ಆ್ಯಪ್ನಗರ

ಪಂಚಾಯಿತಿ ಉಪ ಸಮರಕ್ಕೆ ಕೈ, ಕಮಲ ಸಿದ್ಧತೆ

ಜಿಲ್ಲೆಯ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ.ಗಳಲ್ಲಿತೆರವಾಗಿರುವ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯನ್ನು ಎದುರಿಸಲು ಜಿಲ್ಲೆಯಲ್ಲಿರಾಜಕೀಯ ಪಕ್ಷಗಳು ಸಿದ್ಧತೆಯನ್ನು ಕೈಗೊಂಡಿವೆ.

Vijaya Karnataka 26 Oct 2019, 5:00 am
ಚಾಮರಾಜನಗರ: ಜಿಲ್ಲೆಯ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ.ಗಳಲ್ಲಿತೆರವಾಗಿರುವ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯನ್ನು ಎದುರಿಸಲು ಜಿಲ್ಲೆಯಲ್ಲಿರಾಜಕೀಯ ಪಕ್ಷಗಳು ಸಿದ್ಧತೆಯನ್ನು ಕೈಗೊಂಡಿವೆ.
Vijaya Karnataka Web panchayat election
ಪಂಚಾಯಿತಿ ಉಪ ಸಮರಕ್ಕೆ ಕೈ, ಕಮಲ ಸಿದ್ಧತೆ


ಈ ಉಪ ಸಮರದಲ್ಲಿತಮ್ಮ ಕೈ ಮೇಲಾಗಿಸಿ, ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಳಯ ಕಾರ್ಯೋನ್ಮುಖವಾಗಿದೆ. ಇದು ಪಂಚಾಯಿತಿ ಉಪ ಸಮರವಾದರೂ ಉಭಯ ಪಕ್ಷಗಳಿಗೆ ಪ್ರತಿಷ್ಠೆ ಮೂಡಿಸಿದೆ.

ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಗೊಂಡ ಎಂ. ರಾಮಚಂದ್ರ ಅವರ ರಾಜೀನಾಮೆಯಿಂದ ಜಿ.ಪಂ.ನ ಹರದನಹಳ್ಳಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಉಪ ಸಮರದಲ್ಲಿಈ ಕ್ಷೇತ್ರ ಹೆಚ್ಚು ಗಮನ ಸೆಳೆಯಲಿದೆ.

ಆದರೆ, ಈವರೆವಿಗೂ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಉಭಯ ಪಕ್ಷಗಳಲ್ಲೂಅಂತಿಮಗೊಳಿಸಿಲ್ಲ. ಇದೇ ಅ. 31 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ನ. 12ಕ್ಕೆ ಮತದಾನ ನಡೆಯಲಿದೆ ಎಂಬುದು ಗಮನಾರ್ಹ.

ಈಗಾಗಲೇ ಮಾಜಿ ಸದಸ್ಯ ಎಂ. ರಾಮಚಂದ್ರ ಅವರು ತಾವು ಹರದನಹಳ್ಳಿಯಿಂದ ಮರು ಸ್ಪರ್ಧೆಗೆ ಇಳಿಯುವುದಿಲ್ಲಎಂಬುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲವೂ ಇದ್ದೇ ಇದೆ.

ಇನ್ನು ಕೆಲ ತಾ.ಪಂ. ಹಾಗೂ ಗ್ರಾ.ಪಂ. ಸ್ಥಾನಗಳಿಗೂ ಉಪ ಸಮರ ನಡೆಯಲಿದ್ದು, ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬರಲಿದೆ ಎಂಬ ಬಗ್ಗೆಯೂ ರಾಜಕೀಯಾಸಕ್ತರಲ್ಲಿಕುತೂಹಲ ಇದ್ದೇ ಇದೆ. ಆದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡರಲ್ಲೂಗೆಲ್ಲುವ ಹುಮ್ಮಸು ಇದ್ದೇ ಇದೆ.

ಕಾಂಗ್ರೆಸ್‌ ಸಂಘಟನೆಯ ಉಸ್ತುವಾರಿಯನ್ನು ಇದೀಗ ಮಾಜಿ ಸಂಸದ ಆರ್‌. ಧ್ರುವನಾರಾಯಣ ಹೊತ್ತಿದ್ದಾರೆ. ಹೀಗಾಗಿ ಅವರು ಈ ಉಪ ಚುನಾವಣೆಯಿಂದಲೇ ಅವರು ಪಕ್ಷದ ಬಲವರ್ಧನೆಗೆ ಮುಂದಾಗಲಿದ್ದಾರೆ. ಅದಕ್ಕಾಗಿ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯವಾಗಲಿದೆ. ಅಷ್ಟೆಯಲ್ಲ, ಚಾ.ನಗರ ತಾಲೂಕಿನ ಕ್ಷೇತ್ರಗಳಲ್ಲಿತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಸಹ ಶಾಸಕ , ಮಾಜಿ ಸಚಿವ ಪುಟ್ಟರಂಗಶೆಟ್ಟರಿಗೂ ಸವಾಲೇ ಸರಿ.

ಇನ್ನು ಬಿಜೆಪಿ ಸಹ ಕಳೆದ ಲೋಕಸಭೆ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿಗೆದ್ದು ಬೀಗಿದ್ದು, ಆ ಪಕ್ಷದಲ್ಲೂಉಪ ಸಮರವನ್ನು ಗೆದ್ದು ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಹೀಗಾಗಿ ವಾರದ ನಂತರ ಉಪ ಸಮರ ಕಣ ರಂಗೇರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಲ್ಲೆಲ್ಲಿಗೆ ಉಪ ಸಮರ ?

ಚಾಮರಾಜನಗರ ಜಿ.ಪಂ.ನಲ್ಲಿ ಹರದನಹಳ್ಳಿ ಕ್ಷೇತ್ರ, ಯಳಂದೂರು ತಾ.ಪಂ.ನ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು, ತೆಳ್ಳನೂರು, ಹನೂರು ತಾಲೂಕಿನ ದೊಡ್ಡಾಲತ್ತೂರು, ಚಿಕ್ಕಮಾಲಾಪುರ, ಗುಂಡ್ಲುಪೇಟೆ ತಾಲೂಕಿನ ಮಂಗಲ, ರಾಘವಾಪುರ ಹಾಗೂ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯತಿಯ ತಲಾ ಒಂದು ಸ್ಥಾನ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ