ಆ್ಯಪ್ನಗರ

ತಾಯಿಯ ಅಗಲಿಕೆ ದುಃಖದ ನಡುವೆಯೂ ಪರೀಕ್ಷೆ ಬರೆದ ಮಕ್ಕಳು

ತಾಯಿಯ ಆಗಲಿಕೆ ನಡುವೆಯೂ ಈ ಮೂರು ಮಕ್ಕಳು ದುಃಖವನ್ನು ಬದಿಗೊತ್ತಿ ಮಂಗಳವಾರ ತಾಯಿ ಆಸೆ ಈಡೇರಿಸುವ ಸಲುವಾಗಿ ಮೌಲ್ಯಾಂಕನ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

Vijaya Karnataka 19 Dec 2018, 5:00 am
ಹನೂರು: ತಾಯಿಯ ಆಗಲಿಕೆ ನಡುವೆಯೂ ಈ ಮೂರು ಮಕ್ಕಳು ದುಃಖವನ್ನು ಬದಿಗೊತ್ತಿ ಮಂಗಳವಾರ ತಾಯಿ ಆಸೆ ಈಡೇರಿಸುವ ಸಲುವಾಗಿ ಮೌಲ್ಯಾಂಕನ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
Vijaya Karnataka Web mothers departure is a test written children despite sadness
ತಾಯಿಯ ಅಗಲಿಕೆ ದುಃಖದ ನಡುವೆಯೂ ಪರೀಕ್ಷೆ ಬರೆದ ಮಕ್ಕಳು


ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೈಸೂರಿನ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದ ತಾಲೂಕಿನ ಎಂ.ಜಿ.ದೊಡ್ಡಿಯ ಮುರುಗೇಶ್‌ ಅವರ ಪತ್ನಿ ಮಹೇಶ್ವರಿ(32) ಅವರ ಮೂವರು ಮಕ್ಕಳು ತಾಯಿಯ ಆಸೆ ಈಡೇರಿಸುವ ಸಲುವಾಗಿ ದುಃಖದ ನಡುವೆಯೂ ಮಂಗಳವಾರ ಶಾಲೆಯಲ್ಲಿ ಪರೀಕ್ಷೆ ಬರೆದರು.

ಹನೂರು ತಾಲೂಕು ಕೌದಳ್ಳಿಯ ಸೇಂಟ್‌ ಅಂಥೋಣಿ ವಿದ್ಯಾಸಂಸ್ಥೆಯಲ್ಲಿ ಹಿರಿಯ ಮಗಳು ಕಾವ್ಯ 9ನೇ ತರಗತಿ, ಎರಡನೇ ಮಗಳು ಕೀರ್ತನಾ 8ನೇ ತರಗತಿ, ಮಗ ವರುಣ್‌ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೊದಲ ಮಗಳನ್ನು ಲೆಕ್ಚರರ್‌ ಹಾಗೂ ಎರಡನೇ ಮಗಳನ್ನು ಪೊಲೀಸ್‌ ಮಾಡುವ ಆಸೆಯನ್ನು ತಾಯಿ ಹೊಂದಿದ್ದರು. ಕೂಲಿ ಮಾಡಿದರೂ ಮಕ್ಕಳಿಗೆ ಉತ್ತಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ