ಆ್ಯಪ್ನಗರ

ಶವ ಸುಟ್ಟ ಜಾಗದಲ್ಲೇ ಅಂತ್ಯಕ್ರಿಯೆ!

ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲದೆ ಶವ ಸುಟ್ಟ ಜಾಗದಲ್ಲೇ ಅಂತ್ಯಕ್ರಿಯೆ ನಡೆಸಿದ ಘಟನೆ ಶನಿವಾರ ನಡೆದಿದ್ದು, ರುದ್ರಭೂಮಿ ಜಾಗ ಮಂಜೂರು ಮಾಡುವಂತೆ ಗ್ರಾಮದ ದಲಿತ ಸಮುದಾಯದ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 6 May 2019, 5:00 am
ಹನೂರು: ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲದೆ ಶವ ಸುಟ್ಟ ಜಾಗದಲ್ಲೇ ಅಂತ್ಯಕ್ರಿಯೆ ನಡೆಸಿದ ಘಟನೆ ಶನಿವಾರ ನಡೆದಿದ್ದು, ರುದ್ರಭೂಮಿ ಜಾಗ ಮಂಜೂರು ಮಾಡುವಂತೆ ಗ್ರಾಮದ ದಲಿತ ಸಮುದಾಯದ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web CHN-CHN05HNR1


ಹನೂರು ಕ್ಷೇತ್ರದ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಪಿ.ಜಿ. ಪಾಳ್ಯ ಗ್ರಾಮದ ಡಾ. ಬಿ.ಆರ್‌. ಅಂಬೇಡ್ಕರ್‌ ಕಾಲನಿಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಶವ ಸಂಸ್ಕಾರ ಮಾಡಲು ಗ್ರಾಮದ ಹೊರವಲಯದ ಹತ್ತಿರ 8 ಸೆಂಟ್‌ ಜಾಗವಿರುವ ರುದ್ರಭುಮಿಯಲ್ಲಿ ಗುಂಡಿ ತೆಗೆಯುತ್ತಿದ್ದಾಗ ಅಸ್ಥಿ ಪಂಜರದ ಮೂಳೆಗಳು ದೊರೆತಿದೆ. ಅದನ್ನು ಹೊರತೆಗೆದು ಬೆಂಕಿಯಿಂದ ಸುಟ್ಟ ನಂತರ ಶನಿವಾರ ಗ್ರಾಮದ ಮತ್ತೊಬ್ಬ ವ್ಯಕ್ತಿಯನ್ನು ಅದೇ ಸ್ಥಳದಲ್ಲೇ ಅಂತ್ಯಕ್ರಿಯೆ ಮಾಡಲಾಯಿತು.

ಪಿ.ಜಿ. ಪಾಳ್ಯ ಗ್ರಾಮದ ಅಂಬೇಡ್ಕರ್‌ ಕಾಲನಿಯಲ್ಲಿ 400ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು, 1500 ಜನಸಂಖ್ಯೆ ಹೊಂದಿದ್ದು, ಶವ ಸಂಸ್ಕಾರ ಮಾಡಲು 8 ಸೆಂಟ್‌ ಜಾಗವಿರುವ ರುದ್ರಭುಮಿಯಲ್ಲಿ ಶವ ಹೂಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಲು ರುದ್ರಭೂಮಿಗಾಗಿ ಪರಿತಪಿಸುತ್ತಿರುವುದು ನಿಜಕ್ಕೂ ಇದು ವಿಪರ್ಯಸ.

ಪ್ರತಿಭಟನೆ ವಿವರ: ಗ್ರಾಮದ ಹೊರವಲಯದ 8 ಸೆಂಟ್‌ ಜಾಗವಿರುವ ರುದ್ರಭೂಮಿಯಲ್ಲಿ ಜಾಗದ ಕೊರತೆಯಿಂದ ಮೃತಪಟ್ಟವರನ್ನು ಅಲ್ಲೇ ಶವ ಸಂಸ್ಕಾರ ಮಾಡಬೇಕಾಗಿದೆ. ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡಲು ವಿಶಾಲ ಜಾಗವಿಲ್ಲದ ಕಾರಣ ಅಲ್ಪ ಪ್ರಮಾಣದ ಜಾಗದಲ್ಲಿ ಗುಂಡಿ ತೆಗೆದು ಹೂಳಬೇಕಾದ ಪರಿಸ್ಥಿತಿ ಇದೆ. ಸರಕಾರಿ ಸ್ಮಶಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರೂ ಸಹ ಯಾರು ಸಹ ಸ್ಪಂದಿಸಿಲ್ಲ ಎಂದು ಆರೋಪಿಸಿ ಶವ ಸಂಸ್ಕಾರ ಮಾಡಿದ ನಂತರ ಸಮುದಾಯದ ಮುಖಂಡರು ಸ್ಮಶಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಿ.ಜಿ ಪಾಳ್ಯ ಗ್ರಾಮದ ಪರಿಶಿಷ್ಟ ಜನಾಂಗದವರಿಗೆ ಸೇರಿದ ರುದ್ರಭೂಮಿಯಲ್ಲಿರುವ ಅಲ್ಪ ಪ್ರಮಾಣದ ಜಾಗದಲ್ಲಿಯೆ ಗುಂಡಿ ತೆಗೆದು ಅಸ್ತಿಪಂಜರಗಳನ್ನು ಶೇಖರಿಸಿ ಸುಟ್ಟ ಬಳಿಕ ನಂತರ ಶವ ಸಂಸ್ಕಾರ ಮಾಡಬೇಕಾಗಿದೆ. ಸರಕಾರಿ ಜಾಗವನ್ನು ಮಂಜೂರು ಮಾಡುವಂತೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಇದುವರೆಗೂ ಸ್ಪಂದಿಸಿಲ್ಲ, ಇನ್ನದಾರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ಪಿ.ಜಿ. ಪಾಳ್ಯ ಗ್ರಾ.ಪಂ ಉಪಾಧ್ಯಕ್ಷ ಸಿದ್ಧರಾಜು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ