ಆ್ಯಪ್ನಗರ

ಸಂಸ್ಕಾರಯುತ ಬದುಕು ಮಾನವ ಕುಲಕ್ಕೆ ವಿಶಿಷ್ಟ

ಸಂಸ್ಕಾರಯುತ ಬದುಕು ಮಾನವ ಕುಲಕ್ಕೆ ವಿಶಿಷ್ಟವಾಗಿದ್ದು, ಅದು ಭಾರತದಂತ ಭವ್ಯ ಪರಂಪರೆ ಹೊಂದಿರುವ ನೆಲದಲ್ಲಿದೆ ಎಂದು ಸೇವಾಭಾರತಿ ಶಿಕ್ಷ ಣ ಸಂಸ್ಥೆಯ ಸದಸ್ಯ ರಾ. ಸತೀಶ್‌ಕುಮಾರ್‌ ತಿಳಿಸಿದರು.

Vijaya Karnataka 14 Mar 2019, 5:00 am
ಚಾಮರಾಜನಗರ : ಸಂಸ್ಕಾರಯುತ ಬದುಕು ಮಾನವ ಕುಲಕ್ಕೆ ವಿಶಿಷ್ಟವಾಗಿದ್ದು, ಅದು ಭಾರತದಂತ ಭವ್ಯ ಪರಂಪರೆ ಹೊಂದಿರುವ ನೆಲದಲ್ಲಿದೆ ಎಂದು ಸೇವಾಭಾರತಿ ಶಿಕ್ಷ ಣ ಸಂಸ್ಥೆಯ ಸದಸ್ಯ ರಾ. ಸತೀಶ್‌ಕುಮಾರ್‌ ತಿಳಿಸಿದರು.
Vijaya Karnataka Web practical life is unique to the human genus
ಸಂಸ್ಕಾರಯುತ ಬದುಕು ಮಾನವ ಕುಲಕ್ಕೆ ವಿಶಿಷ್ಟ


ರಾಮಸಮುದ್ರ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭಾರತೀಯರಾದ ನಾವು ಪ್ರತಿಯೊಂದರಲ್ಲೂ ತಾಯಿ ರೂಪವನ್ನು ಕಾಣುತ್ತೇವೆ. ನಮ್ಮ ಪೂರ್ವಿಕರು ನಮಗಾಗಿ ಕೊಟ್ಟ ಅಮೂಲ್ಯವಾದ ಕೊಡುಗೆ ಎಂದರು.

ಸೇವಾ ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲೋಕೇಶ್‌ ಮಾತನಾಡಿ, ಶಿಕ್ಷ ಣ ಪ್ರತಿಯೊಬ್ಬರ ಜೀವನದ ಬೆಳಕು, ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷ ಣ ಕೊಡಿಸಬೇಕು, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ದೇಶದ ಪರಂಪರೆಯ ಹಾಗೂ ಆಚಾರ ವಿಚಾರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ಸೇವಾ ಭಾರತಿ ಶಿಕ್ಷ ಣ ಸಂಸ್ಥೆಯ ಸದಸ್ಯ ಹಾಗು ವಕೀಲ ಕೆ.ಬಾಲಸುಬ್ರಮಣ್ಯ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ಪೋಷಕರಾದ ಲತಾ ಪುಟ್ಟರಾಜು, ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್‌, ಕಾಲೇಜು ಪ್ರದೀಪ್‌ಕುಮಾರ್‌ ದೀಕ್ಷಿತ್‌, ಹೇಮಂತಕುಮಾರ್‌, ಶಾಲಾ ಮುಖ್ಯ ಶಿಕ್ಷ ಕ ಹೇಮಂತ್‌ಕುಮಾರ್‌, ಸಹ ಶಿಕ್ಷ ಕರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ