ಆ್ಯಪ್ನಗರ

ಬಿರುಗಾಳಿ ಮಳೆಗೆ ಅಪಾರ ಹಾನಿ

ತಾಲೂಕಿನಲ್ಲಿ ಸೋಮವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ, ಟೊಮೆಟೋ, ಸೋಲಾರ್‌ ಬೀನ್ಸ್‌ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಲಾಗಿದ್ದಾರೆ.

Vijaya Karnataka 1 May 2019, 5:00 am
ಗುಂಡ್ಲುಪೇಟೆ: ತಾಲೂಕಿನಲ್ಲಿ ಸೋಮವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ, ಟೊಮೆಟೋ, ಸೋಲಾರ್‌ ಬೀನ್ಸ್‌ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಲಾಗಿದ್ದಾರೆ.
Vijaya Karnataka Web CHN-CHN30GPT4


ಮಳೆಯ ಕಾರಣಕ್ಕೆ ಭೂಮಿ ಸಡಿಲವಾದರೆ, ಗಾಳಿ ನೆಲಕಚ್ಚಿ ಬೀಸಿದ ಪರಿಣಾಮ ಕಟಾವಿಗೆ ಕೆಲ ದಿನಗಳು ಬಾಕಿ ಇದ್ದು, ಬೆಳವಣಿಗೆ ಹಂತದಲ್ಲಿದ್ದ ನೂರಾರು ಎಕರೆ ಬಾಳೆ ನೆಲ ಕಚ್ಚಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಮರದ ತುಂಡುಗಳನ್ನು ನೆಟ್ಟು, ಸುತ್ತಲಿಯಿಂದ ಗಿಡವನ್ನು ಮೇಲೆತ್ತಿ ಕಟ್ಟುವ ಮೂಲಕ ಬೆಳೆಸಿದ್ದ ಟೊಮೆಟೋ ಬೆಳೆಯೂ ಹಣ್ಣು, ಕಾಯಿ ಭಾರದ ಜತೆಗೆ ಗಾಳಿಯೂ ಬೀಸಿದ ಪರಿಣಾಮ ನೆಲಸಮವಾಗಿದೆ. ಸೋಲಾರ್‌ ಬೀನ್ಸ್‌ ಸಹ ಎತ್ತರಕ್ಕೆ ಹಬ್ಬಿದ್ದ ಕಾರಣ ಗಾಳಿಗೆ ಧರೆಗುರುಳಿದೆ.

ರೈತರ ಚಿಂತೆ: ಕಾಡು ಹಂದಿ ಹಾವಳಿ ಭೀತಿ ಇಲ್ಲ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ. ವರ್ಷಕಾಲ ಕಷ್ಟಪಟ್ಟರೆ ಒಂದಷ್ಟು ಆದಾಯ ಬರುತ್ತದೆ ಎಂದು ಕಷ್ಟಪಟ್ಟು ಬೆಳೆದ ಬಾಳೆ, ಅಲ್ಪಾವಧಿ ಬೆಳೆಯಾಗಿ ತರಕಾರಿ ಬೆಳೆಗಳಾದ ಟೊಮೆಟೋ ಸೋಲಾರ್‌ ಬೀನ್ಸ್‌ ಇತರೆ ತರಕಾರಿ ಬೆಳೆಗಳು ನಾಶವಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಲಾಗಿದ್ದಾರೆ. ಬಿರುಗಾಳಿಯಿಂದ ಬೆಳೆಗಳು ಕ್ಷ ಣಾರ್ಧದಲ್ಲೇ ನಾಶವಾದವು. ಈ ರೀತಿ ಆದರೆ ಮಾಡಿದ ಸಾಲ ತೀರಿಸುವುದು ಹೇಗೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂದು ರೈತರಾದ ಸಿದ್ದಪ್ಪ, ಮಹದೇವ ಸ್ವಾಮಿ, ನಾಗಪ್ಪ, ರೇವಣ್ಣ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಭೇಟಿ ಪರಿಶೀಲನೆ: ಬೆಳೆಹಾನಿ ಹಿನ್ನೆಲೆಯಲ್ಲಿ ಹಂಗಳ ಹೋಬಳಿ ಪ್ರಭಾರ ರಾಜಸ್ವ ನಿರೀಕ್ಷ ಕ ನದೀಂ ಹುಸೇನ್‌, ಗ್ರಾಮ ಲೆಕ್ಕಾಧಿಕಾರಿಗಳಾದ ವೈ.ಎನ್‌.ರಮೇಶ್‌, ಅರುಣ್‌, ಮಹದೇವಪ್ಪ, ಬಿ.ಎನ್‌. ಕೃಷ್ಣಮೂರ್ತಿ, ಚಿಕ್ಕರಾಜೇಗೌಡ, ಸಿ.ನಾಗರಾಜು, ಬಸವರಾಜು ಪೂಜಾರಿ, ಸದ್ದಾಂ ಹುಸೇನ್‌, ಭಗವಂತ ರಾಯ ತಮ್ಮ ವ್ಯಾಪ್ತಿಯ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಬೆಳೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಪರಿಹಾರಕ್ಕೆ ಒತ್ತಾಯ: ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಮನೆಗಳು ಜಖಂ ಆಗುವ ಜತೆಗೆ ಬೇರೆ ರೀತಿಯ ಹಾನಿಗಳು ಆಗಿವೆ. ಈ ನಡುವೆ ಬೆಳೆಹಾನಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆದ್ದರಿಂದ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ಮುಖಂಡರಾದ ಜಿ.ಕೆ.ಲೋಕೇಶ್‌, ಹೊನ್ನೇಗೌಡನ ಹಳ್ಳಿ ಶಿವಮಲ್ಲು, ಮಹದೇವಪ್ಪ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ