ಆ್ಯಪ್ನಗರ

ನಾಳೆ ವಿಶೇಷಚೇತನ ಮಕ್ಕಳ ವಿಶೇಷ ಜಾತ್ರೆ

ಮಾರ್ಗದರ್ಶಿ ಸಂಸ್ಥೆಯು ನಾನಾ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಡಿ7ರಂದು ವಿಕಲಚೇತನ ಮಕ್ಕಳ ವಿಶೇಷ ಜಾತ್ರೆಯನ್ನು ಆಯೋಜನೆ ಮಾಡಿದೆ ಎಂದು ಮಾರ್ಗದರ್ಶಿ ಸಂಸ್ಥೆ ಸಂಚಾಲಕ ಕೆವಿ...

Vijaya Karnataka 6 Dec 2019, 5:00 am
ಚಾಮರಾಜನಗರ: ಮಾರ್ಗದರ್ಶಿ ಸಂಸ್ಥೆಯು ನಾನಾ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಡಿ.7ರಂದು ವಿಕಲಚೇತನ ಮಕ್ಕಳ ವಿಶೇಷ ಜಾತ್ರೆಯನ್ನು ಆಯೋಜನೆ ಮಾಡಿದೆ ಎಂದು ಮಾರ್ಗದರ್ಶಿ ಸಂಸ್ಥೆ ಸಂಚಾಲಕ ಕೆ.ವಿ. ರಾಜಣ್ಣ ತಿಳಿಸಿದರು.
Vijaya Karnataka Web nale viseacetana makkaa visesa jatre
ನಾಳೆ ವಿಶೇಷಚೇತನ ಮಕ್ಕಳ ವಿಶೇಷ ಜಾತ್ರೆ


''ವಿಕಲಚೇತನರು ಹಾಗೂ ಆರೈಕೆದಾರರ ನಡುವೆ ಜಿಲ್ಲೆಯಲ್ಲಿನಮ್ಮ ಮಾರ್ಗದರ್ಶಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ವಿಕಲಚೇತನ ಮಕ್ಕಳ ಸಮಯೋಚಿತ ಚಿಕಿತ್ಸೆ ಹಾಗೂ ಆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಅವರಲ್ಲೂಜಾತ್ರೆಯ ಸಡಗರ, ಸಂಭ್ರಮ ನೆಲೆಗೊಳ್ಳಲಿ ಎಂಬ ಕಾರಣಕ್ಕೆ ಈ ವಿಶೇಷ ಜಾತ್ರೆಯನ್ನು ಆಯೋಜಿಸಲಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿವಿವರಿಸಿದರು.

''ಅಂದು ನಗರ ಪಿಡಬ್ಲುತ್ರ್ಯಡಿ ಕಾಲನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿಈ ಜಾತ್ರಾ ಸಮಾರಂಭವನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಜಾತ್ರೆಯಲ್ಲಿದೊರೆಯುವ ಎಲ್ಲಾರೀತಿಯ ವಸ್ತುಗಳು ಹಾಗೂ ಆಟೋಟಗಳನ್ನು ಇಲ್ಲಿವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿ ವಿಕಲಚೇತನ ಮಕ್ಕಳ ವಿಶೇಷ ಜಾತ್ರೆಯನ್ನು ಆಯೋಜನೆ ಮಾಡುವ ಮೂಲಕ ಆ ಮಕ್ಕಳು ಸಹ ಎಲ್ಲರಂತೆ ಜಾತ್ರೆಯಲ್ಲಿಭಾಗಹಿಸಿ ತಮ್ಮ ಅಭಿಲಾಷೆ ಹಾಗೂ ಇಷ್ಟಾರ್ಥಗಳನ್ನು ಪೊರೈಸಿಕೊಳ್ಳಿಲಿ ಎಂಬುವುದು ನಮ್ಮ ಉದ್ದೇಶವಾಗಿದೆ,''ಎಂದರು.

''ವಿಕಲಚೇತನ ಮಕ್ಕಳನ್ನು ಸಾಮಾನ್ಯವಾಗಿ ಪೋಷಕರು ಇಂಥ ಕಾರ್ಯಕ್ರಮಗಳಿಗೆ ಕರೆದೊಯ್ಯುವುದು ವಿರಳ. ಹಾಗಾಗಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ 3 ವರ್ಷದಿಂದ 16 ವರ್ಷದೊಳಗಿನ ಎಲ್ಲಾವಿಕಲಚೇತನ ಮಕ್ಕಳು ಜಾತ್ರೆಯಲ್ಲಿಭಾಗವಹಿಸಲು ಅವಕಾಶವಿದೆ. ನಮ್ಮ ಪ್ರಕಾರ 500 ರಿಂದ 600 ಮಕ್ಕಳು ಭಾಗವಹಿಸುವ ನಿರೀಕ್ಷೆ ಇದ್ದು, ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ,'' ಎಂದರು.

ಸಮಾರಂಭವನ್ನು ವಿಕಲಚೇತನ ವ್ಯಕ್ತಿಗಳ ಕಾಯಿದೆ ರಾಜ್ಯ ಆಯುಕ್ತರಾದ ವಿ.ಎಸ್‌. ಬಸವರಾಜು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಎಸ್ಪಿ ಎಚ್‌.ಡಿ. ಆನಂದಕುಮಾರ್‌, ಸಿಇಓ ಬಿ.ಎಚ್‌. ನಾರಾಯಣ್‌ ರಾವ್‌, ಇತರೆ ಅಧಿಕಾರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿಮಾರ್ಗದರ್ಶಿ ಸಂಸ್ಥೆ ಸಹ ಸಂಚಾಲಕ ಸತ್ಯನಾರಾಯಣ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ