ಆ್ಯಪ್ನಗರ

ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಬಿಜೆಪಿ ರಾರ‍ಯಲಿ

ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ನಗರದಲ್ಲಿಬಿಜೆಪಿ ವತಿಯಿಂದ ಜನ ಜಾಗೃತಿ ಜಾಥಾ ನಡೆಯಿತು.

Vijaya Karnataka 12 Jan 2020, 5:00 am
ಚಾಮರಾಜನಗರ : ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ನಗರದಲ್ಲಿಬಿಜೆಪಿ ವತಿಯಿಂದ ಜನ ಜಾಗೃತಿ ಜಾಥಾ ನಡೆಯಿತು.
Vijaya Karnataka Web ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬೆಂಬಲಿಸಿ ಚಾಮರಾಜನಗರದಲ್ಲಿ ಬಿಜೆಪಿ ಕಾರ‌್ಯಕರ್ತರು ಜನಜಾಗತಿ ಅಭಿಯಾನ ಜಾಥ ನಡೆಸಿದರು


ಬಿಜೆಪಿ ಅಧ್ಯಕ್ಷ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿನಡೆದ ಜಾಥಾವು ಚಾಮರಾಜೇಶ್ವರ ದೇವಾಲಯ, ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತದ ಮೂಲಕ ಸಾಗಿ, ನಂತರ ಮತ್ತೆ ಚಾಮರಾಜೇಶ್ವರ ದೇವಾಲಯದ ಆವರಣದಲ್ಲೇ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿಮಾತನಾಡಿ ಮುಖಂಡರು, ''ಕೇಂದ್ರ ಸರಕಾರ ಉತ್ತಮ ಉದ್ದೇಶ ಇಟ್ಟುಕೊಂಡು, ದೇಶದ ಭದ್ರತೆ ಹಿನ್ನೆಲೆಯಲ್ಲಿಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡುತ್ತಿದೆ . ಆದರೆ, ಈ ಬಗ್ಗೆ ಇಲ್ಲಸಲ್ಲದ ಅಪಪ್ರಚಾರವನ್ನು ಪ್ರತಿಪಕ್ಷಗಳು ಮಾಡುತ್ತಿವೆ,'' ಎಂದು ಆರೋಪಿಸಿದರು.

''ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಪೌರತ್ವ ಕಾಯಿದೆಯಿಂದ ದೇಶದ ನೈಜ ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ನುಸುಳುಕೋರರು ಮಾತ್ರ ಈ ಬಗ್ಗೆ ಭಯ ಪಡಬೇಕು. ಆದರೆ, ವಿನಾಕಾರಣ ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸ ನಡೆದಿದೆ,''ಎಂದರು.

''ದೇಶದಲ್ಲಿನಾನಾ ವರ್ಷಗಳಿಂದ ವಾಸ ಇರುವ ಭಾರತೀಯ ಮುಸ್ಲಿಮರು ಕಾಯಿದೆ ಬಗ್ಗೆ ಆತಂಕ ಪಡುವ ಅಗತ್ಯವೇ ಇಲ್ಲ. ಕಾಯಿದೆ ವಿರುದ್ಧ ಕಾಂಗ್ರೆಸ್‌ ಹುನ್ನಾರ ನಡೆಸಿ, ಇನ್ನಿಲ್ಲದ ಅಪಪ್ರಚಾರ ಮಾಡುತ್ತಿದೆ,'' ಎಂದು ಆರೋಪಿಸಿದರು.

ಕಾರ‍್ಯಕ್ರಮದಲ್ಲಿಮಾಜಿ ಸಚಿವ ವಿಜಯಶಂಕರ್‌, ಕೆ.ಆರ್‌. ಮಲ್ಲಿಕಾರ್ಜುನಪ್ಪ, ಸಿ. ಗುರುಸ್ವಾಮಿ, ಸುಂದರ್‌, ನೂರೊಂದುಶೆಟ್ಟಿ ಸೇರಿದಂತೆ ಹಲವಾರು ಮಂದಿ ಕಾರ‍್ಯಕರ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ