ಆ್ಯಪ್ನಗರ

ಒಬ್ಬರ ನಾಮಪತ್ರ ತಿರಸ್ಕೃತ

ಚಾಮರಾಜನಗರ ಲೋಕಸಭೆ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆದು ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದು, ಉಳಿದ 12 ಅಭ್ಯಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.

Vijaya Karnataka 28 Mar 2019, 5:00 am
ಚಾಮರಾಜನಗರ : ಚಾಮರಾಜನಗರ ಲೋಕಸಭೆ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆದು ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದು, ಉಳಿದ 12 ಅಭ್ಯಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.
Vijaya Karnataka Web ones nomination was rejected
ಒಬ್ಬರ ನಾಮಪತ್ರ ತಿರಸ್ಕೃತ


ಭಾರತೀಯ ಬಹುಜನ ಕ್ರಾಂತಿದಳ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಎಸ್‌. ಗೋವಿಂದನಾಯಕ್‌ ಅವರ ನಾಮಪತ್ರ ತಿರಸ್ಕೃತವಾಗಿದೆ.

ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬುಧವಾರ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಡೆಸಿದರು. ಚಾಮರಾಜನಗರ ಲೋಕಸಭೆ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷ ಕರಾದ ಕಪಕೊಲೈ ಅವರ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು.

ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಪ್ರತಿನಿಧಿಗಳ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯವು ನೆರವೇರಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಹಾಜರಿದ್ದರು.

ಅಂತಿಮವಾಗಿ 12 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಅವರ ವಿವರ ಇಂತಿದೆ.

ಆರ್‌. ಧ್ರುವನಾರಾಯಣ್‌ (ಕಾಂಗ್ರೆಸ್‌ ಪಕ್ಷ ), ಡಾ. ಶಿವಕುಮಾರ (ಬಹುಜನ ಸಮಾಜ ಪಾರ್ಟಿ), ವಿ. ಶ್ರೀನಿವಾಸ ಪ್ರಸಾದ್‌ (ಭಾರತೀಯ ಜನತಾ ಪಾರ್ಟಿ), ಎಂ. ನಾಗರಾಜು (ಉತ್ತಮ ಪ್ರಜಾಕೀಯ ಪಾರ್ಟಿ), ಪ್ರಸನ್ನಕುಮಾರ್‌ ಬಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತಪರ್ವ), ಸುಬ್ಬಯ್ಯ (ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿ), ಆನಂದ. ಜಿ. ಎನ್‌. ಅಂಬರೀಷ್‌ , ಎಂ. ಪ್ರದೀಪ್‌ಕುಮಾರ್‌ , ಜಿ.ಡಿ. ರಾಜಗೋಪಾಲ್‌ , ಎಸ್‌.ಎಂ. ಲಿಂಗಯ್ಯ , ಎಂ. ಹೊನ್ನೂರಯ್ಯ(ಪಕ್ಷೇತರ).

ನಾಮಪತ್ರ ಹಿಂಪಡೆಯಲು 29 ಕೊನೆ ದಿನ

ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಮಾ. 29ಕೊನೆ ದಿನವಾಗಿದೆ.

ಸದ್ಯ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದಿದ್ದು, ಸಲ್ಲಿಕೆಯಾಗಿದ್ದ ಒಟ್ಟು 13 ಮಂದಿಯ ನಾಮಪತ್ರಗಳ ಪೈಕಿ 12 ಮಂದಿ ನಾಮಪತ್ರಗಳು ಕ್ರಮಬದ್ಧವಾಗಿವೆ.

ಇವರಲ್ಲಿ ಯಾರಾದರೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವರೆ ಅಥವಾ 12 ಅಭ್ಯರ್ಥಿಗಳು ಅಂತಿಮ ಹಣಾಹಣಿಯಲ್ಲಿ ಭಾಗಿಯಾಗುವರೇ ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ