ಯುವಕನ ಕೊಲೆ
ಕ್ಷ ಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಕನೊಬ್ಬನ ಕೊಲೆಯಾಗಿರುವ ಪ್ರಕರಣ ಶನಿವಾರ ಸಂಜೆ ನಗರದ ಉಪ್ಪಾರ ಬಡಾವಣೆಯಲ್ಲಿ ನಡೆದಿದೆ.
Vijaya Karnataka 22 Apr 2019, 5:00 am
ಚಾಮರಾಜನಗರ : ಕ್ಷ ಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಕನೊಬ್ಬನ ಕೊಲೆಯಾಗಿರುವ ಪ್ರಕರಣ ಶನಿವಾರ ಸಂಜೆ ನಗರದ ಉಪ್ಪಾರ ಬಡಾವಣೆಯಲ್ಲಿ ನಡೆದಿದೆ.
ಮಹೇಶ್(19) ಕೊಲೆಯಾದವ. ಮಹೇಶ್ ಸೇರಿದಂತೆ ಮತ್ತೊಬ್ಬ ಮಹೇಶ್, ಗುರು, ಕಿರಣ್, ಲೋಕೇಶ್ ದೇವರಗುಡ್ಡರಾಗಿದ್ದರು.
ಪೂಜೆ ಮಾಡುವ ವಿಚಾರದಲ್ಲಿ ಶನಿವಾರ ಸಂಜೆ ಮಹೇಶ್ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಾತ್ರಿ ಮಹೇಶ್ ಮೃತಪಟ್ಟಿದ್ದಾನೆ.
ಮೃತನ ತಾಯಿ ಭಾನುವಾರ ಬೆಳಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಎಸ್ಐ ರವಿಕಿರಣ್ ಅವರು ತನಿಖೆ ನಡೆಸಿ ಮಹೇಶ್ ಮತ್ತು ಕಿರಣ್ರನ್ನು ಬಂಧಿಸಿದ್ದಾರೆ. ಹಲ್ಲೆ ನಡೆಸಿದವರ ಪೈಕಿ ಗುರು ಮತ್ತು ಲೋಕೇಶ್ ನಾಪತ್ತೆಯಾಗಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತ ಯುವಕನ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.
ಮಹೇಶ್(19) ಕೊಲೆಯಾದವ. ಮಹೇಶ್ ಸೇರಿದಂತೆ ಮತ್ತೊಬ್ಬ ಮಹೇಶ್, ಗುರು, ಕಿರಣ್, ಲೋಕೇಶ್ ದೇವರಗುಡ್ಡರಾಗಿದ್ದರು.
ಪೂಜೆ ಮಾಡುವ ವಿಚಾರದಲ್ಲಿ ಶನಿವಾರ ಸಂಜೆ ಮಹೇಶ್ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಾತ್ರಿ ಮಹೇಶ್ ಮೃತಪಟ್ಟಿದ್ದಾನೆ.
ಮೃತನ ತಾಯಿ ಭಾನುವಾರ ಬೆಳಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಎಸ್ಐ ರವಿಕಿರಣ್ ಅವರು ತನಿಖೆ ನಡೆಸಿ ಮಹೇಶ್ ಮತ್ತು ಕಿರಣ್ರನ್ನು ಬಂಧಿಸಿದ್ದಾರೆ. ಹಲ್ಲೆ ನಡೆಸಿದವರ ಪೈಕಿ ಗುರು ಮತ್ತು ಲೋಕೇಶ್ ನಾಪತ್ತೆಯಾಗಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತ ಯುವಕನ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.