ಕೆಆರ್ಎಸ್ಗೆ ಅಪಾಯವಾದರೆ ಗಣಿಗಾರಿಕೆ ಸ್ಥಗಿತ ಮಾಡಲಿ: ಯದುವೀರ ಒಡೆಯರ್
'ಕೆಆರ್ಎಸ್ ವಿಚಾರದಲ್ಲಿ ರಾಜಕೀಯದವರು ನೀಡುವ ಹೇಳಿಕೆಗಳನ್ನು ಮಾಧ್ಯಮಗಳಷ್ಟೇ ನೋಡಿದ್ದೇನೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಕ್ಸ್ಪರ್ಟ್ ಪ್ಯಾನಲ್ನವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ' - ಯದುವೀರ್
Vijaya Karnataka 20 Jul 2021, 10:09 pm
ಹೈಲೈಟ್ಸ್:
- ರಾಜ್ಯ ಸರಕಾರವೇ ತಜ್ಞರಿಂದ ತನಿಖೆ ನಡೆಸಬೇಕು
- ಹಿಂದೆ ಮೈಸೂರು ಮಹಾಸಂಸ್ಥಾನ ಜನರ ರಕ್ಷಣೆಗಾಗಿ ನೀಡಿದ ಕೊಡುಗೆ ಇದು
- ಹಿಂದೆ ಉಪಯೋಗ ಆಗಿದೆ, ಮುಂದೆಯೂ ಆಗುತ್ತದೆ: ಒಡೆಯರ್
ಗುಂಡ್ಲುಪೇಟೆ (ಚಾಮರಾಜನಗರ): ಕೆಆರ್ಎಸ್ ಅಣೆಕಟ್ಟೆಗೆ ಅಪಾಯ ಉಂಟಾಗುತ್ತದೆ ಎಂದಾದರೆ ಅಕ್ರಮ ಗಣಿಗಾರಿಕೆ ಸ್ಥಗಿತ ಮಾಡಲೇಬೇಕಾಗುತ್ತದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂಗಳದಲ್ಲಿ ವಸತಿ ಸಚಿವ ವಿ. ಸೋಮಣ್ಣರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಂಥಾಲಯ ಕೊಡುಗೆ ಮತ್ತು ಬುಡಕಟ್ಟು ಸಮುದಾಯದ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
'ಕೆಆರ್ಎಸ್ ವಿಚಾರದಲ್ಲಿ ರಾಜಕೀಯದವರು ನೀಡುವ ಹೇಳಿಕೆಗಳನ್ನು ಮಾಧ್ಯಮಗಳಷ್ಟೇ ನೋಡಿದ್ದೇನೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಕ್ಸ್ಪರ್ಟ್ ಪ್ಯಾನಲ್ನವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಯದುವೀರ್ ಹೇಳಿದರು.
ಕೆಆರ್ಎಸ್ ಪಕ್ಕದಲ್ಲೇ ಗಣಿಗಾರಿಕೆ ಬಗ್ಗೆ ಕೇಳಿದಾಗ, 'ಅರಮನೆ ಕಡೆಯಿಂದ ಮಾಹಿತಿ ಇಲ್ಲ. ಆಡಳಿತ ಮಂಡಳಿ ಮತ್ತು ರಾಜ್ಯ ಸರಕಾರವೇ ತಜ್ಞರಿಂದ ತನಿಖೆ ನಡೆಸಿ ತಿಳಿಸಿಕೊಡಬೇಕು. ಹಿಂದೆ ಮೈಸೂರು ಮಹಾಸಂಸ್ಥಾನ ಜನರ ರಕ್ಷಣೆಗಾಗಿ ನೀಡಿದ ಕೊಡುಗೆ. ಇದು ಹಿಂದೆ ಉಪಯೋಗ ಆಗಿದೆ. ಮುಂದೆಯೂ ಆಗುತ್ತದೆ. ರಾಜ್ಯ ಸರಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದಷ್ಟೇ ಯದುವೀರ್ ಒಡೆಯರ್ ಹೇಳಿದರು.
'ಕೆಆರ್ಎಸ್ ವಿಚಾರದಲ್ಲಿ ರಾಜಕೀಯದವರು ನೀಡುವ ಹೇಳಿಕೆಗಳನ್ನು ಮಾಧ್ಯಮಗಳಷ್ಟೇ ನೋಡಿದ್ದೇನೆ. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಎಕ್ಸ್ಪರ್ಟ್ ಪ್ಯಾನಲ್ನವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಯದುವೀರ್ ಹೇಳಿದರು.
ಕೆಆರ್ಎಸ್ ಪಕ್ಕದಲ್ಲೇ ಗಣಿಗಾರಿಕೆ ಬಗ್ಗೆ ಕೇಳಿದಾಗ, 'ಅರಮನೆ ಕಡೆಯಿಂದ ಮಾಹಿತಿ ಇಲ್ಲ. ಆಡಳಿತ ಮಂಡಳಿ ಮತ್ತು ರಾಜ್ಯ ಸರಕಾರವೇ ತಜ್ಞರಿಂದ ತನಿಖೆ ನಡೆಸಿ ತಿಳಿಸಿಕೊಡಬೇಕು. ಹಿಂದೆ ಮೈಸೂರು ಮಹಾಸಂಸ್ಥಾನ ಜನರ ರಕ್ಷಣೆಗಾಗಿ ನೀಡಿದ ಕೊಡುಗೆ. ಇದು ಹಿಂದೆ ಉಪಯೋಗ ಆಗಿದೆ. ಮುಂದೆಯೂ ಆಗುತ್ತದೆ. ರಾಜ್ಯ ಸರಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದಷ್ಟೇ ಯದುವೀರ್ ಒಡೆಯರ್ ಹೇಳಿದರು.