲ್ಲಿ ಶಕ್ತಿ ಮೀರಿ ಪೋಷಕರು ಶ್ರಮಿಸುತ್ತಿದ್ದಾರೆ.

Vijaya Karnataka Web 18 Jun 2022, 10:28 pm
ಗುಂಡ್ಲುಪೇಟೆ: ಕಲಾ ವಿಭಾಗದಲ್ಲಿ ಜಿಲ್ಲಾ ಟಾಪರ್‌ ಆಗಿರುವ ಸುಮಾ ಅಕ್ಷರಶಃ ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ಜಿಲ್ಲೆಗೆ ಟಾಪರ್‌ ಆಗುವುದು ಸುಲಭದ ಮಾತಲ್ಲ. ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೂ ಮೀರಿ 569 (ಶೇ.94.83) ಅಂಕ ಪಡೆದಿರುವ ಈಕೆಯದ್ದು ಶ್ರಮದ ನಡುವಿನ ಸಾಧನೆ.

ತಂದೆ ಸ್ವಾಮಿ ಗಾರೆ ಕೆಲಸ ಮಾಡಿದರೆ, ತಾಯಿ ತಾಯಮ್ಮ ಗೃಹಿಣಿ. ಯಾವುದೇ ಕೃಷಿ ಭೂಮಿ ಇಲ್ಲ. ಹೀಗಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ವಿಚಾರದಲ್ಲಿ ಶಕ್ತಿ ಮೀರಿ ಪೋಷಕರು ಶ್ರಮಿಸುತ್ತಿದ್ದಾರೆ.

ಪಿಯು ಪರೀಕ್ಷೆ ಫಲಿತಾಂಶ: ಕೃಷಿಕನ ಪುತ್ರ ಮೌನೇಶ್‌ ರಾಜ್ಯಕ್ಕೆ 2ನೇ ರ‍್ಯಾಂಕ್, ಯಾರು ಯಾರು ಟಾಪರ್ಸ್‌ ಇಲ್ಲಿದೆ ಲಿಸ್ಟ್‌

ಹಿರಿಯ ಮಗ ನಾಗೇಂದ್ರ ಎಂ.ಎ, ಬಿಇಡಿ, ಮತ್ತೊಬ್ಬ ಮಗಳು ಪ್ರೇಮಾ ಪದವಿ ಪೂರೈಸಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆ ಓದಿನಲ್ಲಿ ಮುಂದಿರುವ ಕಿರಿಯ ಮಗಳು ಸುಮಾಳ ಆಸೆಗೆ ಇವರು ನೀರೆರೆದು ಪ್ರೋತ್ಸಾಹಿಸುತ್ತಿದ್ದಾರೆ.

ಸುಮಾ ಒಂದರಿಂದ ಹತ್ತನೇ ತರಗತಿವರೆಗೆ ಸ್ವಗ್ರಾಮ ಅಣ್ಣೂರು ಕೇರಿಯಲ್ಲೇ ವಿದ್ಯಾಭ್ಯಾಸ ಮಾಡಿದ್ದು, ನಂತರದಲ್ಲಿ ಪಟ್ಟಣದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಪಿಯುಸಿ ವ್ಯಾಸಂಗ. ಕುಟುಂಬಸ್ಥರು, ಉಪನ್ಯಾಸಕರ ಸಹಕಾರದಿಂದ ಓದಿನಲ್ಲಿ ತೊಡಗಿಸಿಕೊಳ್ಳುವ ಮೂಲಕ ಸುಮಾ ಉತ್ತಮ ಸಾಧನೆ ಮಾಡಿದ್ದಾರೆ.

''ಮನೆಯಲ್ಲಿ ಕಷ್ಟವನ್ನೇ ಹಾಸಿ ಹೊದ್ದು ಬೆಳೆದಿದ್ದೇನೆ. ಈ ಕಾರಣ ಏನಾದರೂ ಸಾಧಿಸಬೇಕೆಂಬ ಆಸೆಯಿಂದ ಜಿಲ್ಲಾಧಿಕಾರಿ ಆಗಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ'' ಎನ್ನುತ್ತಾರೆ ಸುಮಾ. ಸರಕಾರಿ ಶಾಲೆ, ಕಾಲೇಜಿನಲ್ಲಿ ಓದುವ ನಡುವೆ ತನ್ನೆಲ್ಲಾ ಕೊರತೆಗಳನ್ನು ಮೀರಿ ಮಾಡಿದ ಸಾಧನೆಗೆ ಸಾಟಿಯೇ ಇಲ್ಲ.

ವಿದ್ಯಾರ್ಥಿ ಆತ್ಮಹತ್ಯೆ

ಬಳ್ಳಾರಿ: ಪಿಯುಸಿ ಫಲಿತಾಂಶದ ಗಣಿತ ವಿಷಯದಲ್ಲಿ ಫೇಲಾದ ಹಿನ್ನೆಲೆ ಮನನೊಂದ ವಿದ್ಯಾರ್ಥಿಯೊಬ್ಬ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣ ಸಮೀಪ ಶನಿವಾರ ನಡೆದಿದೆ.

ಪುತ್ತೂರು: ಕಿಡ್ನಿ ಕಾಯಿಲೆ ಬಾಧಿಸಿದ ವಿದ್ಯಾರ್ಥಿಗೆ ಶೇ 93.66 ಅಂಕ

ಕಂಟೋನ್ಮೆಂಟ್‌ ನಿವಾಸಿ ಪವನ ಸಾಯಿ (18) ಮೃತ ವಿದ್ಯಾರ್ಥಿ. ಇಲ್ಲಿನ‌ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಗಣಿತ ವಿಷಯದಲ್ಲಿ ಫೇಲಾಗಿದ್ದು, ಆತ್ಮಹತ್ಯೆಗೆ ‌ಕಾರಣವಾಗಿದೆ. ಈ‌ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ