ಆ್ಯಪ್ನಗರ

ಚಾಮರಾಜನಗರ: 16 ವಿಚಾರಣಾ ಕೈದಿಗಳಿಗೆ ಸೋಂಕು

ಇನ್ನುಳಿದ ಕೈದಿಗಳಿಗೂ ಟೆಸ್ಟ್ ಮಾಡಿಸಲಾಗುವುದು. ಜೈಲಿನಲ್ಲಿರುವ ಕೈದಿಗಳಿಗೆ ಹೇಗೆ ಸೋಂಕು ತಗುಲಿತು ಎಂಬುದು ತಿಳಿದಿಲ್ಲ. ಹೊಸ ಕೈದಿಗಳನ್ನು ಕಾರಾಗೃಹ ಕ್ಕೆ ಹಾಕುವ ಮುನ್ನವೇ ಟೆಸ್ಟ್ ಮಾಡಿಸಲಾಗುವುದು. ಹೀಗಿರುವಾಗ ಈ 16 ಮಂದಿಗೆ ಸೋಂಕು ತಗುಲಿರುವುದು ಕಾರಾಗೃಹ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

Vijaya Karnataka Web 14 Oct 2020, 12:51 pm
ಚಾಮರಾಜನಗರ: ನಗರದ ಜಿಲ್ಲಾ ಕಾರಾಗೃಹದಲ್ಲಿರುವ 16 ಮಂದಿ ವಿಚಾರಣಾಧೀನ ಕೈದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
Vijaya Karnataka Web ಕೊರೊನಾ
ಕೊರೊನಾ


ಕಾರಾಗೃಹದಲ್ಲಿ ಸದ್ಯ 120 ಮಂದಿ ಕೈದಿಗಳಿದ್ದು, ಈ ಪೈಕಿ ಮಂಗಳವಾರ 58 ಮಂದಿಗೆ ಆಂಟಿಜೆನ್‌ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಇವರಲ್ಲಿ 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಸೋಂಕು ತಗುಲಿರುವ ಕೈದಿಗಳಲ್ಲಿ ಯಾವುದೇ ಕೋವಿಡ್ ರೋಗ ಲಕ್ಷಣ ಇಲ್ಲವಾದ್ದರಿಂದ ನಗರದ ಎಂಜಿನಿರಿಂಗ್ ಕಾಲೇಜು ಕಟ್ಟಡದಲ್ಲಿನ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಕಾರಾಗೃಹ ಅಧಿಕಾರಿ ವಿಜಯ್ ತಿಳಿಸಿದರು.

ಇನ್ನುಳಿದ ಕೈದಿಗಳಿಗೂ ಟೆಸ್ಟ್ ಮಾಡಿಸಲಾಗುವುದು. ಜೈಲಿನಲ್ಲಿರುವ ಕೈದಿಗಳಿಗೆ ಹೇಗೆ ಸೋಂಕು ತಗುಲಿತು ಎಂಬುದು ತಿಳಿದಿಲ್ಲ. ಹೊಸ ಕೈದಿಗಳನ್ನು ಕಾರಾಗೃಹ ಕ್ಕೆ ಹಾಕುವ ಮುನ್ನವೇ ಟೆಸ್ಟ್ ಮಾಡಿಸಲಾಗುವುದು. ಹೀಗಿರುವಾಗ ಈ 16 ಮಂದಿಗೆ ಸೋಂಕು ತಗುಲಿರುವುದು ಕಾರಾಗೃಹ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ