ಆ್ಯಪ್ನಗರ

ಕುದೇರಿನಲ್ಲಿ ಮಾರಿಹಬ್ಬ ಸಂಭ್ರಮ

ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದಲ್ಲಿ ಮಾರಿ ಹಬ್ಬದ ಅಂಗವಾಗಿ ದೇವಿ ಮೆರವಣಿಗೆ ನಡೆಯಿತು.

Vijaya Karnataka 27 Mar 2019, 5:00 am
ಸಂತೇಮರಹಳ್ಳಿ : ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದಲ್ಲಿ ಮಾರಿ ಹಬ್ಬದ ಅಂಗವಾಗಿ ದೇವಿ ಮೆರವಣಿಗೆ ನಡೆಯಿತು.
Vijaya Karnataka Web marhihabha is celebrated in cuddalore
ಕುದೇರಿನಲ್ಲಿ ಮಾರಿಹಬ್ಬ ಸಂಭ್ರಮ


ಮಾರಿ ಹಬ್ಬದ ಅಂಗವಾಗಿ ಕುದೇರು, ಬಡಗಲಮೋಳೆ, ತೆಂಕಲಮೋಳೆ ಸೇರಿದಂತೆ ಮೂರು ಗ್ರಾಮದ ಗ್ರಾಮಸ್ಥರು ಕುದೇರು ಗ್ರಾಮದ ಕೆರೆ ಬಳಿ ಇರುವ ಆಲದ ಮರದ ಬಳಿ ಮಾರಮ್ಮ ದೇವಿ ಬೆಳ್ಳಿ ವಿಗ್ರಹ ಸ್ವಚ್ಫಗೊಳಿಸಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.

ನಂತರ ಮಾರಮ್ಮ ದೇವಿಯನ್ನು ಸತ್ತಿಗೆ, ಸೂರಿಪಾನಿ, ವಾದ್ಯಗೋಷ್ಠಿ, ತಮಟೆ, ಗೊಂಬು ಕಹಳೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಮಾರಮ್ಮ ದೇವಿ ಪ್ರತಿಷ್ಠಾಪನೆ ಮಾಡಲಾಯಿತು.

ಮೆರವಣಿಗೆಯಲ್ಲಿ ವಾದ್ಯಗೋಷ್ಠಿ ಸದ್ದಿಗೆ ಮಾರಿಕುಣಿತಾ ಹೆಜ್ಜೆ ಹಾಕಿದ ಯುವ ಸಮೂಹ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಂತರ ದೇವಸ್ಥಾನ ಆವರಣದಲ್ಲಿ ಮಡೆ ಉತ್ಸವ ನಡೆದ ನಂತರ ದೇವಿಗೆ ಮಡೆ ಅನ್ನದಿಂದ ನೈವೇದ್ಯ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.

ನಂತರ ಸಂಜೆ ಮಾರಮ್ಮ ದೇವಿ ವಿಗ್ರಹವನ್ನು ಸತ್ತಿಗೆ, ಸೂರಿಪಾನಿಗಳ ಮೂಲಕ ಬಡಗಲಮೋಳೆ ಹಾಗೂ ತೆಂಕಲಮೋಳೆಯಲ್ಲಿ ಮೆರವಣಿಗೆ ನಡೆಯಿತು.

ಮೆರವಣಿಗೆ ಹಿನ್ನೆಲೆಯಲ್ಲಿ ಮಾರಮ್ಮ ದೇವಸ್ಥಾನ ಸೇರಿದಂತೆ ನಾನಾ ಬಗೆಯ ಮುಖ್ಯ ರಸ್ತೆ ತಳೀರು ತೊರಣ ಸಿಂಗರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ