ಆ್ಯಪ್ನಗರ

ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ವಿಭಿನ್ನ

ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ವಿಭಿನ್ನ, ವೈಶಿಷ್ಟ್ಯ ಎಂದು ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಮಧುಸೂಧನ್‌ ತಿಳಿಸಿದರು.

Vijaya Karnataka 12 Nov 2018, 5:00 am
ಚಾಮರಾಜನಗರ : ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ವಿಭಿನ್ನ, ವೈಶಿಷ್ಟ್ಯ ಎಂದು ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಮಧುಸೂಧನ್‌ ತಿಳಿಸಿದರು.
Vijaya Karnataka Web nityostsava programme
ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ವಿಭಿನ್ನ


ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಂಸ ಸಭಾಂಗಣದಲ್ಲಿ ಭಾನುವಾರ ನಿತ್ಯೋತ್ಸವ-2018 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ 'ಚುಟುಕು ಕವಿಗೋಷ್ಠಿ'ಯಲ್ಲಿ ಮಾತನಾಡಿದರು.

ಮೂರರಿಂದ ನಾಲ್ಕು ಸಾಲುಗಳಲ್ಲಿ ಚುಟುಕ ಬರೆದು ಹಾಡುವುದು ಸಹ ಒಂದು ಕಲೆ. ಇದು ಸುಮ್ಮನೆ ಬರುವಂತದ್ದಲ್ಲ. ಇದು ಹೃದಯಾಂತರಾಳದಿಂದ ಬರಬೇಕು. ದಯೆ, ಕರುಣೆ ಹುಟ್ಟಬೇಕಾದರೆ ಚುಟುಕು ಕವಿತೆಗಳಿಂದ ಮಾತ್ರ ಸಾಧ್ಯ ಎಂದರು.

ಶಾಲಾ ವಿದ್ಯಾರ್ಥಿಗಳಲ್ಲಿ ಚುಟುಕು ಸಾಹಿತ್ಯ ಬರೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಚುಟುಕು ಕವಿಗೋಷ್ಠಿ ಆಯೋಜಿಸಲಾಗಿದೆ ಎಂದರು.

ನಿವೃತ್ತ ಉಪನ್ಯಾಸಕ ಕೆಂಪರಾಜು ಮಾತನಾಡಿ, ಸಾಹಿತ್ಯ ಎಂಬುದು ಮನುಷ್ಯನ ಭಾವನೆಯೊಳಗೆ ಅಂತರ್ಗತವಾಗಿರುತ್ತದೆ. ಅದನ್ನು ನಿರಂತರವಾಗಿ ಅಧ್ಯಯನ ಮಾಡುವುದರಿಂದ ಜೀವನ ಉತ್ತಮವಾಗುತ್ತದೆ. ಸಾಹಿತ್ಯದಲ್ಲಿ ಅಧ್ಯಯನಶೀಲರಾಗುವ ವ್ಯಕ್ತಿಗೆ ಮುಪ್ಪು ಮುಂದಕ್ಕೆ ದೂಡುತ್ತದೆ ಎಂದರು.

ವಿದ್ಯಾರ್ಥಿಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ, ಪಠ್ಯೇತರ ಚಟುವಟಿಕೆಗಳತ್ತಲೂ ಭಾಗವಹಿಸುವಂತೆ ಮಾಡುವುದು ಶಿಕ್ಷ ಕರ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಆಲೂರು ಬಸವರಾಜು ಮಾತನಾಡಿದರು. ಬಿಸಲವಾಡಿ ಸರಕಾರಿ ಪ್ರೌಢಶಾಲಾ ಶಿಕ್ಷ ಕ ಮುಕುಂದರಾಜ್‌ ಕವಿಗೋಷ್ಠಿ ಉದ್ಘಾಟಿಸಿದರು.

ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ಮಧುಸೂಧನ್‌, ಉಮಾಶಂಕರ್‌, ಬಿಸಲವಾಡಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕವನವಾಚಿಸಿದರು.

ಚುಟುಕು ಕವನ ವಾಚಿಸಿದ ವಿದ್ಯಾರ್ಥಿನಿಯರಿಗೆ ಪ್ರಶಂಸನಾಪತ್ರ ನೀಡಲಾಯಿತು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್‌.ನಿರಂಜನ್‌ಕುಮಾರ್‌, ಮಲೆಯೂರು ಮಾ.ಮಹೇಶ್‌ ನಿವೃತ್ತ ಉಪನ್ಯಾಸಕ ಕೃಷ್ಣಸ್ವಾಮಿನಾಯಕ, ನವಮಿ ಬಂಡಿಗೆರೆ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ