ಆ್ಯಪ್ನಗರ

ಸಂವಹನ ಕೊರತೆಯಿಂದ ಗೈರು: ಶಾಸಕ ಎನ್‌.ಮಹೇಶ್‌

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ವಿಶ್ವಾಸ ಮತ ನಡೆಯುವ ವೇಳೆಯಲ್ಲಿ ಬಿಎಸ್‌ಪಿ ಪಕ್ಷ ದ ವರಿಷ್ಠರು ಹಾಗೂ ನನಗೂ ಸಂವಹನ ಕೊರತೆ ಉಂಟಾಯಿತು ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

Vijaya Karnataka 4 Aug 2019, 5:00 am
ಯಳಂದೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ವಿಶ್ವಾಸ ಮತ ನಡೆಯುವ ವೇಳೆಯಲ್ಲಿ ಬಿಎಸ್‌ಪಿ ಪಕ್ಷ ದ ವರಿಷ್ಠರು ಹಾಗೂ ನನಗೂ ಸಂವಹನ ಕೊರತೆ ಉಂಟಾಯಿತು ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.
Vijaya Karnataka Web lack of communication bsp mla n mahesh
ಸಂವಹನ ಕೊರತೆಯಿಂದ ಗೈರು: ಶಾಸಕ ಎನ್‌.ಮಹೇಶ್‌


ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪತ್ರಕರ್ತರ ಜತೆ ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ ಶಾಸಕರಿಂದ ಸಮ್ಮಿಶ್ರ ಸರಕಾರ ಬೀಳುವ ವೇಳೆಯಲ್ಲಿ ವಿಶ್ವಾಸ ಮತಯಾಚನೆ ವೇಳೆಯಲ್ಲಿ ಬಿಎಸ್‌ಪಿ ಪಕ್ಷ ದ ವರಿಷ್ಠರು ನನ್ನನ್ನು ಯಾವುದೇ ಪಕ್ಷ ಕ್ಕೂ ಹೋಗಬೇಡ ಎಂದು ಹೇಳಿದ್ದರು. ಆದ್ದರಿಂದ ನಾನು ತಮಿಳುನಾಡಿಗೆ ಹೊರಟು ಹೋದೆ. ಆದ್ದರಿಂದ ಬಿಎಸ್‌ಪಿ ಪಕ್ಷ ದ ವರಿಷ್ಠರು ನನಗೆ ಇಮೇಲ್‌, ಮೆಸೇಜ್‌ ಹಾಗೂ ವಾಟ್ಸಾಪ್‌ ಮಾಡಿರುವುದರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ಇಮೇಲ್‌, ಮೆಸೇಜ್‌ ಹಾಗೂ ವಾಟ್ಸಾಪ್‌ ಮಾಡುವುದಾಗಲಿ ಅಥವಾ ನೋಡುವುದಾಗಲಿ ನನಗೆ ಮೊದಲಿನಿಂದಲೂ ಆಸಕ್ತಿ ಇಲ್ಲ. ನಾನು ಹೋಗಿದ್ದ ತಮಿಳುನಾಡಿನ ದೇವಾಲಯದಲ್ಲಿ ಯಾವುದೇ ನೆಟ್‌ವರ್ಕ್‌ ಸಿಗುತ್ತಿರಲಿಲ್ಲ. ನಾನು ಯಾವುದೇ ಪಕ್ಷ ಕ್ಕೂ ಸೇರ್ಪಡೆಯಾಗಲು ನನಗೆ ಇಷ್ಟ ಇಲ್ಲ, ಆದರೆ ಪಕ್ಷ ದಿಂದ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಇದು ಕೆಲವು ದಿನಗಳಲ್ಲಿ ಸರಿ ಹೋಗಲಿದೆ. ಮುಂದಿನ ದಿನಗಳಲ್ಲಿ ಮಾಯಾವತಿಯವರ ಜತೆ ಚರ್ಚೆ ಮಾಡಲಿದ್ದೇನೆ. ಈ ತಿಂಗಳೊಳಗೆ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಕಾರ್ಯಕರ್ತರು, ಮುಖಂಡರನ್ನು ಕರೆದು ಸಭೆ ನಡೆಸಲಿದ್ದೇನೆ. ಅಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಕೆ. ರಂಗರಾಜು, ಕೇಶವಮೂರ್ತಿ, ತಾ.ಪಂ. ಸದಸ್ಯ ನಾಗರಾಜು, ಬಿಎಸ್‌ಪಿ ಪಕ್ಷ ದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ