ಆ್ಯಪ್ನಗರ

ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ.ಗೌರವಧನ ಹೆಚ್ಚಳ ಮಾಡಬೇಕು, ಆಶಾ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್‌ ರದ್ದುಪಡಿಸಬೇಕು ಸೇರಿದಂತೆ ನಾನಾ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

Vijaya Karnataka 9 Jul 2019, 5:00 am
ಚಾಮರಾಜನಗರ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ.ಗೌರವಧನ ಹೆಚ್ಚಳ ಮಾಡಬೇಕು, ಆಶಾ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್‌ ರದ್ದುಪಡಿಸಬೇಕು ಸೇರಿದಂತೆ ನಾನಾ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Vijaya Karnataka Web CHN-CHN07UM1


ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಆರೋಗ್ಯ ಸಚಿವರಿಗೆ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು 45 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 10 ವರ್ಷಗಳಿಂದ ತಾಯಿ ಮತ್ತು ಮಗುವಿನ ಮರಣವನ್ನು ತಗ್ಗಿಸುವುದು, ಸಾಂಕ್ರಾಮಿಕ ರೋಗಗಳ ಕುರಿತ ಅರಿವು, ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಆಶಾ ಸಾಫ್ಟ್‌ ವೇತನ ಮಾದರಿಯಿಂದಾಗಿ ಕಾರ್ಯಕರ್ತೆಯರು ಕಳೆದ 3 ವರ್ಷದಿಂದ ಸಾವಿರಾರು ರೂ.ಗಳ ವೇತನದಿಂದ ವಂಚಿತರಾಗಿದ್ದಾರೆ. 9 ತಿಂಗಳಿಂದ ಕೇಂದ್ರದ ಪ್ರೋತ್ಸಾಹಧನ ಎಂಸಿಟಿಎಸ್‌ನಲ್ಲಿ ದಾಖಲಾಗಿಲ್ಲ. ಆಶಾ ಸಾಫ್ಟ್‌ ಸಮರ್ಪಕವಾಗಿ ಕೆಲಸ ನಿರ್ವಹಿಸದ ಪರಿಣಾಮ ಮೂರರಿಂದ ಆರು ಸಾವಿರ ರೂ.ಗಳವರೆಗೆ ಕೆಲಸ ಮಾಡಿ, 800ರಿಂದ 2500 ರೂ. ಪ್ರೋತ್ಸಾಹಧನ ಪಡೆಯುವಂತಾಗಿದೆ. ರಾಜ್ಯ ಸರಕಾರ ನೂತನ ವೇತನ ಪಾವತಿ ವಿಧಾನದಂತೆ ಮಾಸಿಕ 3500 ರೂ.ಗೌರವಧನ ನೀಡುತ್ತಿದ್ದು, ಅದು ಕೂಡಾ ಹಲವಾರು ತಿಂಗಳಿಂದ ಬಾಕಿಯಿದೆ. ಹಗಲು ರಾತ್ರಿಯನ್ನದೇ ಕೆಲಸ ನಿರ್ವಹಣೆ ಮಾಡಿದ ಪರಿಣಾಮ ಕಾರ್ಯಕರ್ತರು ಅನಾರೋಗ್ಯಕ್ಕೀಡಾಗಿದ್ದಾರೆ. ಎಂಸಿಟಿಎಸ್‌ನಲ್ಲಿ ಸೇವೆ ಮಾಡಿದವರಿಗೆ ಆಶಾಗಳು ಎಷ್ಟು ಕೆಲಸ ನಿರ್ವಹಿಸುವರು ಅಷ್ಟೇ ನೀಡಬೇಕು, ಇದಕ್ಕೆ ಬದಲಾಗಿ ಮಾಸಿಕ 300 ರೂ.ವೇತನ ನೀಡುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ನಿರ್ದೇಶಕರು ಆದೇಶ ನೀಡಿದ್ದಾರೆ,

ಈಗ ಮಾಸಿಕ 300 ರಂತೆ 6 ತಿಂಗಳ ಮೊತ್ತ 1800 ರೂ.ಗಳನ್ನು ವಾಪಸ್‌ ನೀಡಲು ಆದೇಶ ನೀಡಿದ್ದು, ಈಗ ವಾಪಸ್‌ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಆಂಧ್ರ ಪ್ರದೇಶದ ರಾಜ್ಯ ಸರಕಾರ ಆಶಾಗಳಿಗೆ ಒಮ್ಮೆಲೆ 7 ಸಾವಿರ ರೂ. ಹೆಚ್ಚಳ ಮಾಡಿ, ಈಗ 10 ಸಾವಿರ ರೂ.ಗೌರವಧನ ನಿಗದಿ ಮಾಡಿದೆ. ಮುಖ್ಯಮಂತ್ರಿಗಳ ಭರವಸೆಯಂತೆ ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ 12 ಸಾವಿರಕ್ಕೆ ಗೌರವಧನ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಒತ್ತಾಯ.

ಹಾಗಾಗಿ ಸರಕಾರದ ವಿರೋಧಿ ನೀತಿ ಖಂಡಿಸಿ, ಜು.18ರಿಂದ ಬೆಂಗಳೂರಿನ ಫ್ರೀಡ್‌ಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮೊದಲು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಗಮನಸೆಳೆಯಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷೆ ಕವಿತಾ, ತಾಲೂಕುಅಧ್ಯಕ್ಷೆ ರಾಣಿ, ಕೊಳ್ಳೇಗಾಲಘಟಕದ ಸುಲೋಚನಾ, ಚನ್ನಂಜಮ್ಮ, ಚಾಮರಾಜನಗರ ಘಟಕದ ಲೀಲಾವತಿ, ಸರೋಜ, ಕಮಲಾಕ್ಷಿ, ಗುಂಡ್ಲುಪೇಟೆ ಘಟಕದ ಜ್ಯೋತಿಕಲಾ ಸೇರಿದಂತೆ ಜಿಲ್ಲೆಯ ನಾನಾ ಕಡೆಯ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ