ಆ್ಯಪ್ನಗರ

ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ದೀಪೋತ್ಸವ

ಮಲೆ ಮಹದೇಶ್ವರಬೆಟ್ಟ ದೇಗುಲದಲ್ಲಿಕಡೆ ಕಾರ್ತಿಕ ಸೋಮವಾರವಾದ ನ. 25ರಂದು ದೀಪೋತ್ಸವ ನಡೆಯಲಿದೆ.

Vijaya Karnataka 25 Nov 2019, 5:00 am
ಹನೂರು: ಮಲೆ ಮಹದೇಶ್ವರಬೆಟ್ಟ ದೇಗುಲದಲ್ಲಿಕಡೆ ಕಾರ್ತಿಕ ಸೋಮವಾರವಾದ ನ. 25ರಂದು ದೀಪೋತ್ಸವ ನಡೆಯಲಿದೆ.
Vijaya Karnataka Web ಕಡೇ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿಹನೂರಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿಆಗಮಿಸಿದ ಭಕ್ತರು.


ಮಲೆಮಹದೇಶ್ವರ ಬೆಟ್ಟದಲ್ಲಿನಡೆಯುವ ಧಾರ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳಲು ಎರಡು ದಿನಗಳಿಂದ ರಾಮನಗರ, ಹಲಗೂರು, ನಂಜನಗೂಡು, ತಿ.ನರಸೀಪುರ, ಮೈಸೂರು, ಬೆಂಗಳೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಮಳವಳ್ಳಿ, ಮದ್ದೂರು, ಗುಂಡ್ಲುಪೇಟೆ, ಮಂಡ್ಯ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿಪ್ರಾಧಿಕಾರದ ವತಿಯಿಂದ ಕಡೆ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆಗಳು ನಡೆಯಲಿವೆ. ಲಕ್ಷ ದೀಪೋತ್ಸವ ಮಹಾಜ್ಯೋತಿ ನಡೆಯಲಿದ್ದು, ದೀಪದ ಒಡ್ಡುವಿನಲ್ಲಿರುವ ದೊಡ್ಡ ದೀಪಕ್ಕೆ 8 ಟಿನ್‌ ಎಣ್ಣೆ ಹಾಕಿ ದೀಪ ಹಚ್ಚಿ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಭಕ್ತರು ದೇವಾಲಯ ಸೇರಿದಂತೆ ಸುತ್ತಮುತ್ತಲು ದೀಪಗಳನ್ನು ಹಚ್ಚುತ್ತಾರೆ. ಸಂಜೆ ಮಹದೇಶ್ವರ ಸ್ವಾಮಿಗೆ ಚಿನ್ನದ ರಥೋತ್ಸವ, ಹುಲಿ ವಾಹನೋತ್ಸವ, ಎಣ್ಣೆ ಮಜ್ಜನ ಸೇವೆ, ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ. ನಂತರ ತೆಪ್ಪೋತ್ಸವ ಸಹ ಜರುಗಲಿದೆ.

ಮೈಸೂರು ವೀರಶೈವ ಮಹಾಸಭಾ ಸಂಘದ ವತಿಯಿಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಲ್ನಡಿಗೆಯಲ್ಲಿ ಆಗಮನ

ಈ ಬಾರಿ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಹರಕೆ ಹೊತ್ತ ಭಕ್ತರು ಸರದಿ ರೂಪದಲ್ಲಿಹಣವನ್ನು ಸಂಗ್ರಹಿಸಿ ತಂಡೋಪತಂಡವಾಗಿ ಕಾಲ್ನಡಿಗೆಯಲ್ಲಿಆಗಮಿಸಿದರು. ಮಾರ್ಗ ಮಧ್ಯೆ ಮರದ ನೆರಳಿನಲ್ಲಿಅಲ್ಲಲ್ಲಿವಿಶ್ರಾಂತಿ ಪಡೆಯುತ್ತ, ಸಹಭೋಜನವನ್ನು ಮಾಡುತ್ತ ಸಂಚರಿಸುತ್ತಿರುವುದು ಹನೂರು ಭಾಗದಲ್ಲಿಎರಡು ದಿನಗಳಿಂದ ಸಾಮಾನ್ಯವಾಗಿದೆ. ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತ, ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತ ಕಾಲ್ನಡಿಗೆಯಲ್ಲಿತೆರಳುತ್ತಿದ್ದಾರೆ. ಯುವಕರು ತಮಟೆ ಬಾರಿಸುತ್ತ ಅಲ್ಲಲ್ಲಿಕುಣಿದು ಕುಪ್ಪಳಿಸುತ್ತ ಆಗಮಿಸಿ ಮಾದಪ್ಪನ ಸನ್ನಿಧಿಯಲ್ಲಿಬೀಡು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ