ಆ್ಯಪ್ನಗರ

ನಗರದಲ್ಲಿ ಪಾಸ್‌ಪೋರ್ಟ್‌ ಸೇವಾಕೇಂದ್ರ: ಸ್ಥಳ ಪರಿಶೀಲನೆ

ಜಿಲ್ಲಾ ಕೇಂದ್ರ ಚಾಮರಾಜನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಲು ಸಂಸದ ಆರ್‌.ಧ್ರುವನಾರಾಯಣ ಬುಧವಾರ ಅಂಚೆ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Vijaya Karnataka 20 Sep 2018, 5:00 am
ಚಾಮರಾಜನಗರ : ಜಿಲ್ಲಾ ಕೇಂದ್ರ ಚಾಮರಾಜನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಲು ಸಂಸದ ಆರ್‌.ಧ್ರುವನಾರಾಯಣ ಬುಧವಾರ ಅಂಚೆ ಕಚೇರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
Vijaya Karnataka Web passport service center location verification
ನಗರದಲ್ಲಿ ಪಾಸ್‌ಪೋರ್ಟ್‌ ಸೇವಾಕೇಂದ್ರ: ಸ್ಥಳ ಪರಿಶೀಲನೆ


ನಂತರ ಮಾತನಾಡಿದ ಸಂಸದ ಆರ್‌.ಧ್ರುವನಾರಾಯಣ' ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿದ್ದ ಚಾಮರಾಜನಗರ ಮತ್ತು ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆಯಬೇಕು ಎಂದು ಮನವಿ ಸಲ್ಲಿಸಲಾಗಿತ್ತು. 2 ವರ್ಷದ ಹಿಂದೆ ಮೈಸೂರಿನ ಮುಖ್ಯ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತೆರೆದು, ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಪ್ರಾದೇಶಿಕ ಅಧಿಕಾರಿ ಕರ್ನಾಟಕದವರೇ ಆಗಿದ್ದು, ಅವರ ಕಾಳಜಿಯಿಂದ ಜಿಲ್ಲಾ ಕೇಂದ್ರಕ್ಕೆ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಮಂಜೂರಾಗಿದೆ, ಶೀಘ್ರವೇ ಕಚೇರಿಯನ್ನು ನವೀಕರಿಸಿ

ಮೂಲಭೂತ ಸೌಕರ್ಯ ಕಲ್ಪಿಸಿದರೆ ಕೂಡಲೇ ಆರಂಭಿಸಲಾಗುವುದು ಎಂದರು.

ಪಾಸ್‌ಪೋರ್ಟ್‌ ಸೇವಾಕೇಂದ್ರ ಪ್ರಾದೇಶಿಕ ಅಧಿಕಾರಿ ರಾಜೇಶ್‌ ನಾಯಕ್‌ ಮಾತನಾಡಿ, 2016ರಲ್ಲಿ ಮೈಸೂರು, 2017ರಲ್ಲಿ 11 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. 2ನೇ ಹಂತದಲ್ಲಿ 11 ಕಡೆ ಸೇವಾ ಕೇಂದ್ರ ಆರಂಭಿಸಲಿದ್ದು, ಇದರಲ್ಲಿ ಚಾಮರಾಜನಗರವೂ ಸೇರಿದೆ. ಕೇಂದ್ರದ ಸ್ಥಳ ಪರಿಶೀಲನಾ ವರದಿಯನ್ನು ದೆಹಲಿಗೆ ಕಳುಹಿಸಿಕೊಡಲಾಗುವುದು, ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಪಾಸ್‌ಪೋರ್ಟ್‌ ಸೇವೆ ಪಡೆಯಲು ಆಧಾರ್‌ ಕಾರ್ಡ್‌, ಐಡಿ ಕಾರ್ಡ್‌, ಪ್ಯಾನ್‌ಕಾರ್ಡ್‌ ಒದಗಿಸಿದರೆ ಸಾಕು, ವಾರದಲ್ಲಿ ಪಾಸ್‌ಪೋರ್ಟ್‌ ಸಿದ್ಧವಾಗುತ್ತದೆ ಎಂದರು.

ನಂಜನಗೂಡುವಿಭಾಗದ ಅಂಚೆಅಧೀಕ್ಷ ಕಿ ಅಣ್ಣಾಲಕ್ಷ್ಮೀ, ಎಎಸ್ಪಿ ನರಸಿಂಹಮೂರ್ತಿ, ಸುಪ್ರಿಯಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ