ಆ್ಯಪ್ನಗರ

ರಥಸಪ್ತಮಿ ಅಂಗವಾಗಿ ಸಾಮೂಹಿಕ ಯೋಗ

ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ಓಂಕಾರ ಮೊಳಗಿತ್ತಲ್ಲದೇ ಯೋಗಾಭ್ಯಾಸವೂ ಸಾಗಿತ್ತು.

Vijaya Karnataka 13 Feb 2019, 5:00 am
ಚಾಮರಾಜನಗರ: ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ಓಂಕಾರ ಮೊಳಗಿತ್ತಲ್ಲದೇ ಯೋಗಾಭ್ಯಾಸವೂ ಸಾಗಿತ್ತು.
Vijaya Karnataka Web mass yoga as part of rathasaptami
ರಥಸಪ್ತಮಿ ಅಂಗವಾಗಿ ಸಾಮೂಹಿಕ ಯೋಗ


ಅಲ್ಲಿ ಕಿರಿಯರಿಂದ ಹಿರಿಯರಾದಿಯಾಗಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸಿದರು.

ಇದಕ್ಕೆ ಕಾರಣ ರಥಸಪ್ತಮಿ ಅಂಗವಾಗಿ ಆಯೋಜಿಸಲಾಗಿದ್ದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮ.

ಶ್ರೀಪತಂಜಲಿ ಯೋಗ ಶಿಕ್ಷ ಣ ಸಮಿತಿ ಹಾಗೂ ಸೇವಾ ಭಾರತಿ ಟ್ರಸ್ಟ್‌ ಸಹಯೋಗದಲ್ಲಿ 9ನೇ ವರ್ಷದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಅವರು, ಆರೋಗ್ಯವಂತ ಜೀವನ ಕ್ರಮವನ್ನು ಕಲಿಸುವ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ಯೋಗಾಭ್ಯಾಸವನ್ನು ಕಲಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ. ಅನಾದಿ ಕಾಲದಲ್ಲೇ ಪಂತಜಲಿ ಮಹಾಮುನಿಗಳು ಯೋಗಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಯೋಗದಿಂದ ಸಕಲ ರೋಗಗಳ ನಿಗ್ರಹ ಹಾಗೂ ನಿರೋಧಕ ಶಕ್ತಿ ಇದೆ ಎಂಬುವುದು ವೈಜ್ಞಾನಿಕವಾಗಿಯು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆಯು ಯೋಗಾಭ್ಯಾಸದ ಕಡೆಗೆ ಹೆಚ್ಚು ಒಲವು ಹೊಂದಲು ಪ್ರಾಥಮಿಕ ಶಿಕ್ಷ ಣ ಹಂತದಲ್ಲಿಯೇ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆ ಕ್ರಮಗಳ ಬಗ್ಗೆ ಪಠ್ಯ ಚಟುವಟಿಕೆಯಲ್ಲಿ ಅಳವಡಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಥಸಪ್ತಮಿ ದಿನದಂದು ಯೋಗಾಭ್ಯಾಸ ಮತ್ತು ಸಾಮೂಹಿಕ 108 ಸೂರ್ಯ ನಮಸ್ಕಾರ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುತ್ತದೆ. ಬೆಳಗಿನ ಸಮಯದಲ್ಲಿ ಉದಯಿಸುವ ಸೂರ್ಯನಿಂದ ಹೊರ ಹೊಮ್ಮುವ ಕಿರಣಗಳು ಮೈಮೇಲೆ ಬೀಳುವುದರಿಂದ ವಿಟಮಿನ್‌ ಡಿ ಹೆಚ್ಚಿಗೆ ದೇಹಕ್ಕೆ ದೊರೆಯುವುದರಿಂದ ಮೂಳೆಗಳು ಶಕ್ತಿಯುತವಾಗಿರುತ್ತವೆ ಎಂದರು.

ಸತತ 8 ವರ್ಷಗಳಿಂದ ಪತಂಜಲಿ ಯೋಗ ಶಿಕ್ಷ ಣ ಸಮಿತಿ ಹಾಗೂ ಸೇವಾ ಭಾರತಿ ಶಿಕ್ಷ ಣ ಟ್ರಸ್ಟ್‌ ಚಾಮರಾಜನಗರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಾ, ಜನರಲ್ಲಿ ಆರೋಗ್ಯಪೂರ್ಣವಾದ ಯೋಗಾಭ್ಯಾಸವನ್ನು ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಮಾತನಾಡಿ, ಯೋಗಾಭ್ಯಾಸದಿಂದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಪತಂಜಲಿ ಯೋಗ ಶಿಕ್ಷ ಣ ಸಮಿತಿ ಯೋಗ ತರಗತಿಗಳನ್ನು ನಿರಂತವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ನ್ಯಾಯಾಧೀಶರಾದ ವಿನಯ್‌, ಪತಂಜಲಿ ಯೋಗ ಶಿಕ್ಷ ಣ ಸಮಿತಿಯ ಜಿಲ್ಲಾಧ್ಯಕ್ಷ ಎಚ್‌.ಜಿ. ಕುಮಾರಸ್ವಾಮಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ. ಮಾನಸ ಮಾತನಾಡಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ. ರಾಚಯ್ಯ, ಸೇವಾಭಾರತಿ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವ್‌ರಾವ್‌, ಪತಂಜಲಿ ಯೋಗ ಸಂಸ್ಥೆಯ ಪ್ರಧಾನ ಸಂಚಾಲಕ ಯೋಗ ಪ್ರಕಾಶ್‌, ನಿಜಗುಣ, ಸಿದ್ದರಾಜು, ಸಮಿತಿಯ ಮುಖ್ಯ ಶಿಕ್ಷ ಕ ಕೆ.ಜಿ. ಪ್ರಕಾಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ