ಆ್ಯಪ್ನಗರ

ಶಿಕ್ಷ ಕರ ಹಕ್ಕೋತ್ತಾಯಗಳ ಈಡೇರಿಕೆಗೆ ಸಚಿವರ ಭರವಸೆ

ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷ ಕರ ಸಂಘದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ, ಪ್ರೌಢಶಾಲಾ ಶಿಕ್ಷ ಕರ ನಾನಾ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

Vijaya Karnataka 10 Jul 2018, 5:00 am
ಚಾಮರಾಜನಗರ: ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷ ಕರ ಸಂಘದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ, ಪ್ರೌಢಶಾಲಾ ಶಿಕ್ಷ ಕರ ನಾನಾ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
Vijaya Karnataka Web ministers promise to fulfill the punitive matters
ಶಿಕ್ಷ ಕರ ಹಕ್ಕೋತ್ತಾಯಗಳ ಈಡೇರಿಕೆಗೆ ಸಚಿವರ ಭರವಸೆ


2008 ಆ.1 ರ ನಂತರ ಪ್ರೌಢ ಶಾಲೆಗಳಿಗೆ ನೇರ ನೇಮಕಾತಿಗೊಂಡ ಮತ್ತು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಪಡೆದ ಸಹ ಶಿಕ್ಷ ಕರಿಗೆ ವಿಶೇಷ ಭತ್ಯೆ ಯನ್ನು ಕೊಡದೇ ತಾರತಮ್ಯ ಮಾಡಲಾಗಿದ್ದು, ಇದರಿಂದಾಗಿ 6ನೇ ವೇತನ ಆಯೋಗದಲ್ಲಿ ಒಂದು ವೇತನ ಬಡ್ತಿ ನಷ್ಟವಾಗಿರುತ್ತದೆ ಇದರಿಂದ ಶಿಕ್ಷ ಕರ ನಡುವೆ ಅಸಮಾನತೆ ಹುಟ್ಟಿಕೊಳ್ಳುತ್ತದೆ ಆ ಹಿನ್ನೆಲೆಯಲ್ಲಿ ಬಡ್ತಿ ಹೊಂದಿದ ಪ್ರೌಢಶಾಲಾ ಸಹ ಶಿಕ್ಷ ಕರಿಗೂ ವಿಶೇಷ ಭತ್ಯೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಎರಡು ವರ್ಷಗಳಿಂದ ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಯು ಸ್ಥಗಿತಗೊಂಡಿದೆ ಇದರಿಂದ ಶಿಕ್ಷ ಕರು ಮತ್ತು ಅವರ ಕುಟುಂಬದ ಸದಸ್ಯರು ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದ್ದು, ಕೂಡಲೇ ರಾಜ್ಯಸರಕಾರ ಹೊಸ ವರ್ಗಾವಣೆ ನೀತಿಯ ವಿರುದ್ದವಾಗಿ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರುಗಳನ್ನು ತೆರವು ಗೊಳಿಸಿ ಕೂಡಲೇ ವರ್ಗಾವಣೆ ಪ್ರಕ್ರಿಯೆಯನ್ನು ನಿಯಮಾನುಸಾರ ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

2006 ಏ.1 ರ ನಂತರ ನೇಮಕಗೊಂಡ ಶಿಕ್ಷ ಕರು ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿದ್ದು, ಇದು ನೌಕರರ ಭವಿಷ್ಯದ ಜೀವನಕ್ಕೆ ಮಾರಕವಾಗಿದೆ. ಆದ್ದರಿಂದ ಇದನ್ನು ರದ್ದುಪಡಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

ಅನುದಾನಿತ ಪ್ರೌಢಶಾಲೆಗಳ ಶಿಕ್ಷ ಕರಿಗೆ ಕುಟುಂಬ ನಿವೃತ್ತಿ ವೇತನ(ಡಿ.ಸಿ.ಆರ್‌.ಜಿ) ಮತ್ತು ಕಾಲ್ಪನಿಕ ವೇತನ ಬಡ್ತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷ ಕರ ಸಂಘದ ಕಚೇರಿ ನಿರ್ಮಾಣಕ್ಕಾಗಿ ನಗರದಲ್ಲಿ ಒಂದು ನಿವೇಶನದ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂಬ ಹಕ್ಕೋತ್ತಾಯಗಳನ್ನು ಮುಖ್ಯಮಂತ್ರಿ ಹಾಗೂ ಶಿಕ್ಷ ಣ ಸಚಿವರ ಗಮನಕ್ಕೆ ತಂದು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿದ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷ ಣ ಸಚಿವರಿಗೆ ಪತ್ರ ಬರೆದು ಹಕ್ಕೋತ್ತಾಯ ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷ ಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಕಾರ್ಯದರ್ಶಿ ಕೆ.ಎಸ್‌.ಮಹದೇವಸ್ವಾಮಿ, ಉಪಾಧ್ಯಕ್ಷ ನಿಂಗೇಗೌಡ, ಸರಕಾರಿ ನೌಕರರ ಸಂಘದ ಸಿದ್ದರಾಜು, ಗಜೇಂದ್ರ, ಜಿಲ್ಲಾ ಎನ್‌.ಪಿ.ಎಸ್‌ ನೌಕರರ ಸಂಘದ ಅಧ್ಯಕ್ಷ ಕೊತ್ತಲವಾಡಿ ಮಹದೇವಸ್ವಾಮಿ, ಶಿಕ್ಷ ಕರಾದ ಗೋವಿಂದರಾಜು, ಶಿಕ್ಷ ಣ ಸಂಯೋಜಕ ಎಂ.ಕುಮಾರ್‌, ಮುಖ್ಯ ಶಿಕ್ಷ ಕ ಜಗದೀಶ್‌, ಶಿವಕುಮಾರ್‌, ಕೃಷ್ಣಕುಮಾರ್‌, ಮಲ್ಲಶೆಟ್ಟಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ