ಆ್ಯಪ್ನಗರ

ಐದು ತಿಂಗಳಾದರೂ ಬಾರದ ಶೂ, ಸಾಕ್ಸ್‌

ಜಿಲ್ಲೆಯಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ 5 ತಿಂಗಳು ಕಳೆದರೂ, ಶೂ ಸಾಕ್ಸ್‌ ದೊರಕದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

Vijaya Karnataka 9 Sep 2019, 5:00 am
ಹರವೆ ಮಹೇಶ್‌ ಚಾಮರಾಜನಗರ
Vijaya Karnataka Web no shoe socks
ಐದು ತಿಂಗಳಾದರೂ ಬಾರದ ಶೂ, ಸಾಕ್ಸ್‌


ಜಿಲ್ಲೆಯಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ 5 ತಿಂಗಳು ಕಳೆದರೂ, ಶೂ ಸಾಕ್ಸ್‌ ದೊರಕದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ864 ಪ್ರಾಥಮಿಕ ಶಾಲೆಗಳು, 86 ಪ್ರೌಢಶಾಲೆಗಳಿದ್ದು, 60 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಗ್ರಾಮಗಳಿಂದ ಶಾಲೆಗೆ ಹೋಗಿ ಬರಲು ನಾನಾ ಶಾಲೆಗಳಲ್ಲಿಕ್ಷೇತ್ರದ ಶಾಸಕರ ಸಮ್ಮುಖದಲ್ಲಿವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನೂಕೂಲವಾಗುವಂತೆ ಪಠ್ಯಪುಸ್ತಕ ವಿತರಣೆಯಾಗಿದೆ. ಸಮವಸ್ತ್ರವೂ ವಿತರಣೆಯಾಗಿದೆ. ಆದರೆ, ಶೂ, ಸಾಕ್ಸ್‌ ಖರೀದಿಗೆ ಜಿಲ್ಲೆಗೆ ಅನುದಾನ ಬಿಡುಗಡೆಯಾಗದೇ ಇರುವುದರಿಂದ ವಿದ್ಯಾರ್ಥಿಗಳು ಕಳೆದ ವರ್ಷ ಇಲಾಖೆಯಿಂದ ವಿತರಣೆ ಮಾಡಿದ್ದ ಶೂ-ಸಾಕ್ಸ್‌ಗಳನ್ನೇ ಹರಿದಿದ್ದರೂ ಶಾಲೆಗೆ ಹಾಕಿಕೊಂಡು ಹೋಗಬೇಕಿದೆ.

ಅಳತೆಗೆ ತಕ್ಕಂತೆ; ಶೂ ಸಾಕ್ಸ್‌ ಖರೀದಿ ಸಂಬಂಧ 1ರಿಂದ 5, 6ರಿಂದ 8, 8ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪಾದದ ಅಳತೆಗೆ ತಕ್ಕಂತೆ ಶೂ ಖರೀದಿಸಬೇಕಿದೆ. ಒಂದು ಹಂತಕ್ಕೆ 265, ಎರಡನೇ ಹಂತಕ್ಕೆ 295, ಮೂರನೇ ಹಂತಕ್ಕೆ 325 ರೂ. ಬೆಲೆಯ ಶೂಸಾಕ್ಸ್‌ ಖರೀದಿಸಬೇಕು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಮೂವರು ಸದಸ್ಯರು, ಮುಖ್ಯ ಶಿಕ್ಷಕರು ಕಾರ್ಯದರ್ಶಿಯಾಗಿದ್ದು, ಇವರ ಖಾತೆಗೆ ನೇರ ಹಣ ಬಿಡುಗಡೆಯಾಗಲಿದ್ದು, ಅವರು ಸ್ಥಳೀಯವಾಗಿ ಕೊಟೇಷನ್‌ ತಯಾರಿಸಿ ಸಂಬಂಧಪಟ್ಟ ಅಂಗಡಿಗಳಿಂದ ಶೂ ಸಾಕ್ಸ್‌ ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಈಗಾಗಲೇ ಶೂ ಸಾಕ್ಸ್‌ ಖರೀದಿಗೆ ಸರಕಾರ ಅನುದಾನ ಬಿಡುಗಡೆಮಾಡಿದೆ. ನಮ್ಮ ಜಿಲ್ಲೆಗೂ ತಕ್ಷಣವೇ ಶೂ ಸಾಕ್ಸ್‌ ಖರೀದಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ವಿಡಿಯೋ ಕಾನ್ಫ್ಪರೆನ್ಸ್‌ ಸಭೆ ವೇಳೆ ಸರಕಾರಕ್ಕೆ ಮನವಿ ಮಾಡಿದ್ದೇವೆ. ಸದ್ಯದಲ್ಲೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕಿನ 2 ಬ್ಲಾಕ್‌ಗಳಲ್ಲಿ150ರಿಂದ 250 ಚೂಡಿದಾರ್‌ ಸಮವಸ್ತ್ರ ಕೊರತೆಯಾಗಿದೆ ಎಂಬ ವಿಚಾರ ತಿಳಿದು ಬಂದಿದ್ದು, ಸದ್ಯದಲ್ಲೇ ಕೊರತೆಯಿರುವ ಸಮವಸ್ತ್ರ ಕೊಡಿಸಲು ಕ್ರಮ ವಹಿಸಲಾಗುವುದು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು.

ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ60 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈಗಾಗಲೇ ಸೈಕಲ್‌, ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ನಡೆದಿದೆ. ಶೂ, ಸಾಕ್ಸ್‌ ಖರೀದಿಸಲು ಜಿಲ್ಲೆಗೆ ಅನುದಾನ ಬಿಡುಗಡೆಯಾಗಿಲ್ಲ. ತಕ್ಷಣವೇ ಅನುದಾನ ಬಿಡುಗಡೆ ಮಾಡುವಂತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮನವಿ ಮಾಡಿದ್ದೇವೆ. ಸರಕಾರದಿಂದ ನೇರವಾಗಿ ಬಿಡುಗಡೆಯಾದ ಹಣ ನೇರ ಶಾಲಾಭಿವೃದ್ಧಿ ಸಮಿತಿಯ ಖಾತೆಗೆ ಹೋಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಸಮಿತಿಯವರು ಕೊಟೇಷನ್‌ ತಯಾರು ಮಾಡಿ ಶೂ ಸಾಕ್ಸ್‌ ಖರೀದಿಸುತ್ತಾರೆ.

-ಮಂಜುನಾಥ್‌, ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆ(ಪ್ರಭಾರ) ಉಪ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ