ಆ್ಯಪ್ನಗರ

​ಸಂಸದ-ಸರಕಾರ:ಇಂದು ನಿರ್ಧಾರ

ಮತ ಎಣಿಕೆ ದಿನ ಬಂದೇ ಬಿಟ್ಟಿದ್ದುಘಿ, ಇದೀಗ ಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ.

Vijaya Karnataka 22 May 2019, 8:49 pm
ಚಾಮರಾಜನಗರ: ಮತ ಎಣಿಕೆ ದಿನ ಬಂದೇ ಬಿಟ್ಟಿದ್ದುಘಿ, ಇದೀಗ ಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ.
Vijaya Karnataka Web CHN-CHN23P1


ಗುರುವಾರ (ಇಂದು) ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಶುರುವಾಗಲಿದ್ದುಘಿ, ಒಟ್ಟು 21 ಸುತ್ತುಗಳಲ್ಲಿ ನಡೆಯಲಿದೆ. ಚಾ.ನಗರದ ಸರಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಒಟ್ಟು 9 ಕೊಠಡಿಗಳಲ್ಲಿ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ. ಈ ಬಾರಿ ಅಧಿಕೃತ ಲಿತಾಂಶ ಪ್ರಕಟವಾಗುವುದು ಸಂಜೆಯಾಗಬಹುದು. ಆದರೆ, ಸುತ್ತುವಾರು ಎಣಿಕೆ ಪ್ರಗತಿ ಕಾಣುತ್ತಲೇ ಮಧ್ಯಾಹ್ನದ ವೇಳೆಗೆ ಲಿತಾಂಶದ ಚಿತ್ರಣ ದೊರೆಯಲಿದೆ.

ಸಕಲ ಸಿದ್ಧತೆ: ಇನ್ನು ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಕೈಗೊಂಡಿದೆ. ಬುಧವಾರದಿಂದಲೇ ಎಣಿಕೆಗೆ ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ಮಗ್ನರಾಗಿದ್ದರು.

ಮತ ಎಣಿಕೆ ಕಾರ್ಯಕ್ಕಾಗಿ 133 ಮಂದಿ ಎಣಿಕೆ ಮೇಲ್ವಿಚಾರಕರು, 133 ಮಂದಿ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದ್ದುಘಿ, 149 ಮಂದಿ ಮೈಕ್ರೋ ಅಬ್ಸರ್‌ವರ್‌ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಪಕ್ಷಗಳ 391 ಮಂದಿ ಎಣಿಕೆ ಏಜೆಂಟ್‌ಗಳು ಸಹ ಇರಲಿದ್ದಾರೆ.

ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದುಘಿ, ಸಿದ್ಧತೆ ಕಾರ್ಯ ನಡೆಯುತ್ತಿರುವ ಪ್ರದೇಶಕ್ಕೆ ಪೂರ್ವಾನುಮತಿ ಇಲ್ಲದೇ ಪ್ರವೇಶ ನಿರ್ಬಂಧಿಸಲಾಗಿತ್ತುಘಿ. ಎಣಿಕೆ ನಡೆಯುವ ದಿನ ಕೇಂದ್ರದ ಸುತ್ತ ಬಂದೋಬಸ್ತ್‌ಗಾಗಿ 600 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದುಘಿ, ಬುಧವಾರವೇ ಸಾಕಷ್ಟು ಮಂದಿ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಅವರು ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಲಿತಾಂಶ: ುಲ್ ಟೆನ್ಷನ್ : ಗುರುವಾರದ ಲಿತಾಂಶ ಅಭ್ಯರ್ಥಿಗಳಲ್ಲಷ್ಟೇ ಅಲ್ಲಘಿ, ರಾಜಕೀಯ ಪಕ್ಷಗಳ ಮುಖಂಡರು, ಕಾರ‌್ಯಕರ್ತರು ಹಾಗೂ ರಾಜಕೀಯಾಸಕ್ತರಲ್ಲಿ ಸಾಕಷ್ಟು ಕುತೂಹಲದೊಂದಿಗೆ ಆತಂಕವನ್ನೂ ಮೂಡಿಸಿದೆ.

ಯಾರು ಗೆಲ್ಲಲಿದ್ದಾರೆ. ಚಾ.ನಗರ ಲೋಕಸಭೆ ಕ್ಷೇತ್ರಕ್ಕೆ ಮುಂದಿನ ಸಂಸದ ಯಾರು ? ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಹ್ಯಾಟ್ರಿಕ್ ಬಾರಿಸುತ್ತಾರಾ ಅಥವಾ ಹಿಂದೆ ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ ವಿ. ಶ್ರೀನಿವಾಸ ಪ್ರಸಾದ್ ಈ ಬಾರಿ ಗೆದ್ದು ಬಿಜೆಪಿಯ ಕಮಲವನ್ನು ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಅರಳಿಸಲಿದ್ದಾರಾ ಎಂಬ ಕುತೂಹಲ ಭರಿತ ಪ್ರಶ್ನೆಗಳು ಇದ್ದೇ ಇವೆ.
ಹಾಗೆ ನೋಡಿದರೆ ಉಭಯ ಪಕ್ಷಗಳಲ್ಲೂ ಗೆಲುವಿನ ಆತ್ಮ ವಿಶ್ವಾಸ ಭರ್ಜರಿಯಾಗಿಯೇ ಇದೆ. ವಿಜಯೋತ್ಸವಕ್ಕೆ ಎರಡು ಪಕ್ಷಗಳಲ್ಲೂ ಸಿದ್ಧತೆ ನಡೆದಿದೆ. ಆದರೆ, ಅಂತಿಮವಾಗಿ ಗೆಲುವು ಯಾರದು ಎಂಬುದು ಗುರುವಾರ ಮಧ್ಯಾಹ್ನದೊಳಗೆ ಬಹಿರಂಗಗೊಳ್ಳಲಿದೆ.

ಏ.18ಕ್ಕೆ ಮೊದಲ ಹಂತ ಚುನಾವಣೆ ಮೂಲಕ ಕ್ಷೇತ್ರದಲ್ಲಿ ಮತದಾನ ಪೂರ್ಣಗೊಂಡಿತ್ತಾದರೂ ಲಿತಾಂಶಕ್ಕಾಗಿ ಒಂದು ತಿಂಗಳು ಕಾಯಬೇಕಾಯಿತು. ರಾಜಕೀಯಾಸ್ತರಲ್ಲಿ ಕ್ಷೇತ್ರದ ಲಿತಾಂಶ ಏನಾಗಲಿದೆ ಎಂಬ ಕುತೂಹಲ ಇದ್ದೇ ಇತ್ತುಘಿ. ಇದೀಗ ಅದಕ್ಕೆ ಉತ್ತರ ಸಿಗುವ ಸಮಯ ಇದೀಗ ಬಂದೇ ಬಿಟ್ಟಿದೆ.

ದೊಡ್ಡ ಪರದೆಯಲ್ಲಿ ಲಿತಾಂಶ
ಇನ್ನು ಲೋಕಸಭೆ ಚುನಾವಣೆ ಲಿತಾಂಶವನ್ನು ಒಟ್ಟಿಗೆ ಕುಳಿತು ವೀಕ್ಷಿಸಲು ಬಿಜೆಪಿ ಮುಖಂಡ, ರಾಜ್ಯಕಾರ್ಯಕಾರಿಣಿ ಸದಸ್ಯರಾದ ನಿಜಗುಣರಾಜು ದೊಡ್ಡ ಪರದೆಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಇವರು ತಮ್ಮ ಹೋಟೆಲ್ ನಿಜಗುಣ ರೆಸಿಡೆನ್ಸಿಯಲ್ಲಿ ಇಂತದ್ದೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ತಮ್ಮ ಪಕ್ಷ ಈ ಬಾರಿ ಭರ್ಜರಿ ವಿಜಯ ಸಾಧಿಸಲಿದ್ದುಘಿ, ಅದನ್ನು ದೊಡ್ಡ ಪರದೆಯಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ನೋಡುವ ಉದ್ದೇಶದೊಂದಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಚಾ.ನಗರದಲ್ಲೂ ಸಹ ನಮ್ಮ ಪಕ್ಷದ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ಗೆಲುವು ನಿಶ್ಚಿತ. ಈ ಮಾತನ್ನು ತಾನು ಸಮೀಕ್ಷೆಗಳನ್ನು ನೋಡಿ ಹೇಳುತ್ತಿಲ್ಲ . ಕ್ಷೇತ್ರದ ಎಲ್ಲ 8 ವಿಧಾನಸಭೆ ಕ್ಷೇತ್ರಗಳ ಪ್ರವಾಸ ಕೈಗೊಂಡು ಮತದಾರರ ಅಭಿಪ್ರಾಯ ಸಂಗ್ರಹಿಸಿದ್ದುಘಿ, ಗೆಲುವಿನ ವಿಶ್ವಾಸವಿದೆ.
- ವಿ. ಶ್ರೀನಿವಾಸಪ್ರಸಾದ್, ಬಿಜೆಪಿ ಅಭ್ಯರ್ಥಿ

ನನ್ನ ಗೆಲುವಿನ ಬಗ್ಗೆ ಪೂರ್ಣ ವಿಶ್ವಾಸವಿದೆ. ನಮ್ಮ ಮುಖಂಡರು, ಕಾರ್ಯಕರ್ತರು ಆರಂಭದಿಂದಲೂ ವ್ಯವಸ್ಥಿತ ಪ್ರಚಾರ ಕೈಗೊಂಡಿದ್ದರು. ಅಲ್ಲದೇ ಅಭಿವೃದ್ಧಿ ಕುರಿತು ಜನತೆಗೂ ತಿಳಿದಿತ್ತುಘಿ. ಹೀಗಾಗಿ ಪ್ರಜ್ಞಾವಂತ ಮತದಾರರು ನನ್ನನ್ನು ಈ ಬಾರಿಯೂ ಆಶೀರ್ವದಿಸಿದ್ದುಘಿ, ಗೆಲುವು ಖಚಿತ.
-ಆರ್. ಧ್ರುವನಾರಾಯಣ, ಕಾಂಗ್ರೆಸ್ ಅಭ್ಯರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ