ಕೊಳ್ಳೇಗಾಲ: ಪೋಸ್ಕೋ ಕಾಯ್ದೆಯಡಿ ಆರೋಪಿಯಾಗಿದ್ದ ಯುವಕ ಅಕ್ಕನ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಪಟ್ಟಣದ ಭೀಮ ನಗರದಲ್ಲಿ ನಡೆದಿದೆ. ಮೈಸೂರು ಹಳೆ ಕೆಸರಿ ನಿವಾಸಿ ಕಿರಣ್(20)ಮೃತರು. ಕಳೆದ ಮೂರು ತಿಂಗಳ ಪೋಸ್ಕೋ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಯಾಗಿದ್ದ ಕಿರಣ್ ಭೀಮ ನಗರದಲ್ಲಿ ಅವರ ಅಕ್ಕ ಮಧುವಿನ ಮನೆಗೆ ಬಂದಿದ್ದ ವೇಳೆ ಮನೆಯ ತೊಲಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಈ ಸಂಬಂಧ ಮಧು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಎಸ್ಐ ಮಾಧ್ಯ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೋಸ್ಕೋ ಆರೋಪಿ ನೇಣಿಗೆ ಶರಣು
ಪೋಸ್ಕೋ ಕಾಯ್ದೆಯಡಿ ಆರೋಪಿಯಾಗಿದ್ದ ಯುವಕ ಅಕ್ಕನ ಮನೆಗೆ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಪಟ್ಟಣದ ಭೀಮ ನಗರದಲ್ಲಿ ನಡೆದಿದೆ.
Vijaya Karnataka 3 Dec 2017, 5:00 am