ಆ್ಯಪ್ನಗರ

ಬೆಂಕಿಹಚ್ಚಿ ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ತವರಿನಿಂದ ಹಣ ತರುವಂತೆ ಪೀಡಿಸಿ, ಹೊಡೆದು ಮೈಮೇಲೆ ಸೀಮೆಎಣ್ಣೆ ಸುರಿದು ಪತ್ನಿಯ ಸಾವಿಗೆ ಕಾರಣನಾದ ಚಾಮರಾಜನಗರ ತಾಲೂಕು ಕೆರೆಹಳ್ಳಿ ಗ್ರಾಮದ ಮಂಜು ಎಂಬಾತನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Vijaya Karnataka 4 Dec 2018, 5:00 am
ಚಾಮರಾಜನಗರ: ತವರಿನಿಂದ ಹಣ ತರುವಂತೆ ಪೀಡಿಸಿ, ಹೊಡೆದು ಮೈಮೇಲೆ ಸೀಮೆಎಣ್ಣೆ ಸುರಿದು ಪತ್ನಿಯ ಸಾವಿಗೆ ಕಾರಣನಾದ ಚಾಮರಾಜನಗರ ತಾಲೂಕು ಕೆರೆಹಳ್ಳಿ ಗ್ರಾಮದ ಮಂಜು ಎಂಬಾತನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Vijaya Karnataka Web life imprisonment for murder husband
ಬೆಂಕಿಹಚ್ಚಿ ಪತ್ನಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ


ಮಂಜು ಹಾಸನ ಜಿಲ್ಲೆ ದೇವಿ ನಗರದ ನಂಜೇಗೌಡ ಎಂಬುವವರ ಮಗಳನ್ನು 2007ರ ಏ. 29ರಂದು ಮದುವೆಯಾಗಿದ್ದ. ಪ್ರಾರಂಭದಲ್ಲಿ ಚೆನ್ನಾಗಿದ್ದ ಮಂಜು, ನಂತರ ಮದುವೆ ಸಮಯದಲ್ಲಿ ನಿಮ್ಮಪ್ಪನ ಮನೆಯಿಂದ ಏನು ತರಲಿಲ್ಲ. ದುಡ್ಡು ತೆಗೆದುಕೊಂಡು ಬಾ ಎಂದು ದೈಹಿಕ ಹಾಗೂ ಮಾನಸಿಕವಾಗಿ ಪತ್ನಿಗೆ ಹಿಂಸೆ ಮತ್ತು ಕಿರುಕುಳ ಕೊಡುತ್ತಿದ್ದ.

ಹೀಗೆಯೆ ಮುಂದುವರೆದು ಮನೆಯಲ್ಲಿದ್ದ ವೇಳೆ ಜಗಳ ತೆಗೆದು ಆಕೆಗೆ ಹೊಡೆದು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಪರಾರಿಯಾಗಿದ್ದ.

ಸುಟ್ಟ ಗಾಯಗಳಿಂದ ನರಳುತ್ತಿದ್ದ ಆಕೆ ಚಿಕಿತ್ಸೆ ಫÇಕಾರಿಯಾಗದೇ 2014ರ ಸೆ. 6ರಂದು ಮೃತಪಟ್ಟಿದ್ದಳು. ಸಾಯುವ ಮುನ್ನ ಹೇಳಿಕೆಯಲ್ಲಿ ನನ್ನ ಸಾವಿಗೆ ನನ್ನ ಗಂಡನೆ ಕಾರಣ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಮಂಜುಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್‌ ಅವರು 3 ವರ್ಷ ಸಾದಾ ಸಜೆ ಮತ್ತು 20 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಎಂ.ಎಸ್‌. ಉಷಾ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ