ಆ್ಯಪ್ನಗರ

ಬಂಡೀಪುರದಲ್ಲಿ ಆಲಿಕಲ್ಲು ಸಹಿತ ಮಳೆ

ಮಂಗಳವಾರ ಬೆಳಗ್ಗೆಯಿಂದ ತಾಲೂಕು ವ್ಯಾಪ್ತಿಯಲ್ಲಿ ಬಿಸಿಲ ಝಳ ಹೆಚ್ಚಿತ್ತು. ಮಧ್ಯಾಹ್ನದ ನಂತರದಲ್ಲಿ ತಾಲೂಕಿನ ದಕ್ಷಿಣ ಭಾಗಗಳಲ್ಲಿ ದಟ್ಟ ಮಳೆಮೋಡ ಕಾಣಿಸಿಕೊಂಡವು.

Vijaya Karnataka 5 Mar 2019, 8:10 pm
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಮಂಗಳವಾರವೂ ಆಲಿಕಲ್ಲು ಸಹಿತ ಮಳೆಯಾಗಿದೆ.
Vijaya Karnataka Web rain


ಮಂಗಳವಾರ ಬೆಳಗ್ಗೆಯಿಂದ ತಾಲೂಕು ವ್ಯಾಪ್ತಿಯಲ್ಲಿ ಬಿಸಿಲ ಝಳ ಹೆಚ್ಚಿತ್ತು. ಮಧ್ಯಾಹ್ನದ ನಂತರದಲ್ಲಿ ತಾಲೂಕಿನ ದಕ್ಷಿಣ ಭಾಗಗಳಲ್ಲಿ ದಟ್ಟ ಮಳೆಮೋಡ ಕಾಣಿಸಿಕೊಂಡವು.

ಸಂಜೆ ವೇಳೆಗೆ ಶಿವಪುರ, ಹುಂಡೀಪುರ, ಚೌಡಹಳ್ಳಿ, ಕೆಬ್ಬೇಪುರ, ಕಲೀಗೌಡನಹಳ್ಳಿ, ಮಗುವಿನಹಳ್ಳಿ, ಮೇಲುಕಾಮನಹಳ್ಳಿ,ಕಾರೇಮಾಳ, ಮಂಗಲ,ಜಕ್ಕಹಳ್ಳಿ, ಎಲ್ಚೆಟ್ಟಿ, ಕಣಿಯನಪುರ ಮತ್ತು ಉದ್ಯಾನದ ಕುಂದಕೆರೆ ವಲಯ ವ್ಯಾಪ್ತಿ, ಇತರೆ ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಶಿವಪುರ ಗ್ರಾಮದಲ್ಲೂ ಆಲಿಕಲ್ಲಿನ ಪ್ರಮಾಣ ಹೆಚ್ಚಿದ್ದು, ಮಳೆ ಸಂದರ್ಭ ಭಾರಿ ಶಬ್ದವಾಗುತ್ತಿತ್ತು. ರಸ್ತೆಗಳಲ್ಲಿ ಆಲಿ ಕಲ್ಲು ಚದುರಿದಂತೆ ಬಿದ್ದಿದ್ದವು ಎಂದು ಗ್ರಾಮದ ರೈತ ಮುಖಂಡ ಮಹದೇವಪ್ಪ ಪತ್ರಿಕೆಗೆ ತಿಳಿಸಿದರು.

ಒಟ್ಟಾರೆ ತಾಲೂಕಿನಲ್ಲಿ ಎರಡನೇ ದಿನವೂ ಕಾಡಂಚಿನ ಗ್ರಾಮ ಮತ್ತು ಅರಣ್ಯ ಪ್ರದೇಶದಲ್ಲಿ ಮಳೆಯಾಗುತ್ತಿರುವುದಕ್ಕೆ ಪರಿಸರ ಪ್ರಿಯರಲ್ಲಿ ಸಂತಸ ಉಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ