ಆ್ಯಪ್ನಗರ

ದ್ವೇಷದ ರಾಜಕೀಯ ಸಲ್ಲ: ನಿರಂಜನ್‌ ಕುಮಾರ್‌

ಬಿಜೆಪಿ ಶಾಸಕ ಪ್ರೀತಂಗೌಡರ ರಾಜಕೀಯ ಏಳಿಗೆ ಸಹಿಸದೇ ಅವರ ಕುಟುಂಬ ಮತ್ತು ಬೆಂಬಲಿಗರ ಮೇಲೆ ಗೂಂಡಾಗಳ ಮೂಲಕ ಮುಖ್ಯಮಂತ್ರಿಯವರು ದಾಳಿ ಮಾಡಿಸಿದ್ದಾರೆ ಎಂದು ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಆರೋಪಿಸಿದ್ದಾರೆ.

Vijaya Karnataka 14 Feb 2019, 5:00 am
ಗುಂಡ್ಲುಪೇಟೆ : ಬಿಜೆಪಿ ಶಾಸಕ ಪ್ರೀತಂಗೌಡರ ರಾಜಕೀಯ ಏಳಿಗೆ ಸಹಿಸದೇ ಅವರ ಕುಟುಂಬ ಮತ್ತು ಬೆಂಬಲಿಗರ ಮೇಲೆ ಗೂಂಡಾಗಳ ಮೂಲಕ ಮುಖ್ಯಮಂತ್ರಿಯವರು ದಾಳಿ ಮಾಡಿಸಿದ್ದಾರೆ ಎಂದು ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಆರೋಪಿಸಿದ್ದಾರೆ.
Vijaya Karnataka Web no politics of hatred niranjan kumar
ದ್ವೇಷದ ರಾಜಕೀಯ ಸಲ್ಲ: ನಿರಂಜನ್‌ ಕುಮಾರ್‌


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ''ಮಾಜಿ ಪ್ರಧಾನಿ ದೇವೇಗೌಡರು, ಪುತ್ರರಾದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವರಾದ ಎಚ್‌.ಡಿ.ರೇವಣ್ಣ ಹಾಸನ ಜಿಲ್ಲೆಯ ಸಂಪೂರ್ಣ ರಾಜಕೀಯ ಪ್ರಭುತ್ವ ತಮ್ಮದಾಗಬೇಕು ಎಂದು ಬಯಸಿದ್ದಾರೆ. ಈ ಕಾರಣದಿಂದ ತಮ್ಮ ದಾರಿಗೆ ಅಡ್ಡಲಾಗುತ್ತಾರೆ ಎಂದು ನಮ್ಮ ಪಕ್ಷ ದ ಯುವ ಶಾಸಕ ಪ್ರೀತಂಗೌಡರ ಕುಟುಂಬದ ಮತ್ತು ಬೆಂಬಲಿಗರ ವಿರುದ್ಧ ಕಾರ್ಯಕರ್ತರ ಹೆಸರಿನಲ್ಲಿ ಗೂಂಡಾಗಳನ್ನು ಕಳುಹಿಸಿ ದಾಂಧಲೆ ಮಾಡಿಸಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಇಂತಹ ದ್ವೇಷದ ರಾಜಕೀಯ ಒಳ್ಳೆಯದಲ್ಲ,''ಎಂದು ಶಾಸಕರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ