ಆ್ಯಪ್ನಗರ

ಪ್ರಾಣಿ ದಾಳಿಯಲ್ಲ, ಕೊಲೆ !

ಮೂರು ದಿನಗಳ ಹಿಂದೆ ಮಾದಪಟ್ಟಣ ಗ್ರಾಮದ ತಮ್ಮಯ್ಯಶೆಟ್ಟಿ ಸಾವಿನ ರಹಸ್ಯವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 27 Oct 2019, 5:00 am
ಬೇಗೂರು: ಮೂರು ದಿನಗಳ ಹಿಂದೆ ಮಾದಪಟ್ಟಣ ಗ್ರಾಮದ ತಮ್ಮಯ್ಯಶೆಟ್ಟಿ ಸಾವಿನ ರಹಸ್ಯವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web not animal attacks murder
ಪ್ರಾಣಿ ದಾಳಿಯಲ್ಲ, ಕೊಲೆ !


ತಮ್ಮಯ್ಯಶೆಟ್ಟಿ ಅವರ ಶವ ಮೂರು ದಿನಗಳ ಹಿಂದೆ ಗ್ರಾಮದ ಹೊರ ವಲಯದಲ್ಲಿಕಂಡು ಬಂದಿತ್ತು. ಅವರ ಮುಖ ಭಾಗದ ಚರ್ಮ ಕಿತ್ತು ಬಂದಿತ್ತು. ಹೀಗಾಗಿ ಇದು ಕಾಡು ಪ್ರಾಣಿಗಳ ದಾಳಿಯಿಂದಾದ ಸಾವೇ ಅಥವಾ ಉದ್ದೇಶ ಪೂರ್ವಕ ಕೊಲೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಅನುಮಾನಗಳಿಗೆ ತೆರೆ ಎಳೆದ ಪೊಲೀಸರು, ತಮ್ಮಯ್ಯ ಶೆಟ್ಟಿ ಅವರನ್ನು ಕೊಲೆ ಮಾಡಿದ ಆರೋಪ ಮೇಲೆ ಪಟ್ಟಣ ಗ್ರಾಮದ ಶಂಕರ ಹಾಗೂ ಅಗತಗೌಡನಹಳ್ಳಿ ಗ್ರಾಮದ ಶಿವರಾಜು ಅವರನ್ನು ಬಂಧಿಸಿದ್ದಾರೆ.

ಶಂಕರನ ಪತ್ನಿ ಅದೇ ಗ್ರಾಮದ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ತಮ್ಮಯ್ಯ ಶೆಟ್ಟಿ ಸಹಕಾರ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಆರೋಪಿಗಳು ಮಂಗಳವಾರ ತಮ್ಮಯ್ಯ ಶೆಟ್ಟಿಯೊಂದಿಗೆ ಬೇಗೂರಿನಲ್ಲಿಮದ್ಯ ಸೇವಿಸಿ, ಆತನನ್ನು ಗ್ರಾಮದ ಹೊರ ವಲಯಕ್ಕೆ ಕರೆದೊಯ್ದು, ಹಲ್ಲೆನಡೆಸಿದ್ದಾರೆ. ಮದ್ಯ ಸೇವಿಸಿದ್ದ ತಮ್ಮಯ್ಯ ಶೆಟ್ಟಿ ಅವರು ಶಂಕರನ ಏಟಿಗೆ ಮೃತಪಟ್ಟಿದ್ದು, ಬಳಿಕ ಶವವನ್ನು ಕಾಡಂಚಿನಲ್ಲಿಎಸೆದು ಪರಾರಿಯಾಗಿದ್ದರು. ರಾತ್ರಿ ವೇಳೆ ಮುಖ ಭಾಗವನ್ನು ಪ್ರಾಣಿ ತಿಂದಿದ್ದವು. ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ಹೊರಬಂದಿದೆ.

ಮೊದಲ ಮಾಹಿತಿಯಲ್ಲೇ ತಮ್ಮಯ್ಯ ಶೆಟ್ಟಿ ಶವ ಸಿಗುವ ಹಿಂದಿನ ರಾತ್ರಿ, ಕೊಲೆ ಆರೋಪಿಗಳು ಅದೇ ತಮ್ಮಯ್ಯಶೆಟ್ಟಿ ಜತೆ ಬೇಗೂರಿನಲ್ಲಿಒಟ್ಟಾಗಿ ಮದ್ಯ ಸೇವಿಸಿ, ಒಟ್ಟಾಗಿಯೇ ಅಲ್ಲಿಂದ ತೆರಳಿದ್ದರು ಎಂಬ ಮಾಹಿತಿ ತಿಳಿದು ಬಂದಿದ್ದೇ ತಡ ಪೊಲೀಸರು ಈ ನಿಟ್ಟಿನಲ್ಲಿತನಿಖೆ ಕೈಗೊಂಡಿದ್ದರು. ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ತಪೊ್ಪಪ್ಪಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್ಪಿ ಆನಂದಕುಮಾರ್‌ ಮಾರ್ಗದರ್ಶನದಲ್ಲಿ ಇನ್ಸ್‌ ಪೆಕ್ಟರ್‌ ಮಹದೇವಸ್ವಾಮಿ, ತೆರಕಣಾಂಬಿ ಪಿಎಸ್‌ಐ ರಾಧಮ್ಮ, ಪ್ರೊಭೆಷನರಿ ಪಿಎಸ್‌ಐ ಮಂಜುನಾಥ್‌, ಸಿಬ್ಬಂದಿ ಗುರುಮಲ್ಲಪ್ಪ, ರಾಜು ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ